<p><strong>ಒಟ್ಟಾವ</strong>: ಖಾಲಿಸ್ತಾನ ಪ್ರತ್ಯೇಕತಾ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ಆರೋಪಿಗಳಾದ ಮೂವರು ಭಾರತೀಯರು ಕೆನಡಾ ನ್ಯಾಯಾಲಯದ ಮುಂದೆ ಮೊದಲ ಬಾರಿಗೆ ಖುದ್ದು ಹಾಜರಾದರು. ಈ ವೇಳೆ ಯಾವುದೇ ಸಮುದಾಯದ ಜೊತೆ ಸಂಪರ್ಕ ಹೊಂದದಂತೆ ಆರೋಪಿಗಳಿಗೆ ನ್ಯಾಯಾಲಯ ಸೂಚಿಸಿತು. </p><p>ಕರಣ್ ಬ್ರಾರ್(22), ಕಮಲ್ ಪ್ರೀತ್ ಸಿಂಗ್(22), ಕರಣ್ ಪ್ರೀತ್ ಸಿಂಗ್(28) ಅವರು ಸರ್ರೆಯಲ್ಲಿರುವ ಬ್ರಿಟಿಷ್ ಕೊಲಂಬಿಯಾ ಪ್ರಾಂತೀಯ ನ್ಯಾಯಾಲಯಕ್ಕೆ ಹಾಜರಾದರು. ಮತ್ತೊಬ್ಬ ಆರೋಪಿ ಅಮನ್ದೀಪ್ ಸಿಂಗ್(22) ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದರು.</p><p>ನ್ಯಾಯಾಲಯಕ್ಕೆ ಖುದ್ದು ಹಾಜರಾದವರು ಕೆಂಪು ಬಣ್ಣದ ಜೈಲಿನ ಉಡುಗೆಯನ್ನು ತೊಟ್ಟಿದ್ದರು. ಮೇ 10ರಂದು ಒಂಟಾರಿಯೊದಲ್ಲಿ ಬಂಧನಕ್ಕೀಡಾಗಿರುವ ಅಮನ್ದೀಪ್ ಸಿಂಗ್ ಕಸ್ಟಡಿ ಮುಂದುವರಿದಿದೆ.</p><p>ನ್ಯಾಯಾಧೀಶ ಮಾರ್ಕ್ ಜೆಟ್ಟೆ ಒಂಟರ್ಸೆಪ್ಟರ್ ಮೂಲಕ ಆರೋಪಿಗಳ ಜೊತೆ ಮಾತನಾಡಿದರು. ಬಳಿಕ, ಮುಂದಿನ ವಿಚಾರಣೆಯನ್ನು ಜೂನ್ 25ಕ್ಕೆ ಮುಂದೂಡಿದರು.</p><p>‘ಈ ಪ್ರಕರಣದಲ್ಲಿ ಮಾತ್ರ ಇಷ್ಟು ಪ್ರಮಾಣದ ಸಮುದಾಯದ ಹಿತಾಸಕ್ತಿ ಏಕೆ? ಆರೋಪಿಗಳು ನ್ಯಾಯಸಮ್ಮತ ವಿಚಾರಣೆಗೆ ಅರ್ಹರು’ಎಂದು ಕರಣ್ ಬ್ರಾರ್ ಪರ ಹಾಜರಾಗಿದ್ದ ವಕೀಲ ರಿಚರ್ಡ್ ಫೊವ್ಲರ್ ಹೇಳಿದ್ದಾರೆ.</p><p>ಆರೋಪಿಗಳು ನ್ಯಾಯಾಲಯ ಪ್ರವೇಶಕ್ಕೂ ಮುನ್ನ, ನಿಜ್ಜರ್ ಬೆಂಬಲಿಗರು ಮತ್ತು ಸಿಖ್ ಪ್ರತ್ಯೇಕತಾವಾದಿ ಹೋರಾಟಗಾರರು ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಒಟ್ಟಾವ</strong>: ಖಾಲಿಸ್ತಾನ ಪ್ರತ್ಯೇಕತಾ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ಆರೋಪಿಗಳಾದ ಮೂವರು ಭಾರತೀಯರು ಕೆನಡಾ ನ್ಯಾಯಾಲಯದ ಮುಂದೆ ಮೊದಲ ಬಾರಿಗೆ ಖುದ್ದು ಹಾಜರಾದರು. ಈ ವೇಳೆ ಯಾವುದೇ ಸಮುದಾಯದ ಜೊತೆ ಸಂಪರ್ಕ ಹೊಂದದಂತೆ ಆರೋಪಿಗಳಿಗೆ ನ್ಯಾಯಾಲಯ ಸೂಚಿಸಿತು. </p><p>ಕರಣ್ ಬ್ರಾರ್(22), ಕಮಲ್ ಪ್ರೀತ್ ಸಿಂಗ್(22), ಕರಣ್ ಪ್ರೀತ್ ಸಿಂಗ್(28) ಅವರು ಸರ್ರೆಯಲ್ಲಿರುವ ಬ್ರಿಟಿಷ್ ಕೊಲಂಬಿಯಾ ಪ್ರಾಂತೀಯ ನ್ಯಾಯಾಲಯಕ್ಕೆ ಹಾಜರಾದರು. ಮತ್ತೊಬ್ಬ ಆರೋಪಿ ಅಮನ್ದೀಪ್ ಸಿಂಗ್(22) ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದರು.</p><p>ನ್ಯಾಯಾಲಯಕ್ಕೆ ಖುದ್ದು ಹಾಜರಾದವರು ಕೆಂಪು ಬಣ್ಣದ ಜೈಲಿನ ಉಡುಗೆಯನ್ನು ತೊಟ್ಟಿದ್ದರು. ಮೇ 10ರಂದು ಒಂಟಾರಿಯೊದಲ್ಲಿ ಬಂಧನಕ್ಕೀಡಾಗಿರುವ ಅಮನ್ದೀಪ್ ಸಿಂಗ್ ಕಸ್ಟಡಿ ಮುಂದುವರಿದಿದೆ.</p><p>ನ್ಯಾಯಾಧೀಶ ಮಾರ್ಕ್ ಜೆಟ್ಟೆ ಒಂಟರ್ಸೆಪ್ಟರ್ ಮೂಲಕ ಆರೋಪಿಗಳ ಜೊತೆ ಮಾತನಾಡಿದರು. ಬಳಿಕ, ಮುಂದಿನ ವಿಚಾರಣೆಯನ್ನು ಜೂನ್ 25ಕ್ಕೆ ಮುಂದೂಡಿದರು.</p><p>‘ಈ ಪ್ರಕರಣದಲ್ಲಿ ಮಾತ್ರ ಇಷ್ಟು ಪ್ರಮಾಣದ ಸಮುದಾಯದ ಹಿತಾಸಕ್ತಿ ಏಕೆ? ಆರೋಪಿಗಳು ನ್ಯಾಯಸಮ್ಮತ ವಿಚಾರಣೆಗೆ ಅರ್ಹರು’ಎಂದು ಕರಣ್ ಬ್ರಾರ್ ಪರ ಹಾಜರಾಗಿದ್ದ ವಕೀಲ ರಿಚರ್ಡ್ ಫೊವ್ಲರ್ ಹೇಳಿದ್ದಾರೆ.</p><p>ಆರೋಪಿಗಳು ನ್ಯಾಯಾಲಯ ಪ್ರವೇಶಕ್ಕೂ ಮುನ್ನ, ನಿಜ್ಜರ್ ಬೆಂಬಲಿಗರು ಮತ್ತು ಸಿಖ್ ಪ್ರತ್ಯೇಕತಾವಾದಿ ಹೋರಾಟಗಾರರು ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>