<p>‘ಲೇ ಕೊಟ್ರ, ಸರ್ಕಾರದೋರು ನಿಗಮ, ಮಂಡಳಿ ಹಂಚಿಕಿ ಮಾಡ್ತದಾರಂತೆ, ನೀನು ಪಕ್ಷದ ಕಟ್ಟಾ ಕಾರ್ಯಕರ್ತ ಅಲ್ವ, ನೀನೂ ಹೋಗಿ ಯಾಕೆ ಯಾವುದಾರ ಬೋರ್ಡೋ ಬಳಪಾನೋ ಕೇಳ್ಬಾರ್ದು?’ ದುಬ್ಬೀರ ಕೇಳಿದ.</p>.<p>‘ಅಲ್ಲ, ಅವಕ್ಕೆಲ್ಲ ಎಮ್ಮೆಲ್ಲೆಗಳೇ ಹೊಡೆದಾಡ್ತಾ ಕುಂತಾರೆ, ಇನ್ನು ಈ ಪುಟುಗೋಸಿ ಕೊಟ್ರಂಗೆ ಬೋರ್ಡ್ ಕೊಟ್ಟುಬಿಡ್ತಾರಾ? ನೀನೊಬ್ಬ...’ ಗುಡ್ಡೆ ನಕ್ಕ.</p>.<p>ಕೊಟ್ರನಿಗೆ ಸಿಟ್ಟು ಬಂತು ‘ಲೇ ಗುಡ್ಡೆ, ನೆಟ್ಟಗೆ ಮಾತಾಡು, ಈ ಎಮ್ಮೆಲ್ಲೆಗಳನ್ನ ಗೆಲ್ಲಿಸಿದೋರು ಯಾರಲೆ? ಸರ್ಕಾರ ತಂದೋರ್ಯಾರಲೆ? ನಾನು, ನನ್ನಂಥ ಕಾರ್ಯಕರ್ತರು ತಿಳ್ಕಾ. ನ್ಯಾಯವಾಗಿ ನಮಗೇ ಕೊಡ್ಬೇಕು ಅವನ್ನೆಲ್ಲ’ ಎಂದ.</p>.<p>‘ನಿನಗೆ ಕುಡುಕರ ಕುಟುಂಬ ಅಭಿವೃದ್ಧಿ ನಿಗಮ ಅಂತ ಕೊಡಬೋದು ನೋಡಲೆ. <br />ಎಲೆಕ್ಷನ್ನಲ್ಲಿ ರೊಕ್ಕ ಇಸ್ಕಂಡು ಕುಡಿದು <br />ಮಕ್ಕಂತಿದ್ಯಲ್ಲ’ ತೆಪರೇಸಿ ಕಿಸಕ್ಕೆಂದ.</p>.<p>‘ಅಲ್ಲ, ಕುಡುಕರ ಅಭಿವೃದ್ಧಿ ಓಕೆ, ಕುಟುಂಬದ್ದು ಯಾಕೆ?’ ಮಂಜಮ್ಮನ ಪ್ರಶ್ನೆ.</p>.<p>‘ಯಾಕೆ ಅಂದ್ರೆ ಕುಡುಕರು ಗೊಟಕ್ ಅಂದ್ಮೇಲೆ ಅವರ ಕುಟುಂಬ ನೋಡ್ಕಳಾರು ಯಾರು? ಅವರಿಗೂ ಪರಿಹಾರ, ನೌಕ್ರಿ ಕೊಡ್ಬೇಕು ತಾನೆ? ಜುಜುಬಿ ಆ್ಯಕ್ಸಿಡೆಂಟ್ ಆಗಿ ಸತ್ತೋರಿಗೆಲ್ಲ ಪರಿಹಾರ ಕೊಡ್ತಾರಂತೆ, ಇನ್ನು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟೋ ಕುಡುಕರಿಗೆ ಯಾಕೆ ಪರಿಹಾರ ಕೊಡ್ಬಾರ್ದು?’ ದುಬ್ಬೀರನ ಉತ್ತರ.</p>.<p>‘ಈಗ ಸಿಎಂ, ಡಿಸಿಎಂ ಸೇರಿ ‘ಏಟಿಗೆ ಎದುರೇಟು ಮಂಡಳಿ, ಲೋಕಸಭೆ ಟಾರ್ಗೆಟ್ ನಿಗಮ’ ಅಂತ ಎರಡು ಹೊಸಾವು ಮಾಡಿದಾರಂತೆ, ನಿಂಗ್ಯಾವುದು ಬೇಕಲೆ? ಹೆಂಗೂ ಎಮ್ಮೆಲ್ಲೆಗಳನ್ನ ಗೆಲ್ಸಿದೀಯ, ಈಗ ಎಂಪಿಗಳನ್ನೂ ಗೆಲ್ಸು’ ಗುಡ್ಡೆ ಕೊಟ್ರನ್ನ ಕೇಳಿದ.</p>.<p>‘ನಂಗ್ಯಾವುದೂ ಬ್ಯಾಡ, ನಿಂಗೆ ‘ಗುಮಾನಿ’ ಅನ್ನೋ ಬೋರ್ಡ್ ಕೊಡ್ಸಾಣಾಂತಿದೀನಿ, ತಗಂತೀಯ?’</p>.<p>‘ಗುಮಾನಿನಾ? ಅಂದ್ರೆ?’</p>.<p>‘ನೀನು ಮೊದ್ಲು ಗುಡ್ಡೆ ಮಾಂಸ ಮಾರ್ತಿದ್ಯೆಲ್ಲ, ಅದ್ಕೆ ನಿಂಗೆ ‘ಗುಡ್ಡೆ ಮಾಂಸ ನಿಗಮ’ ಕೊಡ್ಸಣಾಂತ’ ಕೊಟ್ರನ ತಿರುಗೇಟಿಗೆ ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಲೇ ಕೊಟ್ರ, ಸರ್ಕಾರದೋರು ನಿಗಮ, ಮಂಡಳಿ ಹಂಚಿಕಿ ಮಾಡ್ತದಾರಂತೆ, ನೀನು ಪಕ್ಷದ ಕಟ್ಟಾ ಕಾರ್ಯಕರ್ತ ಅಲ್ವ, ನೀನೂ ಹೋಗಿ ಯಾಕೆ ಯಾವುದಾರ ಬೋರ್ಡೋ ಬಳಪಾನೋ ಕೇಳ್ಬಾರ್ದು?’ ದುಬ್ಬೀರ ಕೇಳಿದ.</p>.<p>‘ಅಲ್ಲ, ಅವಕ್ಕೆಲ್ಲ ಎಮ್ಮೆಲ್ಲೆಗಳೇ ಹೊಡೆದಾಡ್ತಾ ಕುಂತಾರೆ, ಇನ್ನು ಈ ಪುಟುಗೋಸಿ ಕೊಟ್ರಂಗೆ ಬೋರ್ಡ್ ಕೊಟ್ಟುಬಿಡ್ತಾರಾ? ನೀನೊಬ್ಬ...’ ಗುಡ್ಡೆ ನಕ್ಕ.</p>.<p>ಕೊಟ್ರನಿಗೆ ಸಿಟ್ಟು ಬಂತು ‘ಲೇ ಗುಡ್ಡೆ, ನೆಟ್ಟಗೆ ಮಾತಾಡು, ಈ ಎಮ್ಮೆಲ್ಲೆಗಳನ್ನ ಗೆಲ್ಲಿಸಿದೋರು ಯಾರಲೆ? ಸರ್ಕಾರ ತಂದೋರ್ಯಾರಲೆ? ನಾನು, ನನ್ನಂಥ ಕಾರ್ಯಕರ್ತರು ತಿಳ್ಕಾ. ನ್ಯಾಯವಾಗಿ ನಮಗೇ ಕೊಡ್ಬೇಕು ಅವನ್ನೆಲ್ಲ’ ಎಂದ.</p>.<p>‘ನಿನಗೆ ಕುಡುಕರ ಕುಟುಂಬ ಅಭಿವೃದ್ಧಿ ನಿಗಮ ಅಂತ ಕೊಡಬೋದು ನೋಡಲೆ. <br />ಎಲೆಕ್ಷನ್ನಲ್ಲಿ ರೊಕ್ಕ ಇಸ್ಕಂಡು ಕುಡಿದು <br />ಮಕ್ಕಂತಿದ್ಯಲ್ಲ’ ತೆಪರೇಸಿ ಕಿಸಕ್ಕೆಂದ.</p>.<p>‘ಅಲ್ಲ, ಕುಡುಕರ ಅಭಿವೃದ್ಧಿ ಓಕೆ, ಕುಟುಂಬದ್ದು ಯಾಕೆ?’ ಮಂಜಮ್ಮನ ಪ್ರಶ್ನೆ.</p>.<p>‘ಯಾಕೆ ಅಂದ್ರೆ ಕುಡುಕರು ಗೊಟಕ್ ಅಂದ್ಮೇಲೆ ಅವರ ಕುಟುಂಬ ನೋಡ್ಕಳಾರು ಯಾರು? ಅವರಿಗೂ ಪರಿಹಾರ, ನೌಕ್ರಿ ಕೊಡ್ಬೇಕು ತಾನೆ? ಜುಜುಬಿ ಆ್ಯಕ್ಸಿಡೆಂಟ್ ಆಗಿ ಸತ್ತೋರಿಗೆಲ್ಲ ಪರಿಹಾರ ಕೊಡ್ತಾರಂತೆ, ಇನ್ನು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟೋ ಕುಡುಕರಿಗೆ ಯಾಕೆ ಪರಿಹಾರ ಕೊಡ್ಬಾರ್ದು?’ ದುಬ್ಬೀರನ ಉತ್ತರ.</p>.<p>‘ಈಗ ಸಿಎಂ, ಡಿಸಿಎಂ ಸೇರಿ ‘ಏಟಿಗೆ ಎದುರೇಟು ಮಂಡಳಿ, ಲೋಕಸಭೆ ಟಾರ್ಗೆಟ್ ನಿಗಮ’ ಅಂತ ಎರಡು ಹೊಸಾವು ಮಾಡಿದಾರಂತೆ, ನಿಂಗ್ಯಾವುದು ಬೇಕಲೆ? ಹೆಂಗೂ ಎಮ್ಮೆಲ್ಲೆಗಳನ್ನ ಗೆಲ್ಸಿದೀಯ, ಈಗ ಎಂಪಿಗಳನ್ನೂ ಗೆಲ್ಸು’ ಗುಡ್ಡೆ ಕೊಟ್ರನ್ನ ಕೇಳಿದ.</p>.<p>‘ನಂಗ್ಯಾವುದೂ ಬ್ಯಾಡ, ನಿಂಗೆ ‘ಗುಮಾನಿ’ ಅನ್ನೋ ಬೋರ್ಡ್ ಕೊಡ್ಸಾಣಾಂತಿದೀನಿ, ತಗಂತೀಯ?’</p>.<p>‘ಗುಮಾನಿನಾ? ಅಂದ್ರೆ?’</p>.<p>‘ನೀನು ಮೊದ್ಲು ಗುಡ್ಡೆ ಮಾಂಸ ಮಾರ್ತಿದ್ಯೆಲ್ಲ, ಅದ್ಕೆ ನಿಂಗೆ ‘ಗುಡ್ಡೆ ಮಾಂಸ ನಿಗಮ’ ಕೊಡ್ಸಣಾಂತ’ ಕೊಟ್ರನ ತಿರುಗೇಟಿಗೆ ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>