<p><strong>ಬೆಂಗಳೂರು</strong>: ಬೌಲರ್ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ ಕರ್ನಾಟಕ ತಂಡವು ರಾಯಪುರದಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ಮಹಿಳೆಯರ ಟಿ20 ಕ್ರಿಕೆಟ್ ಟ್ರೋಫಿಯಲ್ಲಿ 7 ವಿಕೆಟ್ಗಳಿಂದ ಪಾಂಡಿಚೇರಿ ತಂಡವನ್ನು ಮಣಿಸಿತು.</p>.<p>ಮೊದಲು ಬ್ಯಾಟಿಂಗ್ ಮಾಡಿದ ಪಾಂಡಿಚೇರಿ 20 ಓವರ್ಗಳಲ್ಲಿ 9 ವಿಕೆಟ್ಗೆ 77 ರನ್ ಗಳಿಸಿತು. ಆರಂಭಿಕ ಆಟಗಾರ್ತಿಯರಾದ ನಾಯಕಿ ಯುವಶ್ರೀ (29; 26ಎ) ಮತ್ತು ಈ.ಕವಿಶಾ (23; 28ಎ) ಅವರನ್ನು ಹೊರತುಪಡಿಸಿ ಉಳಿದವರು ಒಂದಂಕಿ ದಾಟಲಿಲ್ಲ. ಕರ್ನಾಟಕದ ಪರ ಎಂ. ಪೂಜಾ ಕುಮಾರಿ 15 ರನ್ಗೆ 3 ವಿಕೆಟ್ ಪಡೆದು ಮಿಂಚಿದರು. ಅದಿತಿ ರಾಜೇಶ್, ಕೆ. ಚಂದಾಸಿ, ಅನನ್ಯಾ ಹೆಗಡೆ ತಲಾ ಒಂದು ವಿಕೆಟ್ ಪಡೆದರು.</p>.<p>ಸಾಧಾರಣ ರನ್ ಬೆನ್ನಟ್ಟಿದ ಕರ್ನಾಟಕ ತಂಡ 13.3 ಓವರ್ಗಳಲ್ಲಿ 3 ವಿಕೆಟ್ಗೆ 80 ರನ್ ಗಳಿಸಿತು. ಆರಂಭಿಕ ಆಟಗಾರ್ತಿಯರಾದ ನಾಯಕಿ ವೃಂದಾ ದಿನೇಶ್ (12, 10ಎ), ನಿಖಿ ಪ್ರಸಾದ್ (15;11ಎ) ಬೇಗನೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಜಿ.ಆರ್. ಪ್ರೇರಣಾ (10;22ಎ) ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಳಿಕ ರೋಶನಿ ಕಿರಣ್ (ಔಟಾಗದೆ 21;27ಎ) ಮತ್ತು ಶಿಶಿರಾ ಎ ಗೌಡ (ಔಟಾಗದೆ 16;12ಎ) ಅವರು ಗೆಲುವಿನ ಗುರಿ ದಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೌಲರ್ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ ಕರ್ನಾಟಕ ತಂಡವು ರಾಯಪುರದಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ಮಹಿಳೆಯರ ಟಿ20 ಕ್ರಿಕೆಟ್ ಟ್ರೋಫಿಯಲ್ಲಿ 7 ವಿಕೆಟ್ಗಳಿಂದ ಪಾಂಡಿಚೇರಿ ತಂಡವನ್ನು ಮಣಿಸಿತು.</p>.<p>ಮೊದಲು ಬ್ಯಾಟಿಂಗ್ ಮಾಡಿದ ಪಾಂಡಿಚೇರಿ 20 ಓವರ್ಗಳಲ್ಲಿ 9 ವಿಕೆಟ್ಗೆ 77 ರನ್ ಗಳಿಸಿತು. ಆರಂಭಿಕ ಆಟಗಾರ್ತಿಯರಾದ ನಾಯಕಿ ಯುವಶ್ರೀ (29; 26ಎ) ಮತ್ತು ಈ.ಕವಿಶಾ (23; 28ಎ) ಅವರನ್ನು ಹೊರತುಪಡಿಸಿ ಉಳಿದವರು ಒಂದಂಕಿ ದಾಟಲಿಲ್ಲ. ಕರ್ನಾಟಕದ ಪರ ಎಂ. ಪೂಜಾ ಕುಮಾರಿ 15 ರನ್ಗೆ 3 ವಿಕೆಟ್ ಪಡೆದು ಮಿಂಚಿದರು. ಅದಿತಿ ರಾಜೇಶ್, ಕೆ. ಚಂದಾಸಿ, ಅನನ್ಯಾ ಹೆಗಡೆ ತಲಾ ಒಂದು ವಿಕೆಟ್ ಪಡೆದರು.</p>.<p>ಸಾಧಾರಣ ರನ್ ಬೆನ್ನಟ್ಟಿದ ಕರ್ನಾಟಕ ತಂಡ 13.3 ಓವರ್ಗಳಲ್ಲಿ 3 ವಿಕೆಟ್ಗೆ 80 ರನ್ ಗಳಿಸಿತು. ಆರಂಭಿಕ ಆಟಗಾರ್ತಿಯರಾದ ನಾಯಕಿ ವೃಂದಾ ದಿನೇಶ್ (12, 10ಎ), ನಿಖಿ ಪ್ರಸಾದ್ (15;11ಎ) ಬೇಗನೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಜಿ.ಆರ್. ಪ್ರೇರಣಾ (10;22ಎ) ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಳಿಕ ರೋಶನಿ ಕಿರಣ್ (ಔಟಾಗದೆ 21;27ಎ) ಮತ್ತು ಶಿಶಿರಾ ಎ ಗೌಡ (ಔಟಾಗದೆ 16;12ಎ) ಅವರು ಗೆಲುವಿನ ಗುರಿ ದಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>