<p><strong>ನವದೆಹಲಿ</strong>: ಗಿಗ್ ಕಾರ್ಮಿಕರು, ಕಟ್ಟಡ, ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೇವೆ ವಿಸ್ತರಿಸಲು ನಿರ್ಧರಿಸಿರುವ ಕೇಂದ್ರ, ಈ ವರ್ಗದ ಕಾರ್ಮಿಕರ ವಿವರ ಸಂಗ್ರಹಿಸಲು ಪೋರ್ಟಲ್ ಆರಂಭಿಸಲು ತೀರ್ಮಾನಿಸಿದೆ.</p>.<p>ಪೋರ್ಟಲ್ ಮೂಲಕ ಈ ವರ್ಗದ ಕಾರ್ಮಿಕರ ಸಮಗ್ರ ವಿವರ ಸಂಗ್ರಹಿಸಲಾಗುವುದು. ಆರೋಗ್ಯ ಸೇವೆ, ಸುಲಭ ಸಾಲ ವ್ಯವಸ್ಥೆ, ಆಹಾರ ಮತ್ತಿತರ ಸೇವೆಗಳನ್ನು ಒದಗಿಸಲಾಗುವುದು ಎಂದರು.</p>.<p>ಉಬರ್, ಒಲಾ, ಸ್ವಿಗ್ಗಿ, ಜ್ಯೊಮಾಟೊ, ವಿವಿಧ ಇ–ಕಾಮರ್ಸ್ ವೇದಿಕೆಗಳಲ್ಲಿನ ಕಾರ್ಮಿಕರನ್ನು ಗಿಗ್ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ. ಇವರು ಸದ್ಯ ಭವಿಷ್ಯ ನಿಧಿ, ಗುಂಪು ವಿಮೆ, ಪಿಂಚಣಿ ಸೌಲಭ್ಯ ವಂಚಿತರಾಗಿದ್ದಾರೆ.</p>.<p>ಭಾರತದಲ್ಲಿ ಕಾರ್ಮಿಕರ ಒಟ್ಟು ಬಲ 50 ಕೋಟಿ ಇದ್ದು, ಇವರರಲ್ಲಿ ಕೃಷಿ ಕೂಲಿ, ಗ್ರಾಮೀಣ ನೌಕರರು ಸೇರಿ 40 ಕೋಟಿ ಅಸಂಘಟಿತ ವಲಯದಲ್ಲಿಯೇ ಇದ್ದಾರೆ.</p>.<p>ಯುವಜನರಿಗೆ ಅವಕಾಶ ಕಲ್ಪಿಸಲು ಅಪ್ರೆಂಟಿಸ್ಷಿಪ್ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಿ, 5 ವರ್ಷಗಳಲ್ಲಿ ₹ 50 ಸಾವಿರ ಕೋಟಿ ಹಂಚಿಕೆ ಮಾಡಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಗಿಗ್ ಕಾರ್ಮಿಕರು, ಕಟ್ಟಡ, ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೇವೆ ವಿಸ್ತರಿಸಲು ನಿರ್ಧರಿಸಿರುವ ಕೇಂದ್ರ, ಈ ವರ್ಗದ ಕಾರ್ಮಿಕರ ವಿವರ ಸಂಗ್ರಹಿಸಲು ಪೋರ್ಟಲ್ ಆರಂಭಿಸಲು ತೀರ್ಮಾನಿಸಿದೆ.</p>.<p>ಪೋರ್ಟಲ್ ಮೂಲಕ ಈ ವರ್ಗದ ಕಾರ್ಮಿಕರ ಸಮಗ್ರ ವಿವರ ಸಂಗ್ರಹಿಸಲಾಗುವುದು. ಆರೋಗ್ಯ ಸೇವೆ, ಸುಲಭ ಸಾಲ ವ್ಯವಸ್ಥೆ, ಆಹಾರ ಮತ್ತಿತರ ಸೇವೆಗಳನ್ನು ಒದಗಿಸಲಾಗುವುದು ಎಂದರು.</p>.<p>ಉಬರ್, ಒಲಾ, ಸ್ವಿಗ್ಗಿ, ಜ್ಯೊಮಾಟೊ, ವಿವಿಧ ಇ–ಕಾಮರ್ಸ್ ವೇದಿಕೆಗಳಲ್ಲಿನ ಕಾರ್ಮಿಕರನ್ನು ಗಿಗ್ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ. ಇವರು ಸದ್ಯ ಭವಿಷ್ಯ ನಿಧಿ, ಗುಂಪು ವಿಮೆ, ಪಿಂಚಣಿ ಸೌಲಭ್ಯ ವಂಚಿತರಾಗಿದ್ದಾರೆ.</p>.<p>ಭಾರತದಲ್ಲಿ ಕಾರ್ಮಿಕರ ಒಟ್ಟು ಬಲ 50 ಕೋಟಿ ಇದ್ದು, ಇವರರಲ್ಲಿ ಕೃಷಿ ಕೂಲಿ, ಗ್ರಾಮೀಣ ನೌಕರರು ಸೇರಿ 40 ಕೋಟಿ ಅಸಂಘಟಿತ ವಲಯದಲ್ಲಿಯೇ ಇದ್ದಾರೆ.</p>.<p>ಯುವಜನರಿಗೆ ಅವಕಾಶ ಕಲ್ಪಿಸಲು ಅಪ್ರೆಂಟಿಸ್ಷಿಪ್ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಿ, 5 ವರ್ಷಗಳಲ್ಲಿ ₹ 50 ಸಾವಿರ ಕೋಟಿ ಹಂಚಿಕೆ ಮಾಡಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>