<p><strong>ಬೆಂಗಳೂರು:</strong> ಕೃಷಿ ಉತ್ಪಾದಕರ ಸಂಸ್ಥೆಗಳ (ಎಫ್ಪಿಒ) ಸಬಲೀಕರಣಕ್ಕಾಗಿ ಕೃಷಿ ಕಲ್ಪ ಸಂಸ್ಥೆ ಹಾಗೂ ನಬಾರ್ಡ್ನಿಂದ ಇತ್ತೀಚೆಗೆ ದೇಶದ ಮೊದಲ ಆಕ್ಸಲರೇಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. </p>.<p>ಎಫ್ಪಿಒಗಳು ಸುಸ್ಥಿರ ಗ್ರಾಮೀಣ ಉದ್ಯಮಗಳಾಗಿ ರೂಪುಗೊಳ್ಳಲು ಈ ಕಾರ್ಯಕ್ರಮ ನೆರವಾಗಲಿದೆ. ಇದು ಕೃಷಿ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಗೆ ಸಹಕಾರಿಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ. </p>.<p>ನಗರದ ಜೆ.ಪಿ. ನಗರದಲ್ಲಿರುವ ಆರ್.ವಿ. ಡೆಂಟಲ್ ಕ್ಯಾಂಪಸ್ನಲ್ಲಿ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಅಹುಜಾ, ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ., ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಹಾಗೂ ಅತೀಕ್ ಎಲ್.ಕೆ. ಅವರು ಈ ಆಕ್ಸಲರೇಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.</p>.<p>ಎಫ್ಪಿಒಗಳಿಗೆ ಪರಿಣಾಮಕಾರಿಯಾಗಿ ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಬಳಸಿಕೊಳ್ಳಲು ಸನ್ನದ್ಧಗೊಳಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಸದಸ್ಯ ರೈತರಿಗೆ ಹೆಚ್ಚುವರಿ ಆದಾಯ ಗಳಿಸಲು ಆದ್ಯತೆ ನೀಡುತ್ತದೆ.</p>.<p>‘ಎಫ್ಪಿಒಗಳು ಯಶಸ್ವಿ ಉದ್ಯಮಗಳಾಗಿ ಮುನ್ನಡೆಯಲು ಅಗತ್ಯವಿರುವ ಕೌಶಲಗಳ ನಿರ್ಮಾಣಕ್ಕೆ ಒತ್ತು ನೀಡಲಿದೆ. ಅವುಗಳ ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸುವ ಜೊತೆಗೆ ಲಾಭದಾಯಕದತ್ತ ಕೊಂಡೊಯ್ಯಲು ನೆರವಾಗಲಿದೆ’ ಎಂದು ಕೃಷಿ ಕಲ್ಪ ಸಂಸ್ತೆಯ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ತಿಳಿಸಿದ್ದಾರೆ.</p>.<p>ಕೃಷಿ ಕಲ್ಪ ಸಂಸ್ಥೆಯು ಸುಸ್ಥಿರ ಮತ್ತು ಗ್ರಾಮೀಣ ಉದ್ಯಮಗಳ ಪರಿವರ್ತನೆಗೆ ವೇಗ ತುಂಬುವ ಗುರಿ ಹೊಂದಿದೆ. ಇದಕ್ಕೆ ನಬಾರ್ಡ್ ನೆರವು ನೀಡುತ್ತಿದೆ. ಕೃಷಿ ವ್ಯವಸ್ಥೆಯಲ್ಲಿ ಸದೃಢತೆ, ಸಂಪತ್ತು ಮತ್ತು ಸುಸ್ಥಿರತೆ ತರುವ ಮೂಲಕ ಸಕಾರಾತ್ಮಕ ಬದಲಾವಣೆ ತರಲು ಸಜ್ಜಾಗಿದ್ದೇವೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೃಷಿ ಉತ್ಪಾದಕರ ಸಂಸ್ಥೆಗಳ (ಎಫ್ಪಿಒ) ಸಬಲೀಕರಣಕ್ಕಾಗಿ ಕೃಷಿ ಕಲ್ಪ ಸಂಸ್ಥೆ ಹಾಗೂ ನಬಾರ್ಡ್ನಿಂದ ಇತ್ತೀಚೆಗೆ ದೇಶದ ಮೊದಲ ಆಕ್ಸಲರೇಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. </p>.<p>ಎಫ್ಪಿಒಗಳು ಸುಸ್ಥಿರ ಗ್ರಾಮೀಣ ಉದ್ಯಮಗಳಾಗಿ ರೂಪುಗೊಳ್ಳಲು ಈ ಕಾರ್ಯಕ್ರಮ ನೆರವಾಗಲಿದೆ. ಇದು ಕೃಷಿ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಗೆ ಸಹಕಾರಿಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ. </p>.<p>ನಗರದ ಜೆ.ಪಿ. ನಗರದಲ್ಲಿರುವ ಆರ್.ವಿ. ಡೆಂಟಲ್ ಕ್ಯಾಂಪಸ್ನಲ್ಲಿ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಅಹುಜಾ, ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ., ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಹಾಗೂ ಅತೀಕ್ ಎಲ್.ಕೆ. ಅವರು ಈ ಆಕ್ಸಲರೇಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.</p>.<p>ಎಫ್ಪಿಒಗಳಿಗೆ ಪರಿಣಾಮಕಾರಿಯಾಗಿ ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಬಳಸಿಕೊಳ್ಳಲು ಸನ್ನದ್ಧಗೊಳಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಸದಸ್ಯ ರೈತರಿಗೆ ಹೆಚ್ಚುವರಿ ಆದಾಯ ಗಳಿಸಲು ಆದ್ಯತೆ ನೀಡುತ್ತದೆ.</p>.<p>‘ಎಫ್ಪಿಒಗಳು ಯಶಸ್ವಿ ಉದ್ಯಮಗಳಾಗಿ ಮುನ್ನಡೆಯಲು ಅಗತ್ಯವಿರುವ ಕೌಶಲಗಳ ನಿರ್ಮಾಣಕ್ಕೆ ಒತ್ತು ನೀಡಲಿದೆ. ಅವುಗಳ ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸುವ ಜೊತೆಗೆ ಲಾಭದಾಯಕದತ್ತ ಕೊಂಡೊಯ್ಯಲು ನೆರವಾಗಲಿದೆ’ ಎಂದು ಕೃಷಿ ಕಲ್ಪ ಸಂಸ್ತೆಯ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ತಿಳಿಸಿದ್ದಾರೆ.</p>.<p>ಕೃಷಿ ಕಲ್ಪ ಸಂಸ್ಥೆಯು ಸುಸ್ಥಿರ ಮತ್ತು ಗ್ರಾಮೀಣ ಉದ್ಯಮಗಳ ಪರಿವರ್ತನೆಗೆ ವೇಗ ತುಂಬುವ ಗುರಿ ಹೊಂದಿದೆ. ಇದಕ್ಕೆ ನಬಾರ್ಡ್ ನೆರವು ನೀಡುತ್ತಿದೆ. ಕೃಷಿ ವ್ಯವಸ್ಥೆಯಲ್ಲಿ ಸದೃಢತೆ, ಸಂಪತ್ತು ಮತ್ತು ಸುಸ್ಥಿರತೆ ತರುವ ಮೂಲಕ ಸಕಾರಾತ್ಮಕ ಬದಲಾವಣೆ ತರಲು ಸಜ್ಜಾಗಿದ್ದೇವೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>