<p><strong>ನವದೆಹಲಿ</strong>: ‘ಭಾರತವು ಬಂಡವಾಳ ಹೂಡಿಕೆಯ ತಾಣವಾಗಿದೆ. ಹಾಗಾಗಿ, ವಿಶ್ವದಾದ್ಯಂತ ಹೂಡಿಕೆದಾರರು ದೇಶದತ್ತ ನೋಟ ನೆಟ್ಟಿದ್ದಾರೆ. ವಿಕಸಿತ ಭಾರತದ ಗುರಿ ಸಾಧನೆಯ ದೃಷ್ಟಿಯಿಂದ ದೇಶೀಯ ಕೈಗಾರಿಕಾ ವಲಯವು ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.</p>.<p>ಭಾರತೀಯ ಕೈಗಾರಿಕಾ ಒಕ್ಕೂಟದಿಂದ ಮಂಗಳವಾರ ‘ವಿಕಸಿತ ಭಾರತದತ್ತ ಪಯಣ’ ಶೀರ್ಷಿಕೆಯಡಿ ಕೇಂದ್ರ ಬಜೆಟ್ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸದ್ಯ ಭಾರತವು ಜಾಗತಿಕ ಮಟ್ಟದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮುಂದಿನ ಐದು ವರ್ಷಗಳಲ್ಲಿ ಮೂರನೇ ಸ್ಥಾನಕ್ಕೇರುವ ಹಾದಿಯಲ್ಲಿದೆ’ ಎಂದರು. </p>.<p>ಜಾಗತಿಕ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನೀತಿಗಳು, ಬದ್ಧತೆ ಹಾಗೂ ಹೂಡಿಕೆಯು ತಳಹದಿಯಾಗಲಿದೆ. ಹಾಗಾಗಿ, ಜಾಗತಿಕ ಹೂಡಿಕೆದಾರರು ಭಾರತದತ್ತ ಬರುತ್ತಿದ್ದಾರೆ. ನಮ್ಮ ದೇಶದ ಮೇಲೆ ಅವರಿಗೆ ಧನಾತ್ಮಕ ಒಲವಿದೆ. ಇಂತಹ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದು ಹೇಳಿದರು.</p>.<p>ಜಾಗತಿಕ ಬಿಕ್ಕಟ್ಟಿನಿಂದಾಗಿ ವಿಶ್ವದ ಹಲವು ದೇಶಗಳಲ್ಲಿ ಹಣದುಬ್ಬರ ಏರಿಕೆಯಾಗುತ್ತಿದೆ. ಇದರಿಂದ ಆರ್ಥಿಕತೆ ಬೆಳವಣಿಗೆ ಕುಂಠಿತವಾಗುತ್ತಿದೆ. ಇದರ ನಡುವೆಯೇ ಭಾರತದ ಆರ್ಥಿಕತೆಯು ಏರುಗತಿಯಲ್ಲಿದೆ ಎಂದು ತಿಳಿಸಿದರು.</p>.<p>ದೇಶದಲ್ಲಿ 1.40 ಲಕ್ಷ ನವೋದ್ಯಮಗಳಿವೆ. ಲಕ್ಷಾಂತರ ಯುವಜನರಿಗೆ ಕೆಲಸ ನೀಡಿವೆ. ಮುದ್ರಾ ಯೋಜನೆ, ಸ್ಟಾರ್ಟ್ಅಪ್ ಇಂಡಿಯಾ ಹಾಗೂ ಸ್ಟಾರ್ಟ್ಅಪ್ ಇಂಡಿಯಾ ಯೋಜನೆಯಡಿ 8 ಕೋಟಿಗೂ ಹೆಚ್ಚು ಜನರು ಹೊಸದಾಗಿ ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಭಾರತವು ಬಂಡವಾಳ ಹೂಡಿಕೆಯ ತಾಣವಾಗಿದೆ. ಹಾಗಾಗಿ, ವಿಶ್ವದಾದ್ಯಂತ ಹೂಡಿಕೆದಾರರು ದೇಶದತ್ತ ನೋಟ ನೆಟ್ಟಿದ್ದಾರೆ. ವಿಕಸಿತ ಭಾರತದ ಗುರಿ ಸಾಧನೆಯ ದೃಷ್ಟಿಯಿಂದ ದೇಶೀಯ ಕೈಗಾರಿಕಾ ವಲಯವು ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.</p>.<p>ಭಾರತೀಯ ಕೈಗಾರಿಕಾ ಒಕ್ಕೂಟದಿಂದ ಮಂಗಳವಾರ ‘ವಿಕಸಿತ ಭಾರತದತ್ತ ಪಯಣ’ ಶೀರ್ಷಿಕೆಯಡಿ ಕೇಂದ್ರ ಬಜೆಟ್ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸದ್ಯ ಭಾರತವು ಜಾಗತಿಕ ಮಟ್ಟದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮುಂದಿನ ಐದು ವರ್ಷಗಳಲ್ಲಿ ಮೂರನೇ ಸ್ಥಾನಕ್ಕೇರುವ ಹಾದಿಯಲ್ಲಿದೆ’ ಎಂದರು. </p>.<p>ಜಾಗತಿಕ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನೀತಿಗಳು, ಬದ್ಧತೆ ಹಾಗೂ ಹೂಡಿಕೆಯು ತಳಹದಿಯಾಗಲಿದೆ. ಹಾಗಾಗಿ, ಜಾಗತಿಕ ಹೂಡಿಕೆದಾರರು ಭಾರತದತ್ತ ಬರುತ್ತಿದ್ದಾರೆ. ನಮ್ಮ ದೇಶದ ಮೇಲೆ ಅವರಿಗೆ ಧನಾತ್ಮಕ ಒಲವಿದೆ. ಇಂತಹ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದು ಹೇಳಿದರು.</p>.<p>ಜಾಗತಿಕ ಬಿಕ್ಕಟ್ಟಿನಿಂದಾಗಿ ವಿಶ್ವದ ಹಲವು ದೇಶಗಳಲ್ಲಿ ಹಣದುಬ್ಬರ ಏರಿಕೆಯಾಗುತ್ತಿದೆ. ಇದರಿಂದ ಆರ್ಥಿಕತೆ ಬೆಳವಣಿಗೆ ಕುಂಠಿತವಾಗುತ್ತಿದೆ. ಇದರ ನಡುವೆಯೇ ಭಾರತದ ಆರ್ಥಿಕತೆಯು ಏರುಗತಿಯಲ್ಲಿದೆ ಎಂದು ತಿಳಿಸಿದರು.</p>.<p>ದೇಶದಲ್ಲಿ 1.40 ಲಕ್ಷ ನವೋದ್ಯಮಗಳಿವೆ. ಲಕ್ಷಾಂತರ ಯುವಜನರಿಗೆ ಕೆಲಸ ನೀಡಿವೆ. ಮುದ್ರಾ ಯೋಜನೆ, ಸ್ಟಾರ್ಟ್ಅಪ್ ಇಂಡಿಯಾ ಹಾಗೂ ಸ್ಟಾರ್ಟ್ಅಪ್ ಇಂಡಿಯಾ ಯೋಜನೆಯಡಿ 8 ಕೋಟಿಗೂ ಹೆಚ್ಚು ಜನರು ಹೊಸದಾಗಿ ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>