<p><strong>ನವದೆಹಲಿ</strong>: ನವೋದ್ಯಮಗಳಲ್ಲಿ (ಸ್ಟಾರ್ಟ್ಅಪ್) ಬಂಡವಾಳ ತೊಡಗಿಸುವ ಹೂಡಿಕೆದಾರರ (ಏಂಜೆಲ್ ಇನ್ವೆಸ್ಟರ್ಸ್) ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು (ಏಂಜೆಲ್ ಟ್ಯಾಕ್ಸ್) ಕೇಂದ್ರ ಸರ್ಕಾರ ರದ್ದುಪಡಿಸಿದೆ. ದೇಶದಲ್ಲಿ ನವೋದ್ಯಮಗಳಿಗೆ ಉತ್ತೇಜನ ನೀಡುವುದು ಹಾಗೂ ಎಲ್ಲಾ ವರ್ಗದ ಹೂಡಿಕೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ. </p>.<p>ಷೇರುಪೇಟೆಗಳಲ್ಲಿ ನೋಂದಾಯಿತ ಆಗಿರದ ಕಂಪನಿಗಳು ಅಥವಾ ನವೋದ್ಯಮಗಳಲ್ಲಿ ವಿದೇಶಗಳಿಂದ ಆಗುವ ಹೂಡಿಕೆಗೆ ಏಂಜೆಲ್ ತೆರಿಗೆ ಅನ್ವಯವಾಗುತಿತ್ತು. ಬಜೆಟ್ಗೂ ಮುನ್ನವೇ ಈ ತೆರಿಗೆ ರದ್ದುಪಡಿಸುವಂತೆ ಡಿಡಿಐಐಟಿಯು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.</p>.<p>‘ದೇಶದಲ್ಲಿ ನವೋದ್ಯಮಗಳಿಗೆ ಮತ್ತಷ್ಟು ಬಲ ನೀಡಬೇಕಿದೆ. ಹೂಡಿಕೆದಾರರಿಗೆ ಉತ್ಸಾಹ ತುಂಬಿ ಅವರ ಅನ್ಷೇಷಣೆಗಳಿಗೆ ಬೆಂಬಲ ನೀಡಲು ಈ ತೆರಿಗೆಯನ್ನು ರದ್ದುಪಡಿಸಲಾಗಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.</p>.<p>ಪ್ರಸ್ತುತ ದೇಶದಲ್ಲಿ 1.17 ಲಕ್ಷಕ್ಕೂ ಹೆಚ್ಚು ನವೋದ್ಯಮಗಳು ಸರ್ಕಾರದಲ್ಲಿ ನೋಂದಣಿಯಾಗಿವೆ. ಸರ್ಕಾರ ರೂಪಿಸಿರುವ ನವೋದ್ಯಮ ನೀತಿಗೆ ಅನುಗುಣವಾಗಿ ಇವುಗಳಿಗೆ ಪ್ರೋತ್ಸಾಹಧನ ದೊರೆಯುತ್ತದೆ. </p>.<p>‘ಸರ್ಕಾರದ ಈ ನಿರ್ಧಾರವು ಸಕಾರಾತ್ಮಕವಾಗಿದೆ. ಇದು ಹೂಡಿಕೆದಾರರಿಗೆ ತೆರಿಗೆ ಉಳಿತಾಯಕ್ಕಷ್ಟೇ ಅನುಕೂಲ ಕಲ್ಪಿಸುವುದಿಲ್ಲ. ದೇಶೀಯ ನವೋದ್ಯಮಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೂ ಅವಕಾಶ ಕಲ್ಪಿಸಲಿದೆ’ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಸುಮಿತ್ ಸಿಂಘಾನಿಯ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ನವೋದ್ಯಮಗಳಲ್ಲಿ (ಸ್ಟಾರ್ಟ್ಅಪ್) ಬಂಡವಾಳ ತೊಡಗಿಸುವ ಹೂಡಿಕೆದಾರರ (ಏಂಜೆಲ್ ಇನ್ವೆಸ್ಟರ್ಸ್) ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು (ಏಂಜೆಲ್ ಟ್ಯಾಕ್ಸ್) ಕೇಂದ್ರ ಸರ್ಕಾರ ರದ್ದುಪಡಿಸಿದೆ. ದೇಶದಲ್ಲಿ ನವೋದ್ಯಮಗಳಿಗೆ ಉತ್ತೇಜನ ನೀಡುವುದು ಹಾಗೂ ಎಲ್ಲಾ ವರ್ಗದ ಹೂಡಿಕೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ. </p>.<p>ಷೇರುಪೇಟೆಗಳಲ್ಲಿ ನೋಂದಾಯಿತ ಆಗಿರದ ಕಂಪನಿಗಳು ಅಥವಾ ನವೋದ್ಯಮಗಳಲ್ಲಿ ವಿದೇಶಗಳಿಂದ ಆಗುವ ಹೂಡಿಕೆಗೆ ಏಂಜೆಲ್ ತೆರಿಗೆ ಅನ್ವಯವಾಗುತಿತ್ತು. ಬಜೆಟ್ಗೂ ಮುನ್ನವೇ ಈ ತೆರಿಗೆ ರದ್ದುಪಡಿಸುವಂತೆ ಡಿಡಿಐಐಟಿಯು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.</p>.<p>‘ದೇಶದಲ್ಲಿ ನವೋದ್ಯಮಗಳಿಗೆ ಮತ್ತಷ್ಟು ಬಲ ನೀಡಬೇಕಿದೆ. ಹೂಡಿಕೆದಾರರಿಗೆ ಉತ್ಸಾಹ ತುಂಬಿ ಅವರ ಅನ್ಷೇಷಣೆಗಳಿಗೆ ಬೆಂಬಲ ನೀಡಲು ಈ ತೆರಿಗೆಯನ್ನು ರದ್ದುಪಡಿಸಲಾಗಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.</p>.<p>ಪ್ರಸ್ತುತ ದೇಶದಲ್ಲಿ 1.17 ಲಕ್ಷಕ್ಕೂ ಹೆಚ್ಚು ನವೋದ್ಯಮಗಳು ಸರ್ಕಾರದಲ್ಲಿ ನೋಂದಣಿಯಾಗಿವೆ. ಸರ್ಕಾರ ರೂಪಿಸಿರುವ ನವೋದ್ಯಮ ನೀತಿಗೆ ಅನುಗುಣವಾಗಿ ಇವುಗಳಿಗೆ ಪ್ರೋತ್ಸಾಹಧನ ದೊರೆಯುತ್ತದೆ. </p>.<p>‘ಸರ್ಕಾರದ ಈ ನಿರ್ಧಾರವು ಸಕಾರಾತ್ಮಕವಾಗಿದೆ. ಇದು ಹೂಡಿಕೆದಾರರಿಗೆ ತೆರಿಗೆ ಉಳಿತಾಯಕ್ಕಷ್ಟೇ ಅನುಕೂಲ ಕಲ್ಪಿಸುವುದಿಲ್ಲ. ದೇಶೀಯ ನವೋದ್ಯಮಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೂ ಅವಕಾಶ ಕಲ್ಪಿಸಲಿದೆ’ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಸುಮಿತ್ ಸಿಂಘಾನಿಯ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>