<p><strong>ನವದೆಹಲಿ</strong>: ಪ್ರಸ್ತುತ ದೇಶದ ವಿವಿಧೆಡೆ ಕೆ.ಜಿ ಈರುಳ್ಳಿ ಧಾರಣೆಯು ₹75ಕ್ಕೆ ತಲುಪಿದೆ. ದೀಪಾವಳಿ ಹಬ್ಬದ ಅಂಗವಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಗುರುವಾರ ತಿಳಿಸಿದೆ.</p>.<p>ಸೆಪ್ಟೆಂಬರ್ 5ರಂದು ರಿಯಾಯಿತಿ ದರದಡಿ ಕೆ.ಜಿಗೆ ₹35 ದರದಲ್ಲಿ ಈರುಳ್ಳಿ ಮಾರಾಟಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್ಸಿಸಿಎಫ್), ನಾಫೆಡ್ ಮಳಿಗೆ, ಇ–ಕಾಮರ್ಸ್ ವೇದಿಕೆ, ಮದರ್ ಡೇರಿ ಮಳಿಗೆ ಮತ್ತು ಕೇಂದ್ರೀಯ ಭಂಡಾರದ ಮೂಲಕ ಮಾರಾಟ ಆರಂಭಿಸಿತ್ತು.</p>.<p>‘ರಿಯಾಯಿತಿ ದರದಡಿ ಈರುಳ್ಳಿ ಮಾರಾಟಕ್ಕೆ ಸಂಚಾರ ವಾಹನಗಳ ಸಂಖ್ಯೆಯನ್ನು 600ರಿಂದ ಒಂದು ಸಾವಿರಕ್ಕೆ ಹೆಚ್ಚಿಸಲಾಗುವುದು’ ಎಂದು ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ. </p>.<p>‘ಸದ್ಯ 4.7 ಲಕ್ಷ ಟನ್ ಕಾಪು ದಾಸ್ತಾನು ಇದೆ. ಈ ಪೈಕಿ ರಿಯಾಯಿತಿ ದರದಡಿ ಮಾರಾಟಕ್ಕೆ ಎನ್ಸಿಸಿಎಫ್ಗೆ 91,960 ಟನ್ ಮತ್ತು ನಾಫೆಡ್ಗೆ 86,000 ಟನ್ ಹಂಚಿಕೆ ಮಾಡಲಾಗಿದೆ. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಗೋವಾ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ. </p>.<p>‘ಮಹಾರಾಷ್ಟ್ರದಿಂದ ಹೊಸ ಫಸಲು ಮಾರುಕಟ್ಟೆಗೆ ಬಂದ ಬಳಿಕ ಈರುಳ್ಳಿ ಬೆಲೆಯು ನಿಯಂತ್ರಣಕ್ಕೆ ಬರಲಿದೆ. ಸರ್ಕಾರವು ಕಾಪು ದಾಸ್ತಾನಿಗಾಗಿ ಕೆ.ಜಿ ₹28 ದರದಲ್ಲಿ ಈರುಳ್ಳಿ ಖರೀದಿಸಲಿದೆ’ ಎಂದು ಹೇಳಿದ್ದಾರೆ.</p>.<p>ಈರುಳ್ಳಿ ಮೇಲಿನ ಕನಿಷ್ಠ ರಫ್ತು ದರವನ್ನು ಶೇ 40ರಿಂದ ಶೇ 20ಕ್ಕೆ ಇಳಿಕೆ ಮಾಡಿದ್ದರಿಂದ ಅಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿತ್ತು ಎಂದು ತಿಳಿಸಿದ್ದಾರೆ.</p>.<p><strong>ಸಾಗಣೆಗೆ ರೈಲು ಬಳಕೆ</strong></p><p>ಮಹಾರಾಷ್ಟ್ರದಿಂದ ದೆಹಲಿಗೆ ಇದೇ ಮೊದಲ ಬಾರಿಗೆ ರೈಲಿನ ಮೂಲಕ 1600 ಟನ್ ಈರುಳ್ಳಿ ಸಾಗಣೆಗೆ ಕೇಂದ್ರ ಸರ್ಕಾರವು ಕ್ರಮಕೈಗೊಂಡಿದೆ. ಇದಕ್ಕಾಗಿ ಕಂದಾ ಎಕ್ಸ್ಪ್ರೆಸ್ಗೆ ವಿಶೇಷ ಬೋಗಿಗಳನ್ನು ಅಳವಡಿಸಲಾಗಿದೆ. ಮಹಾರಾಷ್ಟ್ರದ ಲಾಸನ್ಗಾಂವ್ನಿಂದ ಹೊರಟಿರುವ ಈ ರೈಲು ಅಕ್ಟೋಬರ್ 20ರಂದು ದೆಹಲಿಯ ಕಿಶನ್ಗಂಜ್ ನಿಲ್ದಾಣವನ್ನು ತಲುಪಲಿದೆ ಎಂದು ನಿಧಿ ಖರೆ ತಿಳಿಸಿದ್ದಾರೆ.</p><p>ಇದರಿಂದ ಸಾಗಣೆ ವೆಚ್ಚ ತಗ್ಗಲಿದೆ. ನಾಸಿಕ್ನಿಂದ ದೆಹಲಿಗೆ ಒಂದು ಬೋಗಿ (56 ಟ್ರಕ್ಗಳಿಗೆ ಸಮ) ಈರುಳ್ಳಿ ಸಾಗಣೆಗೆ ₹70.20 ಲಕ್ಷ ವೆಚ್ಚವಾಗಲಿದೆ. ರಸ್ತೆ ಮೂಲಕ ಇಷ್ಟೇ ಪ್ರಮಾಣದ ಈರುಳ್ಳಿ ಸಾಗಣೆಗೆ ₹84 ಲಕ್ಷ ವೆಚ್ಚವಾಗಲಿದೆ. ಒಟ್ಟಾರೆ ಸಾಗಣೆ ವೆಚ್ಚದಲ್ಲಿ ₹13.80 ಲಕ್ಷ ಉಳಿತಾಯವಾಗಲಿದೆ ಎಂದು ವಿವರಿಸಿದ್ದಾರೆ. </p>.<p><strong>ದೆಹಲಿ: ₹100 ದಾಟಿದ ಟೊಮೆಟೊ ದರ</strong></p><p><strong>ನವದೆಹಲಿ</strong>: ದೆಹಲಿಯಲ್ಲಿ ಟೊಮೆಟೊ ಧಾರಣೆಯು ಕೆ.ಜಿಗೆ ₹100 ದಾಟಿದೆ. ಸದ್ಯ ಮಹಾರಾಷ್ಟ್ರದಲ್ಲಿ ಕಟಾವು ಆರಂಭಗೊಂಡಿದೆ. ಅಲ್ಲಿಂದ ಪೂರೈಕೆ ಹೆಚ್ಚಳವಾಗಲಿದ್ದು ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗಲಿದೆ’ ಎಂದು ನಿಧಿ ಖರೆ ತಿಳಿಸಿದ್ದಾರೆ.</p><p>‘ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮವಹಿಸಿದೆ. ದೆಹಲಿ ಮತ್ತು ಮುಂಬೈನಲ್ಲಿ ಎನ್ಸಿಸಿಎಫ್ ಮೂಲಕ ರಿಯಾಯಿತಿ ದರದಲ್ಲಿ ಕೆ.ಜಿಗೆ ₹65ರಂತೆ ಮಾರಾಟವನ್ನು ಮುಂದುವರಿಸಲಾಗುವುದು’ ಎಂದು ಹೇಳಿದ್ದಾರೆ.</p><p>ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮುಂಗಾರು ಅವಧಿಯಲ್ಲಿ ಸುರಿದ ಭಾರಿ ಮಳೆಗೆ ಟೊಮೆಟೊ ಬೆಳೆ ಹಾನಿಗೀಡಾಗಿತ್ತು. ಜೊತೆಗೆ ರೋಗ ಬಾಧೆ ಕಾಣಿಸಿಕೊಂಡಿತ್ತು. ಹಾಗಾಗಿ ಈ ಎರಡು ರಾಜ್ಯದಿಂದ ಪೂರೈಕೆ ಕಡಿಮೆಯಾಗಿತ್ತು. ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಧಾರಣೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ರಿಯಾಯಿತಿ ದರದಲ್ಲಿ ₹10 ಸಾವಿರ ಕೆ.ಜಿ ಟೊಮೆಟೊ ಮಾರಾಟ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪ್ರಸ್ತುತ ದೇಶದ ವಿವಿಧೆಡೆ ಕೆ.ಜಿ ಈರುಳ್ಳಿ ಧಾರಣೆಯು ₹75ಕ್ಕೆ ತಲುಪಿದೆ. ದೀಪಾವಳಿ ಹಬ್ಬದ ಅಂಗವಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಗುರುವಾರ ತಿಳಿಸಿದೆ.</p>.<p>ಸೆಪ್ಟೆಂಬರ್ 5ರಂದು ರಿಯಾಯಿತಿ ದರದಡಿ ಕೆ.ಜಿಗೆ ₹35 ದರದಲ್ಲಿ ಈರುಳ್ಳಿ ಮಾರಾಟಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್ಸಿಸಿಎಫ್), ನಾಫೆಡ್ ಮಳಿಗೆ, ಇ–ಕಾಮರ್ಸ್ ವೇದಿಕೆ, ಮದರ್ ಡೇರಿ ಮಳಿಗೆ ಮತ್ತು ಕೇಂದ್ರೀಯ ಭಂಡಾರದ ಮೂಲಕ ಮಾರಾಟ ಆರಂಭಿಸಿತ್ತು.</p>.<p>‘ರಿಯಾಯಿತಿ ದರದಡಿ ಈರುಳ್ಳಿ ಮಾರಾಟಕ್ಕೆ ಸಂಚಾರ ವಾಹನಗಳ ಸಂಖ್ಯೆಯನ್ನು 600ರಿಂದ ಒಂದು ಸಾವಿರಕ್ಕೆ ಹೆಚ್ಚಿಸಲಾಗುವುದು’ ಎಂದು ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ. </p>.<p>‘ಸದ್ಯ 4.7 ಲಕ್ಷ ಟನ್ ಕಾಪು ದಾಸ್ತಾನು ಇದೆ. ಈ ಪೈಕಿ ರಿಯಾಯಿತಿ ದರದಡಿ ಮಾರಾಟಕ್ಕೆ ಎನ್ಸಿಸಿಎಫ್ಗೆ 91,960 ಟನ್ ಮತ್ತು ನಾಫೆಡ್ಗೆ 86,000 ಟನ್ ಹಂಚಿಕೆ ಮಾಡಲಾಗಿದೆ. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಗೋವಾ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ. </p>.<p>‘ಮಹಾರಾಷ್ಟ್ರದಿಂದ ಹೊಸ ಫಸಲು ಮಾರುಕಟ್ಟೆಗೆ ಬಂದ ಬಳಿಕ ಈರುಳ್ಳಿ ಬೆಲೆಯು ನಿಯಂತ್ರಣಕ್ಕೆ ಬರಲಿದೆ. ಸರ್ಕಾರವು ಕಾಪು ದಾಸ್ತಾನಿಗಾಗಿ ಕೆ.ಜಿ ₹28 ದರದಲ್ಲಿ ಈರುಳ್ಳಿ ಖರೀದಿಸಲಿದೆ’ ಎಂದು ಹೇಳಿದ್ದಾರೆ.</p>.<p>ಈರುಳ್ಳಿ ಮೇಲಿನ ಕನಿಷ್ಠ ರಫ್ತು ದರವನ್ನು ಶೇ 40ರಿಂದ ಶೇ 20ಕ್ಕೆ ಇಳಿಕೆ ಮಾಡಿದ್ದರಿಂದ ಅಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿತ್ತು ಎಂದು ತಿಳಿಸಿದ್ದಾರೆ.</p>.<p><strong>ಸಾಗಣೆಗೆ ರೈಲು ಬಳಕೆ</strong></p><p>ಮಹಾರಾಷ್ಟ್ರದಿಂದ ದೆಹಲಿಗೆ ಇದೇ ಮೊದಲ ಬಾರಿಗೆ ರೈಲಿನ ಮೂಲಕ 1600 ಟನ್ ಈರುಳ್ಳಿ ಸಾಗಣೆಗೆ ಕೇಂದ್ರ ಸರ್ಕಾರವು ಕ್ರಮಕೈಗೊಂಡಿದೆ. ಇದಕ್ಕಾಗಿ ಕಂದಾ ಎಕ್ಸ್ಪ್ರೆಸ್ಗೆ ವಿಶೇಷ ಬೋಗಿಗಳನ್ನು ಅಳವಡಿಸಲಾಗಿದೆ. ಮಹಾರಾಷ್ಟ್ರದ ಲಾಸನ್ಗಾಂವ್ನಿಂದ ಹೊರಟಿರುವ ಈ ರೈಲು ಅಕ್ಟೋಬರ್ 20ರಂದು ದೆಹಲಿಯ ಕಿಶನ್ಗಂಜ್ ನಿಲ್ದಾಣವನ್ನು ತಲುಪಲಿದೆ ಎಂದು ನಿಧಿ ಖರೆ ತಿಳಿಸಿದ್ದಾರೆ.</p><p>ಇದರಿಂದ ಸಾಗಣೆ ವೆಚ್ಚ ತಗ್ಗಲಿದೆ. ನಾಸಿಕ್ನಿಂದ ದೆಹಲಿಗೆ ಒಂದು ಬೋಗಿ (56 ಟ್ರಕ್ಗಳಿಗೆ ಸಮ) ಈರುಳ್ಳಿ ಸಾಗಣೆಗೆ ₹70.20 ಲಕ್ಷ ವೆಚ್ಚವಾಗಲಿದೆ. ರಸ್ತೆ ಮೂಲಕ ಇಷ್ಟೇ ಪ್ರಮಾಣದ ಈರುಳ್ಳಿ ಸಾಗಣೆಗೆ ₹84 ಲಕ್ಷ ವೆಚ್ಚವಾಗಲಿದೆ. ಒಟ್ಟಾರೆ ಸಾಗಣೆ ವೆಚ್ಚದಲ್ಲಿ ₹13.80 ಲಕ್ಷ ಉಳಿತಾಯವಾಗಲಿದೆ ಎಂದು ವಿವರಿಸಿದ್ದಾರೆ. </p>.<p><strong>ದೆಹಲಿ: ₹100 ದಾಟಿದ ಟೊಮೆಟೊ ದರ</strong></p><p><strong>ನವದೆಹಲಿ</strong>: ದೆಹಲಿಯಲ್ಲಿ ಟೊಮೆಟೊ ಧಾರಣೆಯು ಕೆ.ಜಿಗೆ ₹100 ದಾಟಿದೆ. ಸದ್ಯ ಮಹಾರಾಷ್ಟ್ರದಲ್ಲಿ ಕಟಾವು ಆರಂಭಗೊಂಡಿದೆ. ಅಲ್ಲಿಂದ ಪೂರೈಕೆ ಹೆಚ್ಚಳವಾಗಲಿದ್ದು ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗಲಿದೆ’ ಎಂದು ನಿಧಿ ಖರೆ ತಿಳಿಸಿದ್ದಾರೆ.</p><p>‘ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮವಹಿಸಿದೆ. ದೆಹಲಿ ಮತ್ತು ಮುಂಬೈನಲ್ಲಿ ಎನ್ಸಿಸಿಎಫ್ ಮೂಲಕ ರಿಯಾಯಿತಿ ದರದಲ್ಲಿ ಕೆ.ಜಿಗೆ ₹65ರಂತೆ ಮಾರಾಟವನ್ನು ಮುಂದುವರಿಸಲಾಗುವುದು’ ಎಂದು ಹೇಳಿದ್ದಾರೆ.</p><p>ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮುಂಗಾರು ಅವಧಿಯಲ್ಲಿ ಸುರಿದ ಭಾರಿ ಮಳೆಗೆ ಟೊಮೆಟೊ ಬೆಳೆ ಹಾನಿಗೀಡಾಗಿತ್ತು. ಜೊತೆಗೆ ರೋಗ ಬಾಧೆ ಕಾಣಿಸಿಕೊಂಡಿತ್ತು. ಹಾಗಾಗಿ ಈ ಎರಡು ರಾಜ್ಯದಿಂದ ಪೂರೈಕೆ ಕಡಿಮೆಯಾಗಿತ್ತು. ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಧಾರಣೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ರಿಯಾಯಿತಿ ದರದಲ್ಲಿ ₹10 ಸಾವಿರ ಕೆ.ಜಿ ಟೊಮೆಟೊ ಮಾರಾಟ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>