<p><strong>ಬೆಂಗಳೂರು:</strong> ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಯಶಸ್ವಿಯಾಗಿ ಓಡಾಡಿದ ನಂತರ ನಿದ್ರಾವಸ್ಥೆಗೆ ತೆರಳಿದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಂ ಹಾಗೂ ರೋವರ್ ಪ್ರಜ್ಞಾನ್ ಶುಕ್ರವಾರದಿಂದ ಮತ್ತೆ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಇಸ್ರೊ ಸನ್ನದ್ಧವಾಗಿದೆ.</p><p>15 ದಿನಗಳ ಚಂದ್ರನ ಹಗಲು ಶುಕ್ರವಾರದಿಂದ ಆರಂಭವಾಗಲಿದ್ದು, ಮೊದಲ ಕಿರಣ ಬಿದ್ದ ನಂತರ ವಿಕ್ರಂ ಹಾಗೂ ಪ್ರಜ್ಞಾನ್ನಲ್ಲಿ ಜಾಗೃತಾವಸ್ಥೆಗೆ ತರುವ ಯತ್ನವನ್ನು ವಿಜ್ಞಾನಿಗಳು ನಡೆಸಲಿದ್ದಾರೆ ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.</p><p>ಗುರುವಾರ ಚಂದ್ರನಲ್ಲಿ ಸೂರ್ಯೋದಯದ ನಂತರ ಆರಂಭವಾಗುವ ಈ ಪ್ರಕ್ರಿಯೆ ಶುಕ್ರವಾರವೂ ಮುಂದುವರಿಯಲಿದೆ. ಈ ಎರಡು ಪ್ರಮುಖ ಸಾಧನಗಳು ಮರಳಿ ಜಾಗೃತಾವಸ್ಥೆಗೆ ಬರುವ ನಿರೀಕ್ಷೆ ಇದೆ. ಇದು ಸೆ. 22ರಂದು ಗೊತ್ತಾಗಲಿದೆ’ ಎಂದಿದ್ದಾರೆ.</p>.ಚಂದ್ರಯಾನ–3: ವಿಕ್ರಮ್–ಪ್ರಜ್ಞಾನ್ ಮರುಜೀವ ಪಡೆಯಲಿವೆಯೇ?.<p>ಚಂದ್ರನ ಅಂಗಳದಲ್ಲಿನ ಸೂರ್ಯಾಸ್ತದ ಸಂದರ್ಭದಲ್ಲಿ ಸೆ. 2ರಂದು ಈ ಎರಡು ಸಾಧನಗಳನ್ನು ಹಂತ ಹಂತವಾಗಿ ನಿದ್ರಾವಸ್ಥೆಗೆ ಕಳುಹಿಸಲಾಗಿತ್ತು. ಇದಕ್ಕೂ ಪೂರ್ವದಲ್ಲಿ ಈ ಸಾಧನಗಳಲ್ಲಿರುವ ಬ್ಯಾಟರಿಗಳನ್ನು ಮರುಪೂರಣಗೊಳಿಸಲಾಗಿತ್ತು. ಜತೆಗೆ ಸೂರ್ಯಾಸ್ತದ ಸಂದರ್ಭದಲ್ಲೂ ಸೂರ್ಯನ ಕಿರಣಗಳು ಲಭ್ಯವಾಗುವಂತೆ ಸೌರ ಫಲಕಗಳನ್ನು ಸಜ್ಜುಗೊಳಿಸಲಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.</p><p>ಚಂದ್ರನ ಸೂರ್ಯಾಸ್ತ ಸಂದರ್ಭದಲ್ಲಿ ಮೈನಸ್ 200 ಡಿಗ್ರಿ ಸೆಲ್ಸಿಯಸ್ಗೆ ಕುಸಿಯುವ ತಾಪಮಾನ ಎದುರಿಸಿ ಈ ಸಾಧನಗಳು ಜಾಗೃತಾವಸ್ಥೆಗೆ ಹೇಗೆ ಮರಳಲಿವೆ ಎಂಬ ಕುತೂಹಲ ಮೂಡಿದೆ. ಹೀಗೆ ಜಾಗೃತಗೊಂಡ ನಂತರ ಮುಂದಿನ 14 ದಿನಗಳ ಕಾಲ ಇವು ಭೂಮಿಗೆ ಚಂದ್ರನ ಅಂಗಳದ ಮಾಹಿತಿ ಕಳುಹಿಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಯಶಸ್ವಿಯಾಗಿ ಓಡಾಡಿದ ನಂತರ ನಿದ್ರಾವಸ್ಥೆಗೆ ತೆರಳಿದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಂ ಹಾಗೂ ರೋವರ್ ಪ್ರಜ್ಞಾನ್ ಶುಕ್ರವಾರದಿಂದ ಮತ್ತೆ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಇಸ್ರೊ ಸನ್ನದ್ಧವಾಗಿದೆ.</p><p>15 ದಿನಗಳ ಚಂದ್ರನ ಹಗಲು ಶುಕ್ರವಾರದಿಂದ ಆರಂಭವಾಗಲಿದ್ದು, ಮೊದಲ ಕಿರಣ ಬಿದ್ದ ನಂತರ ವಿಕ್ರಂ ಹಾಗೂ ಪ್ರಜ್ಞಾನ್ನಲ್ಲಿ ಜಾಗೃತಾವಸ್ಥೆಗೆ ತರುವ ಯತ್ನವನ್ನು ವಿಜ್ಞಾನಿಗಳು ನಡೆಸಲಿದ್ದಾರೆ ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.</p><p>ಗುರುವಾರ ಚಂದ್ರನಲ್ಲಿ ಸೂರ್ಯೋದಯದ ನಂತರ ಆರಂಭವಾಗುವ ಈ ಪ್ರಕ್ರಿಯೆ ಶುಕ್ರವಾರವೂ ಮುಂದುವರಿಯಲಿದೆ. ಈ ಎರಡು ಪ್ರಮುಖ ಸಾಧನಗಳು ಮರಳಿ ಜಾಗೃತಾವಸ್ಥೆಗೆ ಬರುವ ನಿರೀಕ್ಷೆ ಇದೆ. ಇದು ಸೆ. 22ರಂದು ಗೊತ್ತಾಗಲಿದೆ’ ಎಂದಿದ್ದಾರೆ.</p>.ಚಂದ್ರಯಾನ–3: ವಿಕ್ರಮ್–ಪ್ರಜ್ಞಾನ್ ಮರುಜೀವ ಪಡೆಯಲಿವೆಯೇ?.<p>ಚಂದ್ರನ ಅಂಗಳದಲ್ಲಿನ ಸೂರ್ಯಾಸ್ತದ ಸಂದರ್ಭದಲ್ಲಿ ಸೆ. 2ರಂದು ಈ ಎರಡು ಸಾಧನಗಳನ್ನು ಹಂತ ಹಂತವಾಗಿ ನಿದ್ರಾವಸ್ಥೆಗೆ ಕಳುಹಿಸಲಾಗಿತ್ತು. ಇದಕ್ಕೂ ಪೂರ್ವದಲ್ಲಿ ಈ ಸಾಧನಗಳಲ್ಲಿರುವ ಬ್ಯಾಟರಿಗಳನ್ನು ಮರುಪೂರಣಗೊಳಿಸಲಾಗಿತ್ತು. ಜತೆಗೆ ಸೂರ್ಯಾಸ್ತದ ಸಂದರ್ಭದಲ್ಲೂ ಸೂರ್ಯನ ಕಿರಣಗಳು ಲಭ್ಯವಾಗುವಂತೆ ಸೌರ ಫಲಕಗಳನ್ನು ಸಜ್ಜುಗೊಳಿಸಲಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.</p><p>ಚಂದ್ರನ ಸೂರ್ಯಾಸ್ತ ಸಂದರ್ಭದಲ್ಲಿ ಮೈನಸ್ 200 ಡಿಗ್ರಿ ಸೆಲ್ಸಿಯಸ್ಗೆ ಕುಸಿಯುವ ತಾಪಮಾನ ಎದುರಿಸಿ ಈ ಸಾಧನಗಳು ಜಾಗೃತಾವಸ್ಥೆಗೆ ಹೇಗೆ ಮರಳಲಿವೆ ಎಂಬ ಕುತೂಹಲ ಮೂಡಿದೆ. ಹೀಗೆ ಜಾಗೃತಗೊಂಡ ನಂತರ ಮುಂದಿನ 14 ದಿನಗಳ ಕಾಲ ಇವು ಭೂಮಿಗೆ ಚಂದ್ರನ ಅಂಗಳದ ಮಾಹಿತಿ ಕಳುಹಿಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>