ಸಚಿವರ ಎದುರೇ ನೀರಿಗಿಳಿದ ರೈತರು
ಮಿರ್ಜಿ ಗ್ರಾಮದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಪ್ರವಾಹ ಪರಿಸ್ಥಿತಿ ಪರಿಶೀಲನೆ ವೇಳೆಯೇ ರೈತರು ಹರಿಯುವ ನೀರಿಗಿಳಿದು ಮುಳುಗಿದ್ದ ಪಂಪ್ಸೆಟ್ಗಳನ್ನು ತರಲು ಮುಂದಾದರು ಇದನ್ನು ಗಮನಿಸಿದ ಸಚಿವರು ‘ದಯವಿಟ್ಟು ನದಿಗೆ ಇಳಿಯಬೇಡಿ’ ಎಂದು ಮನವಿ ಮಾಡಿಕೊಂಡರು. ಜೊತೆಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ‘ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ನಿಗಾ ವಹಿಸಬೇಕು’ ಎಂದು ತಾಕೀತು ಮಾಡಿದರು.