ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಚುನಾವಣೆ, ಗ್ಯಾರಂಟಿ ಗುಂಗು: ಅಭಿವೃದ್ಧಿಗೆ ಹಿನ್ನೆಡೆ

Published : 14 ಅಕ್ಟೋಬರ್ 2024, 5:20 IST
Last Updated : 14 ಅಕ್ಟೋಬರ್ 2024, 5:20 IST
ಫಾಲೋ ಮಾಡಿ
Comments
ಅಭಿವೃದ್ಧಿ ಎಂದರೆ ಸಂಡೂರು ಎಂದು ಹೇಳಲಾಗುವ ತಾಲೂಕಿನಲ್ಲಿ ಬಸ್ ನಿಲ್ದಾಣವೇ ಸರಿ ಇಲ್ಲ. ಕಮತೂರು ಹಳ್ಳಿಯ ಸರ್ವೇ ಸೆಟಲ್ಮೆಂಟ್ ಇನ್ನೂ ಬಗೆಹರಿದಿಲ್ಲ. ಚೋರನೂರು, ವಿಠಲಾಪುರ, ಸೋವೆನಹಳ್ಳಿ ಭಾಗದಲ್ಲಿ ಭಾರಿ ವಾಹನಗಳ ಓಡಾಟದಿಂದ ಬ್ರಿಡ್ಜ್, ರಸ್ತೆಗಳು ಹಾಳಾಗಿವೆ. ಸಂಜೆ 7 ಗಂಟೆ ಬಳಿಕ ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ರಾಮಗಡದಂಥ ಹಳ್ಳಿಗಳಿಗೆ ಬಸ್‌ ಹೋಗಿಲ್ಲ. ಜನ ಟಂಟಂಗಳನ್ನೇ ಅವಲಂಭಿಸಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆ ಎದುರಾದರೆ ಬಳ್ಳಾರಿಯ ವಿಮ್ಸ್ ಕಡೆ ನೋಡಬೇಕಾಗುತ್ತದೆ. ಗಣಿಗಾರಿಕೆ ಕಾರಣದ ಅಪಘಾತಗಳು ಮಿತಿ ಮೀರಿದ್ದರೂ ಕ್ರಮ ಕೈಗೊಂಡಿಲ್ಲ. ನಿತ್ಯ ಓಡಾಡುವ 8 ಸಾವಿರ ಗಣಿ ಲಾರಿಗಳಿಂದಾಗಿ ಇಡೀ ಸಂಡೂರಿನ ಮೇಲೆ ಧೂಳು ಕುಳಿತಿದೆ. ತಾಲೂಕು ಕೇಂದ್ರದಲ್ಲಿ ಇರಬೇಕಿದ್ದ ಡಿವೈಎಸ್ಪಿ ಕಚೇರಿ ಹೋಬಳಿ ಕೇಂದ್ರದಲ್ಲಿದೆ. ಇದನ್ನು ಅಭಿವೃದ್ಧಿ ಎನ್ನಲಾದೀತೆ?
ಶ್ರೀಶೈಲ ಅಲದಹಳ್ಳಿ, ಜನಸಂಗ್ರಾಮ ಪರಿಷತ್, ರಾಜ್ಯ ಉಪಾಧ್ಯಕ್ಷರು
ಆರ್ಸೆಲ್ಲರ್‌ ಮಿತ್ತಲ್‌, ಬ್ರಹ್ಮಿಣಿ ತಲಾ 5 ಸಾವಿರ ಎಕರೆ ಮತ್ತು ಎನ್‌ಎಂಡಿಸಿ 2856 ಎಕರೆ ಭೂಮಿಯನ್ನು ಕುಡುತಿನಿ ಭಾಗದಲ್ಲಿ ಪಡೆದುಕೊಂಡಿವೆ. ಇದರ ಪರಿಹಾರ ನಿಗದಿಯಲ್ಲಿ ಮಾನದಂಡಗಳನ್ನು ಅನುರಿಸಿಲ್ಲ. ಹೀಗಾಗಿ ರೈತರಿಗೆ ₹13 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಇದರ ಸೂಕ್ತ ಪರಿಹಾರ ಸಿಗಬೇಕು. ಕಾರ್ಖಾನೆ ಆರಂಭವಾಗದೇ ಇರುವುದರಿಂದ ಸ್ಥಳೀಯರಿಗೆ ಉದ್ಯೋಗ ನಷ್ಟವಾಗಿದೆ. ಇದೆಲ್ಲದರ ಪರಿಹಾರವನ್ನು ಸರ್ಕಾರ ಕೊಡಬೇಕು.
ಯು. ಬಸವರಾಜು, ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ
ಚುನಾವಣೆಗೆ ಮೊದಲು ನೀಡಿದ ವಾಗ್ದಾನ ಗಳೇನು, ಈಗ ಯಾವುದು ಈಡೇರಿದೆ. ಉಳಿದವನ್ನು ಯಾವಾಗ ಈಡೇರಿಸುತ್ತೀರಿ ಎಂಬುದರ ಕಾಲಮಿತಿಯ ಒಂದು ವರದಿ ಕೊಡಿ. ಆಗ ಮಾತ್ರ ಮುಂದಿನ ಚುನಾವಣೆಯಲ್ಲಿ ಜನ ನಿಮ್ಮನ್ನು ನಂಬಲು ಸಾಧ್ಯ.
ಪನ್ನ ರಾಜ್‌, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ
ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಅವರಿಗೆ ಬಳ್ಳಾರಿ ಬಗ್ಗೆ ವಿಶೇಷ ಒಲವಿದೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ನಿರ್ಧಾರಗಳನ್ನು ಸರ್ಕಾರ ಈಗಾಗಲೇ ಕೈಗೊಂಡಿದೆ. ಸಂಡೂರಿನಲ್ಲಿ ನಡೆಯುತ್ತಿರುವುದು ರಾಜಕೀಯ ಕಾರ್ಯಕ್ರಮವಲ್ಲ, ಸಾಧನೆಯ ಕಾರ್ಯಕ್ರಮ
ವೆಂಕಟೇಶ ಹೆಗಡೆ, ಕೆಪಿಸಿಸಿ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT