<p><strong>ತೋರಣಗಲ್ಲು:</strong> ಹೋಬಳಿಯ ವಿಠಲಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿಯ ನಿವಾಸಿ ಸಣ್ಣಬಾಬು ಅವರ ಮನೆಯು ನಿರಂತರ ಮಳೆಗೆ ಹಂತ ಹಂತವಾಗಿ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಸರ್ಕಾರವು ಕಡಿಮೆ ಪರಿಹಾರ ನೀಡಿರುವುದನ್ನು ವಿರೋಧಿಸಿ ಕುಟುಂಬಸ್ಥರು ಸೋಮವಾರ ಕುಸಿದ ಮನೆಯಲ್ಲೆ ಪ್ರತಿಭಟನೆ ನಡೆಸಿದರು.</p>.<p>‘ನಿರಂತರ ಮಳೆಯಿಂದ ಕುಸಿದ ಮನೆಗೆ ಸರ್ಕಾರ ಮೊದಲ ಕಂತಿನಲ್ಲಿ ₹4,000, ಎರಡನೇ ಕಂತಿನಲ್ಲಿ ₹2,500 ಒಟ್ಟು ₹6,500 ಪರಿಹಾರ ಸಿಕ್ಕಿದೆ. ನಮ್ಮ ಕಾಲೊನಿಯಲ್ಲಿ ಬಿದ್ದಿರುವ ಬೇರೆಯವರ ಮನೆಗೆ ₹1.20 ಲಕ್ಷ ಪರಿಹಾರ ಒಂದೇ ಕಂತಿನಲ್ಲಿ ನೀಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳ ಎಡವಟ್ಟಿ ನಿಂದ ನಮಗೆ ಕಡಿಮೆ ಪರಿಹಾರ ಬಂದಿದೆ. ಅಧಿಕಾರಿಗಳನ್ನು ವಿಚಾರಿಸಿದರೇ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಮನೆಯ ಮಾಲೀಕ ಸಣ್ಣಬಾಬು ದೂರಿದರು.</p>.<p>‘ಗ್ರಾಮದಲ್ಲಿ ನಿರಂತರ ಮಳೆಗೆ ಈ ವರ್ಷ 8 ಮನೆಗಳು ಬಿದ್ದಿದ್ದು ಎಲ್ಲ ಮನೆಗಳ ಮಾಹಿತಿಯನ್ನು ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಕಡಿಮೆ ಪರಿಹಾರ ಬಂದಿರುವ ಫಲಾನುಭವಿಗಳು ಸಂಡೂರು ತಾಲ್ಲೂಕಿನ ಕಂದಾಯ ಇಲಾಖೆಯನ್ನು ಅಧಿಕಾರಿಗಳನ್ನು ಸಂಪರ್ಕಿಸಬೇಕು’ ಎಂದು ವಿಠಲಾಪುರ ಗ್ರಾಮ ಪಂಚಾಯಿತಿಯ ಪಿಡಿಒ ಗಂಗಾಧರ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋರಣಗಲ್ಲು:</strong> ಹೋಬಳಿಯ ವಿಠಲಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿಯ ನಿವಾಸಿ ಸಣ್ಣಬಾಬು ಅವರ ಮನೆಯು ನಿರಂತರ ಮಳೆಗೆ ಹಂತ ಹಂತವಾಗಿ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಸರ್ಕಾರವು ಕಡಿಮೆ ಪರಿಹಾರ ನೀಡಿರುವುದನ್ನು ವಿರೋಧಿಸಿ ಕುಟುಂಬಸ್ಥರು ಸೋಮವಾರ ಕುಸಿದ ಮನೆಯಲ್ಲೆ ಪ್ರತಿಭಟನೆ ನಡೆಸಿದರು.</p>.<p>‘ನಿರಂತರ ಮಳೆಯಿಂದ ಕುಸಿದ ಮನೆಗೆ ಸರ್ಕಾರ ಮೊದಲ ಕಂತಿನಲ್ಲಿ ₹4,000, ಎರಡನೇ ಕಂತಿನಲ್ಲಿ ₹2,500 ಒಟ್ಟು ₹6,500 ಪರಿಹಾರ ಸಿಕ್ಕಿದೆ. ನಮ್ಮ ಕಾಲೊನಿಯಲ್ಲಿ ಬಿದ್ದಿರುವ ಬೇರೆಯವರ ಮನೆಗೆ ₹1.20 ಲಕ್ಷ ಪರಿಹಾರ ಒಂದೇ ಕಂತಿನಲ್ಲಿ ನೀಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳ ಎಡವಟ್ಟಿ ನಿಂದ ನಮಗೆ ಕಡಿಮೆ ಪರಿಹಾರ ಬಂದಿದೆ. ಅಧಿಕಾರಿಗಳನ್ನು ವಿಚಾರಿಸಿದರೇ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಮನೆಯ ಮಾಲೀಕ ಸಣ್ಣಬಾಬು ದೂರಿದರು.</p>.<p>‘ಗ್ರಾಮದಲ್ಲಿ ನಿರಂತರ ಮಳೆಗೆ ಈ ವರ್ಷ 8 ಮನೆಗಳು ಬಿದ್ದಿದ್ದು ಎಲ್ಲ ಮನೆಗಳ ಮಾಹಿತಿಯನ್ನು ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಕಡಿಮೆ ಪರಿಹಾರ ಬಂದಿರುವ ಫಲಾನುಭವಿಗಳು ಸಂಡೂರು ತಾಲ್ಲೂಕಿನ ಕಂದಾಯ ಇಲಾಖೆಯನ್ನು ಅಧಿಕಾರಿಗಳನ್ನು ಸಂಪರ್ಕಿಸಬೇಕು’ ಎಂದು ವಿಠಲಾಪುರ ಗ್ರಾಮ ಪಂಚಾಯಿತಿಯ ಪಿಡಿಒ ಗಂಗಾಧರ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>