ಕುರುಬರವೋಟಿಯ ರಸ್ತೆ ಮಾರ್ಗದಲ್ಲಿ ಕೆಸರಿನ ತ್ಯಾಜ್ಯ ಹರಡಿರುವುದು
ರಾಣಿ ತೋಟ ಪ್ರದೇಶಕ್ಕೆ ಸ್ವಾಗತ ನೀಡುತ್ತಿರುವ ಕಸ
ರಾಜಕಾಲುವೆಯಲ್ಲಿನ ಕಸವನ್ನು ತೆಗೆದು ನಮ್ಮ ಮನೆ ಎದುರೇ ಹಾಕಲಾಗುತ್ತಿದೆ. ಮೋರಿಯಿಂದ ತೆಗೆದ ಕಸವನ್ನು ಒಣಗಿದ ನಂತರ ತೆಗೆದುಕೊಂಡು ಹೋಗುವುದಾಗಿ ಪಾಲಿಕೆಯ ಸಿಬ್ಬಂದಿ ಹೇಳುತ್ತಾರೆ. ಈಗ ಮಳೆ ಸುರಿಯುತ್ತಿದೆ. ಕಸ ಒಣಗುವುದಿಲ್ಲ ಅದನ್ನು ಪಾಲಿಕೆ ಸಿಬ್ಬಂದಿ ವಿಲೇವಾರಿ ಮಾಡುತ್ತಿಲ್ಲ.
ಸೋಮೇಶ್ ರಾಣಿ ತೋಟ ನಿವಾಸಿ
ರೇವಣ ಸಿದ್ದೇಶ್ವರ ದೇಗುಲಕ್ಕೆ ಹೊಂದಿಕೊಂಡಿರುವ ಪ್ರದೇಶ ರಾಜಕಾಲುವೆಗಿಂತಲೂ ತಗ್ಗಿನಲ್ಲಿದೆ. ಮಳೆ ಬಂದರೆ ಮೋರಿ ನೀರು ಮನೆಗಳಿಗೇ ನುಗ್ಗುತ್ತದೆ. ಹೀಗಾಗಿ ನಾವು ಮನೆ ಖಾಲಿ ಮಾಡಿ ಬೇರೆ ಮನೆಗಳಿಗೆ ಹೋಗಿದ್ದೇವೆ. ಪಾಲಿಕೆಯ ಯಾವ ಅಧಿಕಾರಿಯೂ ಬಂದು ಸಮಸ್ಯೆ ಕೇಳುತ್ತಿಲ್ಲ.
–ವಾಣಿ ರೇವಣ ಸಿದ್ದೇಶ್ವರ ದೇಗುಲ ಪಕ್ಕದ ನಿವಾಸಿ
ಮೋತಿ ಸರ್ಕಲ್ನಿಂದ ಬರುವ ಕೊಳಚೆ ನೀರು ಕುರುಬರ ಓಣಿಯ 150 ಮನೆಗಳಿಗೆ ತೊಂದರೆ ಉಂಟು ಮಾಡುತ್ತಿದೆ. ಮೋರಿ ನೀರು ನೇರವಾಗಿ ಮನೆಗಳಿಗೇ ನುಗ್ಗುತ್ತದೆ. ಮಳೆ ನಿಂತ ಮೇಲೆ ಚರಂಡಿ ನೀರಿನ ಬಸಿ ಇಡೀ ರಸ್ತೆಯನ್ನೇ ಆವರಿಸಿ ಕೊಚ್ಚೆಯಂತಾಗುತ್ತದೆ. ಮಳೆ ಮತ್ತು ನಂತರದ ಅವಾಂತರಗಳಿಂದ ಇಲ್ಲಿನ ಜನ ಹೈರಾಣಾಗಿದ್ದಾರೆ.