<p><strong>ಕುರುಗೋಡು:</strong> ಕಳೆದ ವಾರ ಸುರಿದ ಮಳೆಯಿಂದ ತಾಲ್ಲೂಕಿನ ಮಳೆಯಾಶ್ರಿತ ಭೂಮಿಯಲ್ಲಿನ ಬೆಳೆಗಳು ನಳನಳಿಸುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.</p>.<p>ತಿಂಗಳಿಂದ ಮಳೆಯಾಗದೆ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆದು ಬಾಡುವ ಹಂತ ತಲುಪಿದ್ದ ತೊಗರಿ, ಸಜ್ಜೆ, ನವಣೆ, ಹತ್ತಿ, ಔಡಲ ಬೆಳೆಗಳಿಗೆ ಜೀವಕಳೆ ಬಂದಿದೆ.</p>.<p>ಬಿಸಿಲಿನ ಪ್ರಖರತೆ ಪರಿಣಾಮ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆದಿದ್ದ ತೊಗರಿ, ಹತ್ತಿ, ಸಜ್ಜೆ, ನವಣೆ ಬೆಳೆಗಳು ತೇವಾಂಶ ಕೊರತೆಯಿಂದ ಬಾಡತೊಡಗಿದ್ದವು. ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಮತ್ತು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ದೇವರಾಜ್ ರೈತರ ಜಮೀನುಗಳಿಗೆ ಭೇಟಿನೀಡಿ ಬೆಳೆಯ ಮಧ್ಯದ ಸಾಲುಗಳಲ್ಲಿ ಹರಗಿ ತೇವಾಂಶ ಹೆಚ್ಚಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.</p>.<p>ಸಾಲುಗಳ ಮಧ್ಯ ಹರಗಿರುವುದು ಮತ್ತು ಮಳೆ ಸುರಿದ ಪರಿಣಾಮ ಜಮೀನುಗಳಲ್ಲಿ ಬೆಳೆ ನಳನಳಿಸುತ್ತಿವೆ.</p>.<p>ಕಳೆದವಾರ ಮೂರು ದಿನಗಳಲ್ಲಿ ಒಟ್ಟು 2.4 ಸೆಂ.ಮೀ. ಮಳೆಯಾದ ಬಗ್ಗೆ ಇಲ್ಲಿನ ಮಳೆಮಾಪನ ಕೇಂದ್ರದಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು:</strong> ಕಳೆದ ವಾರ ಸುರಿದ ಮಳೆಯಿಂದ ತಾಲ್ಲೂಕಿನ ಮಳೆಯಾಶ್ರಿತ ಭೂಮಿಯಲ್ಲಿನ ಬೆಳೆಗಳು ನಳನಳಿಸುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.</p>.<p>ತಿಂಗಳಿಂದ ಮಳೆಯಾಗದೆ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆದು ಬಾಡುವ ಹಂತ ತಲುಪಿದ್ದ ತೊಗರಿ, ಸಜ್ಜೆ, ನವಣೆ, ಹತ್ತಿ, ಔಡಲ ಬೆಳೆಗಳಿಗೆ ಜೀವಕಳೆ ಬಂದಿದೆ.</p>.<p>ಬಿಸಿಲಿನ ಪ್ರಖರತೆ ಪರಿಣಾಮ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆದಿದ್ದ ತೊಗರಿ, ಹತ್ತಿ, ಸಜ್ಜೆ, ನವಣೆ ಬೆಳೆಗಳು ತೇವಾಂಶ ಕೊರತೆಯಿಂದ ಬಾಡತೊಡಗಿದ್ದವು. ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಮತ್ತು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ದೇವರಾಜ್ ರೈತರ ಜಮೀನುಗಳಿಗೆ ಭೇಟಿನೀಡಿ ಬೆಳೆಯ ಮಧ್ಯದ ಸಾಲುಗಳಲ್ಲಿ ಹರಗಿ ತೇವಾಂಶ ಹೆಚ್ಚಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.</p>.<p>ಸಾಲುಗಳ ಮಧ್ಯ ಹರಗಿರುವುದು ಮತ್ತು ಮಳೆ ಸುರಿದ ಪರಿಣಾಮ ಜಮೀನುಗಳಲ್ಲಿ ಬೆಳೆ ನಳನಳಿಸುತ್ತಿವೆ.</p>.<p>ಕಳೆದವಾರ ಮೂರು ದಿನಗಳಲ್ಲಿ ಒಟ್ಟು 2.4 ಸೆಂ.ಮೀ. ಮಳೆಯಾದ ಬಗ್ಗೆ ಇಲ್ಲಿನ ಮಳೆಮಾಪನ ಕೇಂದ್ರದಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>