<p><strong>ಬಳ್ಳಾರಿ:</strong> ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಬಾಡೂಟ ಹಾಕುವ ಹಳೇ ಮೈಸೂರು ಸಂಸ್ಕೃತಿ ಕಲ್ಯಾಣ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಮಂಗಳವಾರ ಬೆಂಬಲಿಗರು, ಅಭಿಮಾನಿಗಳಿಗೆ ಬಾಡೂಟ ಏರ್ಪಡಿಸಿದ್ದರು. ಆ ವೇಳೆ ಗಣ್ಯರಿಗಾಗಿ ಹಾಕಿದ್ದ ಶಾಮಿಯಾನ ಕುಸಿಯಿತು. ಆದರೆ, ಯಾರಿಗೂ ತೊಂದರೆಯಾಗಿಲ್ಲ.</p>.<p>ರಾಜ್ಯದ ಗಡಿಯ ಕೊನೆಯ ಗ್ರಾಮವಾದ ಬಳ್ಳಾರಿ ತಾಲ್ಲೂಕಿನ ಜೋಳದರಾಶಿಯ ಕುಂಟ ಮಾರಮ್ಮ ದೇವಸ್ಥಾನದ ಬಳಿ ಬಾಡೂಟಕ್ಕಾಗಿ ಮೂರು ಶಾಮಿಯಾನ ಹಾಕಲಾಗಿತ್ತು. ಬೆಂಬಲಿಗರಿಗೆ ಬೃಹತ್ ಗಾತ್ರದ ಶಾಮಿಯಾನ, ಗಣ್ಯರಿಗೆ ಸಣ್ಣ ಶಾಮಿಯಾನ ಹಾಗೂ ಸಸ್ಯಹಾರಿಗಳಿಗಾಗಿ ಮತ್ತೊಂದು ಶಾಮಿಯಾನ ಸಿದ್ಧಪಡಿಸಲಾಗಿತ್ತು. </p>.<p>ಮಧ್ಯಾಹ್ನ 3.30ರಲ್ಲಿ ಬಿರುಗಾಳಿ ಬೀಸುತ್ತಿದ್ದಂತೆ ಊಟಕ್ಕೆ ಕುಳಿತಿದ್ದವರು ಜಾಗೃತರಾದರು. ಗಾಳಿ ಹೊಡೆತಕ್ಕೆ ಸಿಕ್ಕಿ ನಿಧಾನವಾಗಿ ಕುಸಿದ ಶಾಮಿಯಾನ ಬಹಳಷ್ಟು ಮಂದಿ ಕಷ್ಟಪಟ್ಟು ಹಿಡಿದುಕೊಂಡರು. ಇದರಿಂದ ಯಾರಿಗೂ ಗಾಯಗಳಾಗಿಲ್ಲ. ಶಾಮಿಯಾನ ಕುಸಿಯುಷ್ಟರಲ್ಲಿ ಬಹುತೇಕರ ಊಟ ಮುಗಿದಿತ್ತು.</p>.<p><strong>‘50 ಸಾವಿರ ಜನರಿಗೆ ಪ್ರಸಾದ’:</strong> ‘ಜೋಳದರಾಶಿಯಲ್ಲಿ ಕುಂಟ ಮಾರಮ್ಮ ಹಾಗೂ ಬಾಟೆ ಮಾರಮ್ಮ ಎಂಬ ಅಕ್ಕತಂಗಿ ದೇವಿಯರಿದ್ದಾರೆ. ಅವರಿಗೆ ಸಂಕಲ್ಪ ಮಾಡಿಕೊಂಡರೆ ಅಂದುಕೊಂಡಿದ್ದು ಆಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ತಂದೆ ಕಾಲದಿಂದಲೂ ಮನೆಯವರು ಇಲ್ಲಿಗೆ ನಡೆದುಕೊಳ್ಳುತ್ತಿದ್ದೇವೆ. ಈ ವರ್ಷ ನನ್ನ ಕ್ಷೇತ್ರದ ಸುಖ– ಶಾಂತಿ, ನೆಮ್ಮದಿ, ಮಳೆ– ಬೆಳೆಗೆ ಪ್ರಾರ್ಥಿಸಿ ಜನರೇ ಹಬ್ಬ ಮಾಡುತ್ತಿದ್ದಾರೆ’ ಎಂದು ಶಾಸಕ ನಾಗೇಂದ್ರ ಇದಕ್ಕೂ ಮುನ್ನ ಸ್ಪಷ್ಟಪಡಿಸಿದರು.</p>.<p>‘ಬಳ್ಳಾರಿ ಗ್ರಾಮೀಣ ಕ್ಷೇತ್ರದ ಸುಮಾರು 50 ಸಾವಿರ ಜನ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಅವರೇ ಪ್ರಸಾದ ಮಾಡಿಕೊಂಡು ಹೋಗುತ್ತಿದ್ದಾರೆ’ ಎಂದು ಅವರು ವಿವರಿಸಿದರು.</p>.<p>‘ಚುನಾವಣೆ ಬಂದಾಗ ಕಾಂಗ್ರೆಸ್ಗೆ ಬಾಡೂಟ ನೆನಪಾಗುತ್ತದೆ’ ಎಂದು ಸಚಿವ ಶ್ರೀರಾಮುಲು ಆರೋಪ ಮಾಡಿದ್ದಾರೆ ಎಂಬ ಪ್ರಶ್ನೆಗೆ, ‘ಕುಂಟ ಮಾರಮ್ಮ ಈ ಭಾಗದ ಆದಿ ದೇವತೆ. ಪ್ರತಿ ತಿಂಗಳು ಅಮಾವಾಸ್ಯೆ, ಹುಣ್ಣಿಮೆಗೆ ಈ ರೀತಿ ಆಚರಣೆ ನಡೆಯುತ್ತದೆ. ಶ್ರೀರಾಮುಲು ಇದೇ ಗ್ರಾಮದವರು. ಅವರು ಪೂಜೆ ಮಾಡುತ್ತಾರೊ, ಇಲ್ಲವೊ ಗೊತ್ತಿಲ್ಲ. ಆದರೆ, ಈ ಆಚರಣೆ ಹಿಂದೆ ಚುನಾವಣೆಯ ಉದ್ದೇಶವಿಲ್ಲ‘ ಎಂದು ನಾಗೇಂದ್ರ ಉತ್ತರಿಸಿದರು.</p>.<p>‘ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರು ತಮ್ಮದೇ ವಾಹನಗಳಲ್ಲಿ ಬಂದು ಪ್ರಸಾದ ಸ್ವೀಕರಿಸಿದ್ದಾರೆ’ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಬಾಡೂಟ ಹಾಕುವ ಹಳೇ ಮೈಸೂರು ಸಂಸ್ಕೃತಿ ಕಲ್ಯಾಣ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಮಂಗಳವಾರ ಬೆಂಬಲಿಗರು, ಅಭಿಮಾನಿಗಳಿಗೆ ಬಾಡೂಟ ಏರ್ಪಡಿಸಿದ್ದರು. ಆ ವೇಳೆ ಗಣ್ಯರಿಗಾಗಿ ಹಾಕಿದ್ದ ಶಾಮಿಯಾನ ಕುಸಿಯಿತು. ಆದರೆ, ಯಾರಿಗೂ ತೊಂದರೆಯಾಗಿಲ್ಲ.</p>.<p>ರಾಜ್ಯದ ಗಡಿಯ ಕೊನೆಯ ಗ್ರಾಮವಾದ ಬಳ್ಳಾರಿ ತಾಲ್ಲೂಕಿನ ಜೋಳದರಾಶಿಯ ಕುಂಟ ಮಾರಮ್ಮ ದೇವಸ್ಥಾನದ ಬಳಿ ಬಾಡೂಟಕ್ಕಾಗಿ ಮೂರು ಶಾಮಿಯಾನ ಹಾಕಲಾಗಿತ್ತು. ಬೆಂಬಲಿಗರಿಗೆ ಬೃಹತ್ ಗಾತ್ರದ ಶಾಮಿಯಾನ, ಗಣ್ಯರಿಗೆ ಸಣ್ಣ ಶಾಮಿಯಾನ ಹಾಗೂ ಸಸ್ಯಹಾರಿಗಳಿಗಾಗಿ ಮತ್ತೊಂದು ಶಾಮಿಯಾನ ಸಿದ್ಧಪಡಿಸಲಾಗಿತ್ತು. </p>.<p>ಮಧ್ಯಾಹ್ನ 3.30ರಲ್ಲಿ ಬಿರುಗಾಳಿ ಬೀಸುತ್ತಿದ್ದಂತೆ ಊಟಕ್ಕೆ ಕುಳಿತಿದ್ದವರು ಜಾಗೃತರಾದರು. ಗಾಳಿ ಹೊಡೆತಕ್ಕೆ ಸಿಕ್ಕಿ ನಿಧಾನವಾಗಿ ಕುಸಿದ ಶಾಮಿಯಾನ ಬಹಳಷ್ಟು ಮಂದಿ ಕಷ್ಟಪಟ್ಟು ಹಿಡಿದುಕೊಂಡರು. ಇದರಿಂದ ಯಾರಿಗೂ ಗಾಯಗಳಾಗಿಲ್ಲ. ಶಾಮಿಯಾನ ಕುಸಿಯುಷ್ಟರಲ್ಲಿ ಬಹುತೇಕರ ಊಟ ಮುಗಿದಿತ್ತು.</p>.<p><strong>‘50 ಸಾವಿರ ಜನರಿಗೆ ಪ್ರಸಾದ’:</strong> ‘ಜೋಳದರಾಶಿಯಲ್ಲಿ ಕುಂಟ ಮಾರಮ್ಮ ಹಾಗೂ ಬಾಟೆ ಮಾರಮ್ಮ ಎಂಬ ಅಕ್ಕತಂಗಿ ದೇವಿಯರಿದ್ದಾರೆ. ಅವರಿಗೆ ಸಂಕಲ್ಪ ಮಾಡಿಕೊಂಡರೆ ಅಂದುಕೊಂಡಿದ್ದು ಆಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ತಂದೆ ಕಾಲದಿಂದಲೂ ಮನೆಯವರು ಇಲ್ಲಿಗೆ ನಡೆದುಕೊಳ್ಳುತ್ತಿದ್ದೇವೆ. ಈ ವರ್ಷ ನನ್ನ ಕ್ಷೇತ್ರದ ಸುಖ– ಶಾಂತಿ, ನೆಮ್ಮದಿ, ಮಳೆ– ಬೆಳೆಗೆ ಪ್ರಾರ್ಥಿಸಿ ಜನರೇ ಹಬ್ಬ ಮಾಡುತ್ತಿದ್ದಾರೆ’ ಎಂದು ಶಾಸಕ ನಾಗೇಂದ್ರ ಇದಕ್ಕೂ ಮುನ್ನ ಸ್ಪಷ್ಟಪಡಿಸಿದರು.</p>.<p>‘ಬಳ್ಳಾರಿ ಗ್ರಾಮೀಣ ಕ್ಷೇತ್ರದ ಸುಮಾರು 50 ಸಾವಿರ ಜನ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಅವರೇ ಪ್ರಸಾದ ಮಾಡಿಕೊಂಡು ಹೋಗುತ್ತಿದ್ದಾರೆ’ ಎಂದು ಅವರು ವಿವರಿಸಿದರು.</p>.<p>‘ಚುನಾವಣೆ ಬಂದಾಗ ಕಾಂಗ್ರೆಸ್ಗೆ ಬಾಡೂಟ ನೆನಪಾಗುತ್ತದೆ’ ಎಂದು ಸಚಿವ ಶ್ರೀರಾಮುಲು ಆರೋಪ ಮಾಡಿದ್ದಾರೆ ಎಂಬ ಪ್ರಶ್ನೆಗೆ, ‘ಕುಂಟ ಮಾರಮ್ಮ ಈ ಭಾಗದ ಆದಿ ದೇವತೆ. ಪ್ರತಿ ತಿಂಗಳು ಅಮಾವಾಸ್ಯೆ, ಹುಣ್ಣಿಮೆಗೆ ಈ ರೀತಿ ಆಚರಣೆ ನಡೆಯುತ್ತದೆ. ಶ್ರೀರಾಮುಲು ಇದೇ ಗ್ರಾಮದವರು. ಅವರು ಪೂಜೆ ಮಾಡುತ್ತಾರೊ, ಇಲ್ಲವೊ ಗೊತ್ತಿಲ್ಲ. ಆದರೆ, ಈ ಆಚರಣೆ ಹಿಂದೆ ಚುನಾವಣೆಯ ಉದ್ದೇಶವಿಲ್ಲ‘ ಎಂದು ನಾಗೇಂದ್ರ ಉತ್ತರಿಸಿದರು.</p>.<p>‘ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರು ತಮ್ಮದೇ ವಾಹನಗಳಲ್ಲಿ ಬಂದು ಪ್ರಸಾದ ಸ್ವೀಕರಿಸಿದ್ದಾರೆ’ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>