ಕುಡತಿನಿಯ ಬಿಜೆಪಿ ಮುಖಂಡ ಜಿ.ಗುರುಮೂರ್ತಿ ಮಾತನಾಡಿ, ‘ರೈಲ್ವೆ ಸೇತುವೆ ಕಾಮಗಾರಿಯು ಸುಮಾರು 5 ವರ್ಷಗಳಿಂದ ವಿಳಂಬವಾಗಿ ನಡೆಯುತ್ತಿದ್ದು, ವಿವಿಧ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಜಮೀನುಗಳಿಗೆ ತೆರಳುವ ರೈತರು ಸಂಚಾರಕ್ಕಾಗಿ ನಿತ್ಯ ಪರದಾಡುತ್ತಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ರೈಲ್ವೆ ಮೇಲ್ಮಟ್ಟದ ಸೇತುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು.