ಉಪ್ಪಾರ ಹೊಸಳ್ಳಿ ಗ್ರಾಮದ ಕೆರೆಯ ಪಕ್ಕದ ನೀರು ಶುದ್ದೀಕರಣ ಘಟಕದ ತೊಟ್ಟಿಗಳು ಪಾಚಿಗಟ್ಟಿರುವುದು
ಕೆರೆಯ ನೀರು ತಳಮಟ್ಟಕ್ಕೆ ತಲುಪಿದ್ದು ಇದೇ ನೀರನ್ನು ಬಿಡುತ್ತಿದ್ದಾರೆ. ನೀರು ಮಣ್ಣಿನ ವಾಸನೆಯಿಂದ ಕೂಡಿದೆ
ಪ್ರಹ್ಲಾದ ಉಪ್ಪಾರ, ಹೊಸಳ್ಳಿ ಗ್ರಾಮಸ್ಥ
ದಿನಬಳಕೆ ನೀರಿಗೆ ಯಾವುದೇ ತೊಂದರೆ ಆಗಬಾರದು ಎಂದು ಹಗರಿ ನದಿಯಲ್ಲಿ 7 ಕೊಳವೆಬಾವಿ ಕೊರೆಸಲಾಗಿದ್ದು ಎರಡರಲ್ಲಿ ನೀರು ಸಿಕ್ಕಿದೆ ಜತೆಗೆ ಎರಡು ಖಾಸಗಿ ಕೊಳವೆಬಾವಿಗಳಿಂದಲೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ
ಬಿ.ಎಂ.ಸುನೀತ ರುದ್ರಮುನಿ, ಅಧ್ಯಕ್ಷೆ ಬಲಕುಂದಿ ಗ್ರಾಮ ಪಂಚಾಯಿತಿ
ಮಾರ್ಚ್ 21 ರಿಂದ ತುಂಗಭದ್ರಾ ಬಾಗೇವಾಡಿ ಕಾಲುವೆಗೆ ನೀರು ಸರಬರಾಜು ಮಾಡುವ ಬಗ್ಗೆ ಮೇಲಾಧಿಕಾರಿಗಳು ತಿಳಿಸಿದ್ದು ನೀರು ಬಿಟ್ಟಲ್ಲಿ ಕೆರೆ ತುಂಬಿಸಲು ಪ್ರಯತ್ನಿಸಲಾಗುವುದು
ನಾಗಮಣಿ, ಅತ್ತಲಿ ಪಿಡಿಒ
ತಾಲ್ಲೂಕಿನಾದ್ಯಂತ 36 ಕೆರೆಗಳು ಇವೆ. ಇದರಲ್ಲಿ 4 ಕೆರೆಗಳು ಮಾತ್ರ ತುಂಬಿದ್ದು ಉಳಿದ 32 ಕೆರೆಗಳಿಗೆ ತುಂಗಭದ್ರಾ ಕಾಲುವೆಯ ಬಾಗೇವಾಡಿ ಉಪ ಕಾಲುವೆಗೆ ನೀರು ಬಿಟ್ಟಲ್ಲಿ ತುಂಬಿಸಲು ಕ್ರಮ ಕೈಗೊಳ್ಳಲಾಗುವುದು