ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಭರವಸೆ ಮೂಡಿದ ಪೂರ್ವ ಮುಂಗಾರು: ಬಿತ್ತನೆ ಬೀಜ ವಿತರಣೆ ಶುರು

Published : 27 ಮೇ 2024, 5:24 IST
Last Updated : 27 ಮೇ 2024, 5:24 IST
ಫಾಲೋ ಮಾಡಿ
Comments
ರಾಮದುರ್ಗ ತಾಲ್ಲೂಕಿನ ಕೆ.ಚಂದರಗಿಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಗೆ ಬಂದಿದ್ದ ಜನರು
ರಾಮದುರ್ಗ ತಾಲ್ಲೂಕಿನ ಕೆ.ಚಂದರಗಿಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಗೆ ಬಂದಿದ್ದ ಜನರು
ಮೂಡಲಗಿ ತಾಲ್ಲೂಕಿನ ಹೊಸಟ್ಟಿಯಲ್ಲಿ ರೈತರು ಸೋಯಾಬೀನ್‌ ಬಿತ್ತನೆ ಮಾಡಿದರು
ಮೂಡಲಗಿ ತಾಲ್ಲೂಕಿನ ಹೊಸಟ್ಟಿಯಲ್ಲಿ ರೈತರು ಸೋಯಾಬೀನ್‌ ಬಿತ್ತನೆ ಮಾಡಿದರು
ಬೆಳಗಾವಿ ತಾಲ್ಲೂಕಿನ ತಾರಿಹಾಳ ಬಳಿ ರೈತ ಮಹಿಳೆಯರು ಭೂಮಿ ಸ್ವಚ್ಛಗೊಳಿಸಿದರು
ಬೆಳಗಾವಿ ತಾಲ್ಲೂಕಿನ ತಾರಿಹಾಳ ಬಳಿ ರೈತ ಮಹಿಳೆಯರು ಭೂಮಿ ಸ್ವಚ್ಛಗೊಳಿಸಿದರು
ಹುಕ್ಕೇರಿ ತಾಲ್ಲೂಕಿನ ಕಣಗಲಾ ಪಿಕೆಪಿಎಸ್‌ನಲ್ಲಿ ರಸಗೊಬ್ಬರ ಮೂಟೆಗಳನ್ನು ದಾಸ್ತಾನು ಮಾಡಲಾಯಿತು
ಹುಕ್ಕೇರಿ ತಾಲ್ಲೂಕಿನ ಕಣಗಲಾ ಪಿಕೆಪಿಎಸ್‌ನಲ್ಲಿ ರಸಗೊಬ್ಬರ ಮೂಟೆಗಳನ್ನು ದಾಸ್ತಾನು ಮಾಡಲಾಯಿತು
ಮುಂಗಾರು ಹಂಗಾಮಿನ ಬಿತ್ತನೆಗಾಗಿ ಜಿಲ್ಲೆಯಲ್ಲಿ ರೈತರಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜ ರಸಗೊಬ್ಬರ ಲಭ್ಯವಿದೆ. ಬೇಡಿಕೆಯಂತೆ ಹಂತ–ಹಂತವಾಗಿ ಇನ್ನಷ್ಟು ಬೀಜ ಗೊಬ್ಬರ ತರಿಸಿಕೊಡಲಾಗುವುದು
ಶಿವನಗೌಡ ಪಾಟೀಲ ಜಂಟಿನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ
ಖಾನಾಪುರ ತಾಲ್ಲೂಕಿನಲ್ಲಿ ಭತ್ತ ಪ್ರಮುಖ ಬೆಳೆ. ಇಲ್ಲಿನ ರೈತರು ಭತ್ತದೊಂದಿಗೆ ಗೆಣಸು ಆಲೂಗಡ್ಡೆ ರಾಗಿ ಶೇಂಗಾ ಮತ್ತಿತರ ಬೆಳೆ ಬೆಳೆಯುತ್ತಾರೆ. ಆದರೆ ಸರ್ಕಾರ ಸಬ್ಸಿಡಿ ದರದಲ್ಲಿ ಭತ್ತದ ಬೀಜ ಮಾತ್ರ ವಿತರಿಸುತ್ತದೆ. ಉಳಿದ ಬೆಳೆಗಳ ಬೀಜಗಳನ್ನೂ ಸಬ್ಸಿಡಿ ದರದಲ್ಲೇ ವಿತರಿಸಬೇಕು
ಗುರುಲಿಂಗಯ್ಯ ಪೂಜೇರ ರೈತ ಮಂಗೇನಕೊಪ್ಪ
ಸವದತ್ತಿ ತಾಲ್ಲೂಕಿನಲ್ಲಿ ಬೇಡಿಕೆಯಷ್ಟು ಡಿಎಪಿ ರಸಗೊಬ್ಬರ ಸಿಗುತ್ತಿಲ್ಲ. ಅದನ್ನು ಖರೀದಿಸಿದರೆ ಮತ್ತೊಂದು ಕಂಪನಿ ಗೊಬ್ಬರ ಖರೀದಿಸಲೇಬೇಕು ಎಂದು ವಿತರಕರು ಹೇಳುತ್ತಿದ್ದಾರೆ. ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ಪಡೆದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಸಂಬಂಧ ದೂರು ಕೊಟ್ಟರೂ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ
ಸುರೇಶ ಸಂಪಗಾವಿ ರೈತ ಸವದತ್ತಿ ಡಿಎಪಿ
ರಸಗೊಬ್ಬರದೊಂದಿಗೆ ಮತ್ತೊಂದು ಗೊಬ್ಬರ ಖರೀದಿಸಬೇಕೆಂದು ನಿಯಮವಿಲ್ಲ. ರೈತರು ತಮಗೆ ಬೇಕಿರುವ ಗೊಬ್ಬರವನ್ನಷ್ಟೇ ಖರೀದಿಸಬಹುದು. ಯಾವುದಾದರೂ ವಿತರಕರು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದರೆ ಪರವಾನಗಿ ರದ್ದುಪಡಿಸಲಾಗುವುದು. ಕಳೆದ ವರ್ಷ ನಿಯಮ ಉಲ್ಲಂಘಿಸಿದ 40 ವಿತರಕರಿಗೆ ನೋಟಿಸ್ ನೀಡಲಾಗಿದೆ
ಎಂ.ಐ.ಅತ್ತಾರ್‌ ಕೃಷಿ ಅಧಿಕಾರಿ ಸವದತ್ತಿ
ಚಿಕ್ಕೋಡಿ ತಾಲ್ಲೂಕಿನ ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಬಿತ್ತನೆಗೆ ಹೊಲ ಸಿದ್ಧಗೊಳಿಸಿದ್ದೇವೆ. ಈ ಸಲ ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ರಸಗೊಬ್ಬರ ಸಿಗುವ ನಿರೀಕ್ಷೆ ಇದೆ ತುಕಾರಾಮ ಕೋಳಿ ರೈತ ಕಲ್ಲೋಳಿ ಅನ್ನ ನೀಡುವ ರೈತರಿಗೆ ಸಿಗಬೇಕಾದ ಸೌಕರ್ಯಗಳು ಕಡತಕ್ಕೆ ಮತ್ತು ಮಾತಿಗೆ ಸೀಮಿತವಾಗಬಾರದು. ಮುಂಗಾರು ಹಂಗಾಮು ಆರಂಭಕ್ಕೂ ಮುನ್ನವೇ ಎಲ್ಲ ರೈತರಿಗೂ ಬಿತ್ತನೆ ಬೀಜ ರಸಗೊಬ್ಬರ ಒದಗಿಸಬೇಕು
ಮಹಾಂತೇಶ ಕಮತ  ಅಧ್ಯಕ್ಷ ರಾಜ್ಯ ರೈತ ಸಂಘ ಹಾಗೂ ರೈತ ಕೂಲಿ ಕಾರ್ಮಿಕರ ಹಿತರಕ್ಷಣಾ ಸಂಘ
ಬೈಲಹೊಂಗಲ ಬರದಿಂದ ತತ್ತರಿಸಿದ ನಮಗೆ ಬಿತ್ತನೆ ಬೀಜಗಳ ದರ ಹೆಚ್ಚಿರುವುದು ಸಂಕಷ್ಟ ತಂದಿದೆ. ರೈತರಿಗೆ ಗುಣಮಟ್ಟದ ಬೀಜ ಗೊಬ್ಬರವನ್ನು ರಿಯಾಯ್ತಿ ದರದಲ್ಲಿ ವಿತರಿಸಲು ಕ್ರಮ ವಹಿಸಬೇಕು
ಶ್ರೀಶೈಲ ಹಂಪಿಹೊಳಿ ರೈತ ಬೈಲಹೊಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT