ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರ್ಯಾಂಡ್ ಬೆಂಗಳೂರು | ಬೀದಿ ವ್ಯಾಪಾರಕ್ಕೊಂದು ಸೂರು: ಪಾಲಿಕೆ ಬಜಾರ್‌

Published : 9 ಸೆಪ್ಟೆಂಬರ್ 2024, 21:34 IST
Last Updated : 9 ಸೆಪ್ಟೆಂಬರ್ 2024, 21:34 IST
ಫಾಲೋ ಮಾಡಿ
Comments
ಬೀದಿ ಬದಿ ವ್ಯಾಪಾರಿಗಳ ಹಕ್ಕು ರಕ್ಷಣೆಗೆ ಪೂರಕ
ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳನ್ನು ನಿಯಂತ್ರಿಸಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು 2014ರಲ್ಲಿ ಕೇಂದ್ರ ಸರ್ಕಾರವು ಬೀದಿ ವ್ಯಾಪಾರಿಗಳ ಜೀವನದ ರಕ್ಷಣೆ ಮತ್ತು ವ್ಯಾಪಾರದ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ, ಬಹುತೇಕ ಕಡೆಗಳಲ್ಲಿ ಬೀದಿ ವ್ಯಾಪಾರಿಗಳನ್ನು ಎಬ್ಬಿಸಿ ಕಳುಹಿಸಲಾಗುತ್ತಿತ್ತೇ ಹೊರತು, ಅವರ ಹಕ್ಕುಗಳನ್ನು ರಕ್ಷಿಸುವ ಕೆಲಸಗಳಾಗುತ್ತಿರಲಿಲ್ಲ. ಇಂಥ ಬಜಾರ್‌ಗಳು ಈ ಕಾಯ್ದೆಗೆ ಪೂರಕವಾಗಿವೆ ಎಂದು ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದರು.
ವಿಜಯನಗರ ವ್ಯಾಪ್ತಿಯಲ್ಲಿ ಮತ್ತೆ ಮೂರು ಬಜಾರ್‌
ನಾನು ದೆಹಲಿಗೆ ಹೋದಾಗ ಅಲ್ಲಿನ ಪಾಲಿಕೆ ಬಜಾರ್‌ ನೋಡಿದ್ದೆ. ನಮ್ಮಲ್ಲಿಯೂ ಇಂಥ ಬಜಾರ್‌ ಆಗಬೇಕು ಎಂದು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಮುಂದೆ ಪ್ರಸ್ತಾವ ಇರಿಸಿದ್ದೆ. ಅವರು ಯೋಜನೆಗೆ ಅನುಮೋದನೆ ನೀಡಿ, ಅನುದಾನವನ್ನೂ ಒದಗಿಸಿದರು. ಸುಸಜ್ಜಿತವಾದ ಪಾಲಿಕೆ ಬಜಾರ್‌ ನಿರ್ಮಾಣವಾಗಿದೆ. ಈಗ ಬೀದಿ ವ್ಯಾಪಾರಿಗಳು ಬಜಾರ್‌ಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಮುಂದೆ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಕಡೆ ಇದೇ ರೀತಿ ಪಾಲಿಕೆ ಬಜಾರ್‌ ಮಾಡುವ ಚಿಂತನೆ ಇದೆ.
–ಎಂ.ಕೃಷ್ಣಪ್ಪ, ಶಾಸಕ, ವಿಜಯನಗರ
ಜಾಗ ಇರುವಲ್ಲಿ ಪಾಲಿಕೆ ಬಜಾರ್‌
ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಪಾಲಕೆ ಬಜಾರ್‌ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ಸೂಚನೆ ನೀಡಿದ್ದಾರೆ. ಕೆ.ಆರ್‌. ಮಾರುಕಟ್ಟೆಯಂಥ ದೊಡ್ಡ ಮಾರುಕಟ್ಟೆ ಇರುವಲ್ಲಿ ಪಾಲಿಕೆ ಬಜಾರ್‌ ಕಷ್ಟ. 50–60 ಬೀದಿ ವ್ಯಾಪಾರಿಗಳು ಒಂದೆಡೆ ವ್ಯಾಪಾರ ಮಾಡುತ್ತಿದ್ದರೆ, ಅಲ್ಲಿ ಸ್ಥಳಾವಕಾಶ ಇದ್ದರೆ ನೆಲದಡಿಯಲ್ಲಿ ಮಾರುಕಟ್ಟೆ ನಿರ್ಮಿಸಲಾಗುವುದು. ಬಿಬಿಎಂಪಿ ವತಿಯಿಂದ ಅಂಥ ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಯಲಿದೆ.
–ತುಷಾರ್‌ ಗಿರಿನಾಥ್‌, ಬಿಬಿಎಂಪಿ ಮುಖ್ಯ ಆಯುಕ್ತ
ವ್ಯಾಪಾರಿಗಳು ಏನಾಂತಾರೆ?
ಪಾಲಿಕೆ ಬಜಾರ್‌ಗೆ ವ್ಯಾಪಾರಿಗಳು ಈಗಷ್ಟೇ ಸ್ಥಳಾಂತರಗೊಳ್ಳುತ್ತಿದ್ದಾರೆ. ಒಮ್ಮೆ ಪೂರ್ಣ ಪ್ರಮಾಣದಲ್ಲಿ ವ್ಯಾಪಾರ ಆರಂಭಗೊಂಡ ಬಳಿಕ ವಿಜಯನಗರ ಮೆಟ್ರೊ ನಿಲ್ದಾಣದ ಪಕ್ಕದ ಸರ್ವಿಸ್‌ ರಸ್ತೆಯಲ್ಲಿ ಬೀದಿ ವ್ಯಾಪಾರ ಪೂರ್ಣ ನಿಷೇಧಗೊಳ್ಳಲಿದೆ. ಬೀದಿಯಲ್ಲಿ ವ್ಯಾಪಾರ ಇಲ್ಲದೇ ಇದ್ದಾಗ ಇಲ್ಲೇ ಇರುವ ಪಾಲಿಕೆ ಬಜಾರ್‌ಗೆ ಗ್ರಾಹಕರು ಬಂದೇ ಬರುತ್ತಾರೆ. ನಮ್ಮ ಶಾಸಕರ ಕನಸಿನ ಯೋಜನೆ ಯಶಸ್ವಿಗೊಳ್ಳಲಿದೆ.
–ಅಬ್ದುಲ್‌ ರಿಯಾಜ್‌, ವಿಜಯನಗರ ಹಣ್ಣು ಮತ್ತು ತರಕಾರಿ ಮಾರಾಟಗಾರರ ಸಂಘದ ಕಾರ್ಯದರ್ಶಿ
ಇಲ್ಲಿನ ಶಾಸಕರು ಒಳ್ಳೆಯ ಬಜಾರ್‌ ನಿರ್ಮಾಣ ಮಾಡಿದ್ದಾರೆ. ಬೀದಿ ವ್ಯಾಪಾರಿಗಳು ಇಲ್ಲಿಯೂ ಅಂಗಡಿ ಇಟ್ಟುಕೊಂಡು, ಹೊರಗೆಯೂ ಇನ್ನೊಂದು ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುವುದನ್ನು ಬಿಡಬೇಕು. ಇಲ್ಲೇ ಎಲ್ಲರೂ ವ್ಯಾಪಾರ ಆರಂಭಿಸಿದರೆ ಗ್ರಾಹಕರು ಹೊರಗೆ ಖರೀದಿಸುವುದಿಲ್ಲ. ಇಲ್ಲಿ ಉತ್ತಮ ವ್ಯಾಪಾರ ನಡೆಯಲಿದೆ.
–ಕೆಂಪರಾಜು, ಪೂಜಾ ಸಾಮಗ್ರಿ ವ್ಯಾಪಾರಿ
ನಾನು 50 ವರ್ಷಗಳಿಂದ ಹೊರಗೆ ಮಳೆ, ಬಿಸಿಲು ಲೆಕ್ಕಿಸದೇ ವ್ಯಾಪಾರ ಮಾಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಮಗೆ ಈ ಬಜಾರ್‌ ಮೂಲಕ ರಕ್ಷಣೆ ಸಿಕ್ಕಿದೆ. ಹಳೇ ವ್ಯಾಪಾರಿಗಳನ್ನು ಗುರುತಿಸಿ ಅಂಗಡಿಗಳನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ವ್ಯಾಪಾರ ಆರಂಭಿಸಿರುವ ಕೆಲವರನ್ನು ಹೊರತುಪಡಿಸಿ ಮತ್ತೆಲ್ಲರಿಗೂ ಮಳಿಗೆಗಳು ಸಿಕ್ಕಿವೆ.
–ರಾಮಣ್ಣ, ತೆಂಗಿನಕಾಯಿ ವ್ಯಾಪಾರಿ
ನಿನ್ನೆಯಷ್ಟೇ ಅಂಗಡಿ ತೆರೆದಿದ್ದೇವೆ. ಜನರು ಕುತೂಹಲದಿಂದ ಬಂದು ನೋಡಿ ಹೋಗಿದ್ದಾರೆ. ಮೇಲೆ ಬೀದಿ ವ್ಯಾಪಾರ ನಿಂತರೆ ಜನರು ಬಜಾರ್‌ ಒಳಗೆ ಬರಲಿದ್ದಾರೆ. ಇದೇ ರೀತಿ ನಗರದ ಬೇರೆ ಬೇರೆ ಪ್ರದೇಶದಲ್ಲಿ ಬಜಾರ್‌ ಮಾಡಿದರೆ ನಮ್ಮಂತೆ ದುಡಿದು ತಿನ್ನುವವರಿಗೆ ಅನುಕೂಲವಾಗಲಿದೆ.
–ವಲ್ಲಿ ಕೃಷ್ಣಮೂರ್ತಿ, ಹೂವಿನ ವ್ಯಾಪಾರಿ
ವ್ಯಾಪಾರ ಶುರುವಾಗಿದೆ. ಇನ್ನೊಂದೆರಡು ವಾರ ಹೋದರೆ ವ್ಯಾಪಾರ ಕುದುರಿಕೊಳ್ಳಬಹುದು. ಎಲ್ಲರೂ ಇಲ್ಲೇ ವ್ಯಾಪಾರ ಶುರು ಮಾಡಿದಾಗ ಜನರೂ ಇಲ್ಲೇ ಬರಲಿದ್ದಾರೆ. ಮಳೆ, ಬಿಸಿಲಿನ ಭಯ ಇಲ್ಲದೇ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ.
–ಮಂಜುಳಾ, ತರಕಾರಿ ವ್ಯಾಪಾರಿ
ಪಾಲಿಕೆ ಬಜಾರ್ ಅಂಕಿ ಅಂಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT