ಉಮ್ಮತ್ತೂರಿನ ಉಮೇಶ್ ಅವರು ತಮ್ಮ ಜಮೀನಿನಲ್ಲಿ ಬೆಳೆದಿರುವ ಅಲಸಂದೆ ಬೆಳೆ
ಲಾಭ ನಷ್ಟ ಎನ್ನುವುದಕ್ಕಿಂದ ವ್ಯವಸಾಯವನ್ನು ಬಿಡದೆ ನಂಬಿಕೊಂಡು ಬದುಕುತ್ತಿದ್ದೇವೆ. ಒಂದಲ್ಲ ಒಂದು ಬೆಳೆ ಕೈ ಹಿಡಿದು ಕಾಪಾಡುತ್ತದೆ
ಉಮೇಶ್ ಉಮ್ಮತ್ತೂರು ರೈತ
ಕೃಷಿಯೊಂದಿಗೆ ಹೈನುಗಾರಿಕೆ
ಅಲಸಂದೆ ಕಟಾವು ಪೂರ್ಣಗೊಂಡ ನಂತರ ಉಮೇಶ್ ಬೆಳೆಗಳನ್ನು ಬದಲಿಸುತ್ತಾರೆ. ಟೊಮೆಟೊ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಹೈನುಗಾರಿಕೆಯನ್ನೂ ಮಾಡುತ್ತಿರುವ ಅವರು ನಾಲ್ಕು ಹಸುಗಳನ್ನು ಸಾಕುತ್ತಿದ್ದಾರೆ. ಸದ್ಯ ಎರಡು ಹಸುಗಳು ಮಾತ್ರ ಹಾಲು ಕರೆಯುತ್ತಿವೆ. ಪ್ರತಿದಿನ ಡೇರಿಗೆ 10 ಲೀಟರ್ ಹಾಲು ಹಾಕುವ ಮೂಲಕ ವಾರಕ್ಕೆ ₹2500 ಹಣ ಪಡೆಯುತ್ತಾರೆ. ತಮ್ಮ ಜಮೀನಿನಲ್ಲಿ 10 ಗುಂಟೆ ಪ್ರದೇಶದಲ್ಲಿ ಹಸುಗಳಿಗಾಗಿ ಮೇವು ಬೆಳೆಸಿದ್ದಾರೆ.