<p><strong>ಯಳಂದೂರು:</strong> ತಾಲ್ಲೂಕಿನಾದ್ಯಂತ ಪುನರ್ವಸು ಮಳೆಯ ವೈಭವ ಕಾಡಿತು. ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣದ ನಡುವೆ ನೇಸರನ ಕಣ್ಣಾಮುಚ್ಚಾಲೆ ಆಟವೂ ನಡೆಯಿತು. ಈ ನಡುವೆ ಆಗಾಗ್ಗೆ, ಗಟ್ಟಿ ಮಳೆ, ಮತ್ತೊಮ್ಮೆ ಶೀತ ಗಾಳಿ, ಸೋನೆ ಮಳೆ ದಿನವಿಡೀ ಬಿಟ್ಟುಬಿಟ್ಟು ಸುರಿಯಿತು.</p>.<p>ಬಿಳಿಗಿರಿರಂಗನಬೆಟ್ಟದ ಪರಿಸರದಲ್ಲಿ ಮಂಜಿನ ಹೊದಿಕೆ ಹಾಸಿತ್ತು. ಇಲ್ಲಿನ ನಿವಾಸಿಗಳು ಕೊರೆಯುವ ಚಳಿಗೆ ತರಗುಟ್ಟಿದರು. ಮನೆಯಿಂದ ಹೊರ ಬಾರದೆ ದಿನ ನೂಕಿದರು. ವಾಹನ ಸವಾರರು, ಪ್ರವಾಸಿಗರು ಲೈಟ್ ಹಾಕಿಕೊಂಡು ವಾಹನ ಚಲಾಯಿಸಿದರು.</p>.<p>ಮೂರು ದಿನಗಳ ಹಿಂದೆ ಶುಚಿಗೊಳಿಸಿದ್ದ ಬಟ್ಟೆ ಇನ್ನೂ ಒಣಗುತ್ತಿಲ್ಲ. ಮನೆಯ ಚಾವಣಿಯಿಂದ ನೀರು ಹನಿಯುತ್ತಿದ್ದು, ಕೋಣೆಯೊಳಗೆ ಶೀತ ಹೆಪ್ಪುಗಟ್ಟಿದೆ. ನಿವಾಸಿಗಳಿಗೆ ತಲೆಶೋಲೆ, ನೆಗಡಿ, ಚಳಿ, ಜ್ವರ ಬಾಧಿಸಿದೆ ಎಂದು ಬೆಟ್ಟದ ನಿವಾಸಿಗಳು ಅಲವತ್ತುಕೊಂಡರು.</p>.<p>ಮಂಜಿನ ಚಾದರ ಹೊತ್ತ ಬೆಟ್ಟದ ನಡುವೆ ರಸ್ತೆಯಲ್ಲಿ ವಾಹನ ಚಲಾಯಿಸುವುದೇ ಸವಾಲಾಗಿದೆ. ಎದುರು ಬರುವ ವಾಹನಗಳು ಕಾಣಿಸದಂತೆ ಸಣ್ಣ ಮಳೆ ಹನಿಯುತ್ತಿದೆ. ಎಚ್ಚರ ತಪ್ಪಿದರೆ ಅಪಾಯವೂ ಎದುರಾಗಲಿದೆ ಎಂದು ಚಾಲಕ ನಂಜೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ತಾಲ್ಲೂಕಿನಾದ್ಯಂತ ಪುನರ್ವಸು ಮಳೆಯ ವೈಭವ ಕಾಡಿತು. ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣದ ನಡುವೆ ನೇಸರನ ಕಣ್ಣಾಮುಚ್ಚಾಲೆ ಆಟವೂ ನಡೆಯಿತು. ಈ ನಡುವೆ ಆಗಾಗ್ಗೆ, ಗಟ್ಟಿ ಮಳೆ, ಮತ್ತೊಮ್ಮೆ ಶೀತ ಗಾಳಿ, ಸೋನೆ ಮಳೆ ದಿನವಿಡೀ ಬಿಟ್ಟುಬಿಟ್ಟು ಸುರಿಯಿತು.</p>.<p>ಬಿಳಿಗಿರಿರಂಗನಬೆಟ್ಟದ ಪರಿಸರದಲ್ಲಿ ಮಂಜಿನ ಹೊದಿಕೆ ಹಾಸಿತ್ತು. ಇಲ್ಲಿನ ನಿವಾಸಿಗಳು ಕೊರೆಯುವ ಚಳಿಗೆ ತರಗುಟ್ಟಿದರು. ಮನೆಯಿಂದ ಹೊರ ಬಾರದೆ ದಿನ ನೂಕಿದರು. ವಾಹನ ಸವಾರರು, ಪ್ರವಾಸಿಗರು ಲೈಟ್ ಹಾಕಿಕೊಂಡು ವಾಹನ ಚಲಾಯಿಸಿದರು.</p>.<p>ಮೂರು ದಿನಗಳ ಹಿಂದೆ ಶುಚಿಗೊಳಿಸಿದ್ದ ಬಟ್ಟೆ ಇನ್ನೂ ಒಣಗುತ್ತಿಲ್ಲ. ಮನೆಯ ಚಾವಣಿಯಿಂದ ನೀರು ಹನಿಯುತ್ತಿದ್ದು, ಕೋಣೆಯೊಳಗೆ ಶೀತ ಹೆಪ್ಪುಗಟ್ಟಿದೆ. ನಿವಾಸಿಗಳಿಗೆ ತಲೆಶೋಲೆ, ನೆಗಡಿ, ಚಳಿ, ಜ್ವರ ಬಾಧಿಸಿದೆ ಎಂದು ಬೆಟ್ಟದ ನಿವಾಸಿಗಳು ಅಲವತ್ತುಕೊಂಡರು.</p>.<p>ಮಂಜಿನ ಚಾದರ ಹೊತ್ತ ಬೆಟ್ಟದ ನಡುವೆ ರಸ್ತೆಯಲ್ಲಿ ವಾಹನ ಚಲಾಯಿಸುವುದೇ ಸವಾಲಾಗಿದೆ. ಎದುರು ಬರುವ ವಾಹನಗಳು ಕಾಣಿಸದಂತೆ ಸಣ್ಣ ಮಳೆ ಹನಿಯುತ್ತಿದೆ. ಎಚ್ಚರ ತಪ್ಪಿದರೆ ಅಪಾಯವೂ ಎದುರಾಗಲಿದೆ ಎಂದು ಚಾಲಕ ನಂಜೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>