<p><strong>ಗುಂಡ್ಲುಪೇಟೆ</strong>: ಆಷಾಢ ಮಾಸದ ಮಳೆಯಿಂದಾಗಿ ತಾಲ್ಲೂಕಿನ ಈರುಳ್ಳಿ ಬೆಳೆಗಾರರಲ್ಲಿ ಕಣ್ಣಿರು ತರಿಸಿದೆ. ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ತುಂತುರು ಮಳೆಯಿಂದ ಸಣ್ಣ (ಸಾಂಬಾರ್) ಈರುಳ್ಳಿ ಕೊಯ್ಲಿಗೆ ತೀವ್ರ ತೊಂದರೆಯಾಗಿದೆ.</p>.<p>ಮುಂಗಾರಿನಲ್ಲಿ ತಾಲ್ಲೂಕಿನಾದ್ಯಾಂತ 1,200 ಹೆಕ್ಟೇರ್ ಪ್ರದೇಶದಲ್ಲಿ ಅರಿಶಿನ ಬೆಳೆಯ ಜೊತೆಗೆ ಹಾಗೂ ಪ್ರತ್ಯೇಕವಾಗಿ ಸಣ್ಣ ಈರುಳ್ಳಿಯನ್ನು ರೈತರು ಬೆಳೆದಿದ್ದರು. ಈಗಾಗಲೇ ಕೊಯ್ಯುವ ಹಂತಕ್ಕೆ ಬಂದಿರುವ ಸಣ್ಣ ಈರುಳ್ಳಿಗೆ ಮಳೆ ಅಡ್ಡಿಯಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಈರುಳ್ಳಿ ಕೊಯ್ಯಲು ಆಗುತ್ತಿಲ್ಲ.</p>.<p>ಎರಡು ತಿಂಗಳ ಹಿಂದೆ ಕ್ವಿಂಟಲ್ ಬಿತ್ತನೆ ಈರುಳ್ಳಿಗೆ ₹ 6 ಸಾವಿರ ನೀಡಿ ರೈತರು ಬಿತ್ತನೆ ಮಾಡಿದ್ದಾರೆ. ಇನ್ನೇನು ಫಸಲು ಕೈಗೆ ಸಿಗುವ ಸಂದರ್ಭದಲ್ಲಿ ಮಳೆ ಬಿಡುವು ನೀಡದಿರುವುದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರು ಬೆಳೆದಿರುವ ಈರುಳ್ಳಿ ಜಮೀನಿನಲ್ಲಿ ಕೊಳೆಯುವ ಹಂತ ತಲುಪಿದೆ.</p>.<p>ಈರುಳ್ಳಿ ಈಗಲೇ ಕೀಳದಿದ್ದರೆ ಭೂಮಿಯಲ್ಲಿ ಬೇರು ಬೀಡುತ್ತದೆ. ಅ ಸಂದರ್ಭದಲ್ಲಿ ಕಿತ್ತರೆ ಮಾರಾಟ ಮಾಡುವುದು ಕಷ್ಟ. ಜೆತೆಗೆ ಕಳಪೆ ಗುಣಮಟ್ಟ ಕಾರಣ ನೀಡಿ ತೀರಾ ಕಡಿಮೆ ದರಕ್ಕೆ ಕೇಳುತ್ತಾರೆ ಎನ್ನುತ್ತಾರೆ ಎಂದು ರೈತ ಗಣೇಶ್ ಬೇಸರ ವ್ಯಕ್ತಪಡಿಸಿದರು.</p>.<p>ಮಳೆಯಿಂದ ಈರುಳ್ಳಿ ಕೀಳಲು ಕೂಲಿಯಾಳುಗಳು ಸಿಗುತ್ತಿಲ್ಲ, ಕಿತ್ತರೂ ಕೊಯ್ದು ತುಂಬುವುದರೊಳಗೆ ಕೊಳೆಯುತ್ತದೆ. ಈ ಬೆಳೆ ನಷ್ಟವನ್ನು ಪ್ರಕೃತಿ ವಿಕೋಪ ಎಂದು ಪರಿಗಣಿಸಿ ಸರ್ಕಾರ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಸಾಲ ಮಾಡಿ ಕೃಷಿ ಮಾಡಿರುವ ರೈತರ ಬದುಕು ಕಷ್ಟವಾಗುತ್ತದೆ ಎನ್ನುತ್ತಾರೆ ರೈತ ಮುಖಂಡ ದೇವರಹಳ್ಳಿ ಶಿವಪ್ಪ.</p>.<p>ಬೆಲೆ ಕುಸಿತ: ಈರುಳ್ಳಿ ದರ ಧೀಡಿರ್ ಕುಸಿತದಿಂದ ತಾಲ್ಲೂಕಿನ ರೈತರು ಕಂಗಲಾಗಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಸಣ್ಣ ಈರುಳ್ಳಿಯನ್ನು ಮಾರಲಾಗದೆ, ಜಮೀನಿನಲ್ಲಿ ಇಟ್ಟುಕೊಳ್ಳಲೂ ಸಾಧ್ಯವಾಗದೆ ಪರದಾಡುತ್ತಿದ್ದು ನಷ್ಟದ ಭೀತಿ ಎದುರಿಸುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ ಸಣ್ಣ ಈರುಳ್ಳಿ ಪ್ರಮುಖ ಬೆಳೆಯಾಗಿದ್ದು ಕೂತನೂರು, ಭೀಮನಬೀಡು, ಗೋಪಾಲಪುರ, ಕಳ್ಳಿಪುರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಎರಡು ಎಕರೆಯಿಂದ ಹಿಡಿದು ಹತ್ತು ಎಕರೆಯವರೆಗೂ ಬಿತ್ತನೆ ಮಾಡಿದ್ದು ಲಾಭದ ನಿರೀಕ್ಷೆಯಲ್ಲಿದ್ದ ರೈತ ಕಂಗಲಾಗಿದ್ದಾನೆ.</p>.<p>ಕಳೆದ ತಿಂಗಳು ತಮಿಳುನಾಡು ಮತ್ತು ಕೇರಳ ಮೂಲದ ವ್ಯಾಪಾರಿಗಳು ಕ್ವಿಂಟಲ್ಗೆ ₹5-₹6 ಸಾವಿರ ದರದಲ್ಲಿ ಸಣ್ಣ ಈರುಳ್ಳಿ ಖರೀದಿ ಮಾಡಿದ್ದರು. ಸದ್ಯ ಈರುಳ್ಳಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಕ್ವಿಂಟಲ್ಗೆ ₹ 1500 ರಿಂದ ₹ 1600ಕ್ಕೆ ಕೇಳುತಿದ್ದಾರೆ. ಬಹಳಷ್ಟು ರೈತರು ಕಟಾವು ಮಾಡಿದ ಈರುಳ್ಳಿಯನ್ನು ಜಮೀನಿನಲ್ಲಿ ಗುಡ್ಡೆ ಹಾಕುತ್ತಿದ್ದಾರೆ.</p>.<p>ತಾಲ್ಲೂಕಿನ ತೆರಕಣಾಂಬಿ ಸಂತೆಯಲ್ಲಿ ಈ ಬಾರಿ ರೈತರು ಬಿತ್ತನೆ ಈರುಳ್ಳಿ ಕ್ವಿಂಟಲ್ಗೆ ₹ 5,000 ದಿಂದ 6000 ಕೊಟ್ಟು ಖರೀದಿಸಿದ್ದರು. ನಾಟಿ ಮಾಡಿದ ಬಳಿಕ ಸುತ್ತು ಮಾರಿ ರೋಗದಿಂದ ಕೆಲವರ ಬೆಳೆ ಹಾಳಾದರೆ, ಕೆಲವರಿಗೆ ಇಳುವರಿ ತೀರಾ ಕಡಿಮೆ ಸಿಕ್ಕಿದೆ. ಇದೀಗ ದರವೂ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಈರುಳ್ಳಿ ಬೆಳೆಯಲು ಗೊಬ್ಬರ ಸೇರಿದಂತೆ ಎಕರಗೆ ಸುಮಾರು ₹ 30-35 ಸಾವಿರ ವೆಚ್ಚವಾಗುತ್ತದೆ. ದರ ಕುಸಿತದಿಂದ ಖರ್ಚು ಮಾಡಿದ ಹಣವೂ ಕೈಸೇರದಂತಾಗಿದೆ ಎಂದು ರೈತರು ಅಳಲನ್ನು ತೋಡಿಕೊಳ್ಳುತಿದ್ದಾರೆ.</p>.<p>1,200 ಹೆಕ್ಟೇರ್ನಲ್ಲಿ ಇತರ ಬೆಳೆ ಮಧ್ಯೆ ಸಣ್ಣ ಈರುಳ್ಳಿ ಬಿತ್ತನೆ ಕುಸಿದ ದರ: ಸಂಕಷ್ಟದಲ್ಲಿ ಬೆಳೆಗಾರರು ತಮಿಳುನಾಡಿನಲ್ಲೂ ಈರುಳ್ಳಿಗೆ ಬೇಡಿಕೆ ಇಲ್ಲ</p>.<p> <strong>ನಿರಂತರ ಜಿಟಿ ಮಳೆಯಿಂದಾಗಿ ಸಾಂಬಾರ್ ಈರುಳ್ಳಿ ಕೀಳಲು ಅಡ್ಡಿಯಾಗಿದೆ. ಹಲವರು ಕಿತ್ತು ಮಾರಾಟ ಮಾಡಿದ್ದಾರೆ. </strong></p><p><strong>–ಭಾಸ್ಕರ್ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ</strong> </p>.<p><strong>ತುಂತುರು ಮಳೆಯಿಂದಾಗಿ ಕೊಯ್ದ ಈರುಳ್ಳಿಯನ್ನು ಹೆಚ್ಚು ದಿನ ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಗೆ ಹೆಚ್ಚಿನ ಈರುಳ್ಳಿ ಬಂದಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿದೆ</strong></p><p><strong>– ಗಣೇಶ್ ರೈತ</strong></p>.<p> ‘ತಮಿಳುನಾಡಿಗೆ ಹೆಚ್ಚು ರಫ್ತು’ ಗುಂಡ್ಲುಪೇಟೆ ತಾಲ್ಲೂಕಿನ ಈರುಳ್ಳಿಯು ತಮಿಳುನಾಡಿನ ಮಧುರೈ ಕೊಯಮತ್ತೂರು ಮತ್ತು ಕೇರಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಈ ವರ್ಷ ತಮಿಳುನಾಡಿನಲ್ಲೂ ಹೆಚ್ಚು ಈರುಳ್ಳಿ ಬೆಳೆದಿರುವುದರಿಂದ ದರ ಕುಸಿದಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ</strong>: ಆಷಾಢ ಮಾಸದ ಮಳೆಯಿಂದಾಗಿ ತಾಲ್ಲೂಕಿನ ಈರುಳ್ಳಿ ಬೆಳೆಗಾರರಲ್ಲಿ ಕಣ್ಣಿರು ತರಿಸಿದೆ. ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ತುಂತುರು ಮಳೆಯಿಂದ ಸಣ್ಣ (ಸಾಂಬಾರ್) ಈರುಳ್ಳಿ ಕೊಯ್ಲಿಗೆ ತೀವ್ರ ತೊಂದರೆಯಾಗಿದೆ.</p>.<p>ಮುಂಗಾರಿನಲ್ಲಿ ತಾಲ್ಲೂಕಿನಾದ್ಯಾಂತ 1,200 ಹೆಕ್ಟೇರ್ ಪ್ರದೇಶದಲ್ಲಿ ಅರಿಶಿನ ಬೆಳೆಯ ಜೊತೆಗೆ ಹಾಗೂ ಪ್ರತ್ಯೇಕವಾಗಿ ಸಣ್ಣ ಈರುಳ್ಳಿಯನ್ನು ರೈತರು ಬೆಳೆದಿದ್ದರು. ಈಗಾಗಲೇ ಕೊಯ್ಯುವ ಹಂತಕ್ಕೆ ಬಂದಿರುವ ಸಣ್ಣ ಈರುಳ್ಳಿಗೆ ಮಳೆ ಅಡ್ಡಿಯಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಈರುಳ್ಳಿ ಕೊಯ್ಯಲು ಆಗುತ್ತಿಲ್ಲ.</p>.<p>ಎರಡು ತಿಂಗಳ ಹಿಂದೆ ಕ್ವಿಂಟಲ್ ಬಿತ್ತನೆ ಈರುಳ್ಳಿಗೆ ₹ 6 ಸಾವಿರ ನೀಡಿ ರೈತರು ಬಿತ್ತನೆ ಮಾಡಿದ್ದಾರೆ. ಇನ್ನೇನು ಫಸಲು ಕೈಗೆ ಸಿಗುವ ಸಂದರ್ಭದಲ್ಲಿ ಮಳೆ ಬಿಡುವು ನೀಡದಿರುವುದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರು ಬೆಳೆದಿರುವ ಈರುಳ್ಳಿ ಜಮೀನಿನಲ್ಲಿ ಕೊಳೆಯುವ ಹಂತ ತಲುಪಿದೆ.</p>.<p>ಈರುಳ್ಳಿ ಈಗಲೇ ಕೀಳದಿದ್ದರೆ ಭೂಮಿಯಲ್ಲಿ ಬೇರು ಬೀಡುತ್ತದೆ. ಅ ಸಂದರ್ಭದಲ್ಲಿ ಕಿತ್ತರೆ ಮಾರಾಟ ಮಾಡುವುದು ಕಷ್ಟ. ಜೆತೆಗೆ ಕಳಪೆ ಗುಣಮಟ್ಟ ಕಾರಣ ನೀಡಿ ತೀರಾ ಕಡಿಮೆ ದರಕ್ಕೆ ಕೇಳುತ್ತಾರೆ ಎನ್ನುತ್ತಾರೆ ಎಂದು ರೈತ ಗಣೇಶ್ ಬೇಸರ ವ್ಯಕ್ತಪಡಿಸಿದರು.</p>.<p>ಮಳೆಯಿಂದ ಈರುಳ್ಳಿ ಕೀಳಲು ಕೂಲಿಯಾಳುಗಳು ಸಿಗುತ್ತಿಲ್ಲ, ಕಿತ್ತರೂ ಕೊಯ್ದು ತುಂಬುವುದರೊಳಗೆ ಕೊಳೆಯುತ್ತದೆ. ಈ ಬೆಳೆ ನಷ್ಟವನ್ನು ಪ್ರಕೃತಿ ವಿಕೋಪ ಎಂದು ಪರಿಗಣಿಸಿ ಸರ್ಕಾರ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಸಾಲ ಮಾಡಿ ಕೃಷಿ ಮಾಡಿರುವ ರೈತರ ಬದುಕು ಕಷ್ಟವಾಗುತ್ತದೆ ಎನ್ನುತ್ತಾರೆ ರೈತ ಮುಖಂಡ ದೇವರಹಳ್ಳಿ ಶಿವಪ್ಪ.</p>.<p>ಬೆಲೆ ಕುಸಿತ: ಈರುಳ್ಳಿ ದರ ಧೀಡಿರ್ ಕುಸಿತದಿಂದ ತಾಲ್ಲೂಕಿನ ರೈತರು ಕಂಗಲಾಗಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಸಣ್ಣ ಈರುಳ್ಳಿಯನ್ನು ಮಾರಲಾಗದೆ, ಜಮೀನಿನಲ್ಲಿ ಇಟ್ಟುಕೊಳ್ಳಲೂ ಸಾಧ್ಯವಾಗದೆ ಪರದಾಡುತ್ತಿದ್ದು ನಷ್ಟದ ಭೀತಿ ಎದುರಿಸುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ ಸಣ್ಣ ಈರುಳ್ಳಿ ಪ್ರಮುಖ ಬೆಳೆಯಾಗಿದ್ದು ಕೂತನೂರು, ಭೀಮನಬೀಡು, ಗೋಪಾಲಪುರ, ಕಳ್ಳಿಪುರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಎರಡು ಎಕರೆಯಿಂದ ಹಿಡಿದು ಹತ್ತು ಎಕರೆಯವರೆಗೂ ಬಿತ್ತನೆ ಮಾಡಿದ್ದು ಲಾಭದ ನಿರೀಕ್ಷೆಯಲ್ಲಿದ್ದ ರೈತ ಕಂಗಲಾಗಿದ್ದಾನೆ.</p>.<p>ಕಳೆದ ತಿಂಗಳು ತಮಿಳುನಾಡು ಮತ್ತು ಕೇರಳ ಮೂಲದ ವ್ಯಾಪಾರಿಗಳು ಕ್ವಿಂಟಲ್ಗೆ ₹5-₹6 ಸಾವಿರ ದರದಲ್ಲಿ ಸಣ್ಣ ಈರುಳ್ಳಿ ಖರೀದಿ ಮಾಡಿದ್ದರು. ಸದ್ಯ ಈರುಳ್ಳಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಕ್ವಿಂಟಲ್ಗೆ ₹ 1500 ರಿಂದ ₹ 1600ಕ್ಕೆ ಕೇಳುತಿದ್ದಾರೆ. ಬಹಳಷ್ಟು ರೈತರು ಕಟಾವು ಮಾಡಿದ ಈರುಳ್ಳಿಯನ್ನು ಜಮೀನಿನಲ್ಲಿ ಗುಡ್ಡೆ ಹಾಕುತ್ತಿದ್ದಾರೆ.</p>.<p>ತಾಲ್ಲೂಕಿನ ತೆರಕಣಾಂಬಿ ಸಂತೆಯಲ್ಲಿ ಈ ಬಾರಿ ರೈತರು ಬಿತ್ತನೆ ಈರುಳ್ಳಿ ಕ್ವಿಂಟಲ್ಗೆ ₹ 5,000 ದಿಂದ 6000 ಕೊಟ್ಟು ಖರೀದಿಸಿದ್ದರು. ನಾಟಿ ಮಾಡಿದ ಬಳಿಕ ಸುತ್ತು ಮಾರಿ ರೋಗದಿಂದ ಕೆಲವರ ಬೆಳೆ ಹಾಳಾದರೆ, ಕೆಲವರಿಗೆ ಇಳುವರಿ ತೀರಾ ಕಡಿಮೆ ಸಿಕ್ಕಿದೆ. ಇದೀಗ ದರವೂ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಈರುಳ್ಳಿ ಬೆಳೆಯಲು ಗೊಬ್ಬರ ಸೇರಿದಂತೆ ಎಕರಗೆ ಸುಮಾರು ₹ 30-35 ಸಾವಿರ ವೆಚ್ಚವಾಗುತ್ತದೆ. ದರ ಕುಸಿತದಿಂದ ಖರ್ಚು ಮಾಡಿದ ಹಣವೂ ಕೈಸೇರದಂತಾಗಿದೆ ಎಂದು ರೈತರು ಅಳಲನ್ನು ತೋಡಿಕೊಳ್ಳುತಿದ್ದಾರೆ.</p>.<p>1,200 ಹೆಕ್ಟೇರ್ನಲ್ಲಿ ಇತರ ಬೆಳೆ ಮಧ್ಯೆ ಸಣ್ಣ ಈರುಳ್ಳಿ ಬಿತ್ತನೆ ಕುಸಿದ ದರ: ಸಂಕಷ್ಟದಲ್ಲಿ ಬೆಳೆಗಾರರು ತಮಿಳುನಾಡಿನಲ್ಲೂ ಈರುಳ್ಳಿಗೆ ಬೇಡಿಕೆ ಇಲ್ಲ</p>.<p> <strong>ನಿರಂತರ ಜಿಟಿ ಮಳೆಯಿಂದಾಗಿ ಸಾಂಬಾರ್ ಈರುಳ್ಳಿ ಕೀಳಲು ಅಡ್ಡಿಯಾಗಿದೆ. ಹಲವರು ಕಿತ್ತು ಮಾರಾಟ ಮಾಡಿದ್ದಾರೆ. </strong></p><p><strong>–ಭಾಸ್ಕರ್ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ</strong> </p>.<p><strong>ತುಂತುರು ಮಳೆಯಿಂದಾಗಿ ಕೊಯ್ದ ಈರುಳ್ಳಿಯನ್ನು ಹೆಚ್ಚು ದಿನ ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಗೆ ಹೆಚ್ಚಿನ ಈರುಳ್ಳಿ ಬಂದಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿದೆ</strong></p><p><strong>– ಗಣೇಶ್ ರೈತ</strong></p>.<p> ‘ತಮಿಳುನಾಡಿಗೆ ಹೆಚ್ಚು ರಫ್ತು’ ಗುಂಡ್ಲುಪೇಟೆ ತಾಲ್ಲೂಕಿನ ಈರುಳ್ಳಿಯು ತಮಿಳುನಾಡಿನ ಮಧುರೈ ಕೊಯಮತ್ತೂರು ಮತ್ತು ಕೇರಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಈ ವರ್ಷ ತಮಿಳುನಾಡಿನಲ್ಲೂ ಹೆಚ್ಚು ಈರುಳ್ಳಿ ಬೆಳೆದಿರುವುದರಿಂದ ದರ ಕುಸಿದಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>