ಮಂಗಳೂರು ವಿಶ್ವವಿದ್ಯಾಲಯ ತಂಡ 1991ರಲ್ಲಿ ಪ್ರಥಮ ಬಾರಿ ಚಿನ್ನದ ಪದಕ ಗೆದ್ದುಕೊಂಡಿತ್ತು. ಈಗ ಮತ್ತೆ ಅಪ್ರತಿಮ ಸಾಧನೆ ಮಾಡಿದೆ. ತಂಡದಲ್ಲಿದ್ದ ಆಟಗಾರರ ಭವಿಷ್ಯಕ್ಕೆ ಇದು ಹೊಸ ಹಾದಿ ಆಗಲಿದೆ.
–ಗೋಪಿನಾಥ ಕಾಪಿಕಾಡ್, 1991ರಲ್ಲಿ ತಂಡದಲ್ಲಿದ್ದ ಆಟಗಾರ
ಉತ್ತರ ಭಾರತದ ಬಲಿಷ್ಠ ತಂಡಗಳು ಇದ್ದರೂ ನಮ್ಮ ತಂಡದ ಮೇಲೆ ಭರವಸೆ ಇತ್ತು. ಅದನ್ನು ಆಟಗಾರರು ಕಾಪಾಡಿಕೊಂಡಿದ್ದಾರೆ. ಎಲ್ಲ ವಿಭಾಗಗಳಲ್ಲೂ ಸಮನ್ವಯದ ಆಟವಾಡಿ ಗೆಲುವು ತಂದುಕೊಟ್ಟಿದ್ದಾರೆ.
–ಜೆರಾಲ್ಡ್ ಸಂತೋಷ್ ಡಿಸೋಜ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ
ಶಿಬಿರಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆ ನೀಡಿರುವ ಪ್ರೋತ್ಸಾಹ ಆಟಗಾರರಲ್ಲಿ ಛಲ ಮೂಡಲು ನೆರವಾಗಿತ್ತು. ಉಳಿದುಕೊಳ್ಳಲು ವ್ಯವಸ್ಥೆ ಆಹಾರ ಮತ್ತು ವಾಹನದ ಸೌಲಭ್ಯ ಉಚಿತವಾಗಿ ಲಭಿಸಿದ್ದರಿಂದ ಶಿಸ್ತಿನ ಅಭ್ಯಾಸ ಮಾಡಲು ಸಾಧ್ಯವಾಗಿತ್ತು.