ಶ್ರೀಮತಿ ಸುಶೀಲಮ್ಮ ಗಂಗಾಧರ್ ಕಲ್ಯಾಣ ಮಂಟಪದಲ್ಲಿ ಒಳಗೆ ಹೋಗಿ, ವಿವಾಹ ನಡೆಯುತ್ತಿದ್ದಾಗ ವರನ ಪಕ್ಕ ಕುಳಿತಿದೆ, ನಂತರ ಊಟದ ಕೊಣೆಗೆ ಹೋಗಿ, ಊಟಕ್ಕೆ ಕೂತಿದ್ದವರ ಪಕ್ಕದ ಚೇರ್, ಟೇಬಲ್ ಮೇಲೆ ಕೂತು ಎಲೆಗೆ ಹಾಕಿದ್ದ ಆಹಾರಗಳನ್ನು ತಿಂದಿದೆ. ಈ ಸಮಯದಲ್ಲಿ ಮದುವೆಗೆ ಬಂದಿದ್ದ 5 ಜನರಿಗೆ ಕಚ್ಚಿ ಗಾಯಗೊಳಿಸಿದೆ. ಮದುವೆಯಲ್ಲಿ ಭಾಗವಹಿಸಿದ್ದ ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ ಮತ್ತು ಏಳು ವರ್ಷದ ಮಂಜುಶ್ರೀ ಎಂಬ ಬಾಲಕಿ ಗಾಯಗೊಂಡಿದ್ದಾರೆ.