ಹಿರೇಕೆರೂರು ತಾಲ್ಲೂಕು ಆಸ್ಪತ್ರೆಯ ವಾಣಿಜ್ಯ ಸಂಕೀರ್ಣದ ಮಳಿಗೆಯೊಂದರಲ್ಲಿ ಚಾಲಕ ವಾಸವಿರುವುದು
13 ವೈದ್ಯರ ಹುದ್ದೆ ಮಂಜೂರು 7 ಮಂದಿ ಮಾತ್ರ ಕಾರ್ಯನಿರತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಸಮಸ್ಯೆ
ನಮ್ಮೂರಿನ ಸರ್ಕಾರಿ ಆಸ್ಪತ್ರೆಯಿಂದ ಹಿರೇಕೆರೂರು ತಾಲ್ಲೂಕು ಆಸ್ಪತ್ರೆಗೆ ಬಂದಿದ್ದೇನೆ. ಇಲ್ಲಿ ಚರ್ಮರೋಗದ ವೈದ್ಯರಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗೆ ಹೋಗಲೇ ಬೇಕಾದ ಸ್ಥಿತಿ ಇದೆ
ವಿಜಯ ಮಲ್ನಾಡದ ಹಿರೇಕೆರೂರು ತಾಲ್ಲೂಕಿನ ನಿವಾಸಿ
‘ಚಾಲಕನಿಗೆ ಮನೆಯಾದ ಕ್ಯಾಂಟೀನ್’
ಹಿರೇಕೆರೂರು ತಾಲ್ಲೂಕು ಆಸ್ಪತ್ರೆಯ ಹಿಂಭಾಗದಲ್ಲಿ ಕ್ಯಾಂಟೀನ್ ಮತ್ತು ಹಾಪ್ ಕಾಮ್ಸ್ ಮಳಿಗೆ ತೆರೆಯಲು ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಆದರೆ ಇದುವರೆಗೂ ಮಳಿಗೆಗಳು ಆರಂಭವಾಗಿಲ್ಲ. ಆಸ್ಪತ್ರೆಯ ಆಂಬುಲೆನ್ಸ್ ಚಾಲಕರೊಬ್ಬರು ಕ್ಯಾಂಟೀನ್ ಮಳಿಗೆಯನ್ನು ಮನೆಯನ್ನಾಗಿ ಮಾಡಿಕೊಂಡು ಅಲ್ಲಿಯೇ ಉಳಿದುಕೊಂಡಿದ್ದಾರೆ. ‘ಕ್ಯಾಂಟೀನ್ ಹಾಗೂ ಹಾಪ್ಕಾಮ್ಸ್ ಮಳಿಗೆ ಆರಂಭಿಸುವುದಾಗಿ ಆಸ್ಪತ್ರೆಯವರು ಹೇಳಿದ್ದರು. ಆದರೆ ಇದುವರೆಗೂ ಆರಂಭಿಸಿಲ್ಲ. ಇದರಿಂದ ರೋಗಿಗಳು ಅವರ ಸಂಬಂಧಿಕರು ಆಹಾರ ಹಾಗೂ ಹಣ್ಣುಗಳನ್ನು ತರಲು ಹೊರಗಡೆ ಹೋಗುತ್ತಿದ್ದಾರೆ. ವಾಣಿಜ್ಯ ಸಂಕೀರ್ಣದ ಮಳಿಗೆಗಳನ್ನು ತೆರೆದರೆ ರೋರಿಗಳಿಗೆ ಅನುಕೂಲವಾಗಲಿದೆ’ ಎಂದು ಜನರು ಒತ್ತಾಯಿಸಿದರು.
‘ವೈದ್ಯರ ಕೊರತೆ: ಪ್ರತಿ ತಿಂಗಳು ಪತ್ರ’
‘ವೈದ್ಯರ ಕೊರತೆ ಬಗ್ಗೆ ಪ್ರತಿ ತಿಂಗಳು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತಿದೆ. ಈಗಿರುವ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳಿಗೆ ಯಾವುದೇ ತೊಂದರೆಯಾಗಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ಇಲ್ಲದಿರುವುದರಿಂದ ತುರ್ತು ಚಿಕಿತ್ಸೆ ಇದ್ದಲ್ಲಿ ಬೇರೆ ಕಡೆಯಿಂದ ಕರೆಸಿಕೊಳ್ಳುತ್ತಿದ್ದೇವೆ’ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಹೊನ್ನಪ್ಪ ಜೆ.ಎಂ. ತಿಳಿಸಿದರು.