<p><strong>ರಾಣೆಬೆನ್ನೂರು:</strong> ಬ್ಯಾಡಗಿಯಿಂದ ಮೆಣಸಿನಕಾಯಿ ಚೀಲಗಳನ್ನು ಹೇರಿಕೊಂಡು ರಾಜಸ್ತಾನಕ್ಕೆ ಹೊರಟಿದ್ದ ಲಾರಿಯನ್ನು ತಾಲ್ಲೂಕಿನ ಕಮದೋಡ ಗ್ರಾಮದ ಬಳಿ ತಡೆದು ದರೋಡೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಬ್ಯಾಡಗಿಯ ಬೀರಪ್ಪ ನಿಂಗಪ್ಪ, ಗುಡ್ಡದಬೇವಿನಹಳ್ಳಿಯ ಶಂಕರ ಈರಪ್ಪ ಗುಬ್ಬಿ, ಹರಿಹರದ ಶಿವರಾಜ ಹನುಮಂತಪ್ಪ, ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಶಿವು ಬೆಳ್ಳೂಡಿ ಬಂಧಿತ ಆರೋಪಿಗಳು.</p>.<p>ಫೆ.29 ರಂದು ₹45 ಲಕ್ಷ ಮೌಲ್ಯದ 448 ಮೆಣಸಿನಕಾಯಿ ಚೀಲಗಳನ್ನು ತುಂಬಿಕೊಂಡು ಬ್ಯಾಡಗಿಯಿಂದ ರಾಜಸ್ಥಾನಕ್ಕೆ ಲಾರಿ ಹೊರಟಿತ್ತು. ಕಮದೋಡ ಗ್ರಾಮದ ಬಳಿ ರಾಜಸ್ಥಾನ ಮೂಲದ ಲಾರಿ ಚಾಲಕನ ಕೈಕಾಲು ಕಟ್ಟಿ ಆತನ ಬಳಿ ಇದ್ದ ₹22 ಸಾವಿರ ಹಣ ಮತ್ತು ಮೊಬೈಲ್ ಕಸಿದುಕೊಂಡು ಮೆಣಸಿನಕಾಯಿ ತುಂಬಿದ ಲಾರಿ ಸಮೇತ ಆರೋಪಿಗಳು ಪರಾರಿಯಾಗಿದ್ದರು.</p>.<p>ಲಾರಿಯನ್ನು ಹರಿಹರ ತಾಲ್ಲೂಕಿನ ಶೇರಾಪುರ ಗ್ರಾಮದ ಬಳಿ ಒಯ್ದು ಅದರಲ್ಲಿನ ₹17 ಲಕ್ಷ ಕಿಮ್ಮತ್ತಿನ 45 ಕ್ವಿಂಟಲ್ ಮೆಣಸಿನಕಾಯಿ ಚೀಲಗಳನ್ನು ತೆಗೆದುಕೊಂಡು ಹೋಗಿದ್ದರು. ಹಲಗೇರಿ ಮತ್ತು ಕುಮಾರಪಟ್ಟಣ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ ಲಾರಿ, ಟಾಟಾಏಸಿ ಗೂಡ್ಸ್ ಗಾಡಿ ಹಾಗೂ ಬೊಲೆರೋ ಪಿಕ್ಅಪ್ ವಾಹನ ಸೇರಿದಂತೆ ಒಟ್ಟು ₹ 87 ಲಕ್ಷ ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>.<p>ಡಿವೈಎಸ್ಪಿ ಗಿರೀಶ ಬೋಜಣ್ಣನವರ ನೇತೃತ್ವದಲ್ಲಿ ರಚನೆ ಮಾಡಿದ ಪೊಲೀಸರ ತಂಡದ ಕುಮಾರಪಟ್ಟಣ ಸಿಪಿಐ ಸಿದ್ದೇಶ, ಹಲಗೇರಿ ಠಾಣೆ ಪರಶುರಾಮ ಲಮಾಣಿ, ಕುಮಾರಪಟ್ಟಣದ ಪಿಎಸ್ಐ ಪ್ರವೀಣಕುಮಾರ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾವಗಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು:</strong> ಬ್ಯಾಡಗಿಯಿಂದ ಮೆಣಸಿನಕಾಯಿ ಚೀಲಗಳನ್ನು ಹೇರಿಕೊಂಡು ರಾಜಸ್ತಾನಕ್ಕೆ ಹೊರಟಿದ್ದ ಲಾರಿಯನ್ನು ತಾಲ್ಲೂಕಿನ ಕಮದೋಡ ಗ್ರಾಮದ ಬಳಿ ತಡೆದು ದರೋಡೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಬ್ಯಾಡಗಿಯ ಬೀರಪ್ಪ ನಿಂಗಪ್ಪ, ಗುಡ್ಡದಬೇವಿನಹಳ್ಳಿಯ ಶಂಕರ ಈರಪ್ಪ ಗುಬ್ಬಿ, ಹರಿಹರದ ಶಿವರಾಜ ಹನುಮಂತಪ್ಪ, ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಶಿವು ಬೆಳ್ಳೂಡಿ ಬಂಧಿತ ಆರೋಪಿಗಳು.</p>.<p>ಫೆ.29 ರಂದು ₹45 ಲಕ್ಷ ಮೌಲ್ಯದ 448 ಮೆಣಸಿನಕಾಯಿ ಚೀಲಗಳನ್ನು ತುಂಬಿಕೊಂಡು ಬ್ಯಾಡಗಿಯಿಂದ ರಾಜಸ್ಥಾನಕ್ಕೆ ಲಾರಿ ಹೊರಟಿತ್ತು. ಕಮದೋಡ ಗ್ರಾಮದ ಬಳಿ ರಾಜಸ್ಥಾನ ಮೂಲದ ಲಾರಿ ಚಾಲಕನ ಕೈಕಾಲು ಕಟ್ಟಿ ಆತನ ಬಳಿ ಇದ್ದ ₹22 ಸಾವಿರ ಹಣ ಮತ್ತು ಮೊಬೈಲ್ ಕಸಿದುಕೊಂಡು ಮೆಣಸಿನಕಾಯಿ ತುಂಬಿದ ಲಾರಿ ಸಮೇತ ಆರೋಪಿಗಳು ಪರಾರಿಯಾಗಿದ್ದರು.</p>.<p>ಲಾರಿಯನ್ನು ಹರಿಹರ ತಾಲ್ಲೂಕಿನ ಶೇರಾಪುರ ಗ್ರಾಮದ ಬಳಿ ಒಯ್ದು ಅದರಲ್ಲಿನ ₹17 ಲಕ್ಷ ಕಿಮ್ಮತ್ತಿನ 45 ಕ್ವಿಂಟಲ್ ಮೆಣಸಿನಕಾಯಿ ಚೀಲಗಳನ್ನು ತೆಗೆದುಕೊಂಡು ಹೋಗಿದ್ದರು. ಹಲಗೇರಿ ಮತ್ತು ಕುಮಾರಪಟ್ಟಣ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ ಲಾರಿ, ಟಾಟಾಏಸಿ ಗೂಡ್ಸ್ ಗಾಡಿ ಹಾಗೂ ಬೊಲೆರೋ ಪಿಕ್ಅಪ್ ವಾಹನ ಸೇರಿದಂತೆ ಒಟ್ಟು ₹ 87 ಲಕ್ಷ ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>.<p>ಡಿವೈಎಸ್ಪಿ ಗಿರೀಶ ಬೋಜಣ್ಣನವರ ನೇತೃತ್ವದಲ್ಲಿ ರಚನೆ ಮಾಡಿದ ಪೊಲೀಸರ ತಂಡದ ಕುಮಾರಪಟ್ಟಣ ಸಿಪಿಐ ಸಿದ್ದೇಶ, ಹಲಗೇರಿ ಠಾಣೆ ಪರಶುರಾಮ ಲಮಾಣಿ, ಕುಮಾರಪಟ್ಟಣದ ಪಿಎಸ್ಐ ಪ್ರವೀಣಕುಮಾರ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾವಗಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>