ಹಾವೇರಿ ತಾಲ್ಲೂಕಿನ ನಾಗನೂರು–ಕೂಡಲ ಬಳಿ ವರದಾ ನದಿಯ ಅಚ್ಚುಕಟ್ಟು ಪ್ರದೇಶ ಜಲಾವೃತಗೊಂಡಿರುವುದು
ಹಾವೇರಿ ತಾಲ್ಲೂಕಿನ ನಾಗನೂರು ಬಳಿ ವರದಾ ನದಿ ನೀರಿನಲ್ಲಿ ಇಳಿದಂತೆ ಪೊಲೀಸರು ಅಳವಡಿಸಿರುವ ಬ್ಯಾರಿಕೇಡ್ ಬಳಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು
ಹಾವೇರಿ ತಾಲ್ಲೂಕಿನ ವರದಹಳ್ಳಿ ಗ್ರಾಮ ಹಾಗೂ ಪ್ಲಾಟ್ ನಡುವಿನ ರಸ್ತೆಯವರೆಗೂ ನುಗ್ಗಿರುವ ವರದಾ ನದಿ ನೀರು
ವರದಹಳ್ಳಿ ಗ್ರಾಮದ ರಸ್ತೆಗೆ ಬಂದ ನೀರು ವರದಾ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಆತಂಕ 31.27 ಹೆಕ್ಟೇರ್ ಬೆಳೆ ಹಾನಿ
‘ಮತ್ತೆ 114 ಮನೆಗೆ ಹಾನಿ’
‘ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಶನಿವಾರ ರಾತ್ರಿಯಿಂದ ಭಾನುವಾರ ಸಂಜೆಯವರೆಗೂ 114 ಮನೆಗೆ ಹಾನಿಯಾಗಿದೆ. ಒಂದು ಮನೆಗೆ ಸಂಪೂರ್ಣ ಹಾನಿ ಹಾಗೂ 113 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು. ಮಳೆ ಹಾನಿ ಬಗ್ಗೆ ’ಪ್ರಜಾವಾಣಿ‘ಗೆ ಮಾಹಿತಿ ನೀಡಿದ ಅವರು ‘ಶನಿವಾರ (ಜುಲೈ 20) ಸಂಜೆಯವರೆಗೆ 159 ಮನೆಗಳಿಗೆ ಹಾನಿ ಆಗಿತ್ತು. ಈಗ ಮತ್ತೆ 114 ಮನೆಗಳಿಗೆ ಹಾನಿ ಆಗಿದೆ. ಇದುವರೆಗೂ 273 ಮನೆಗಳಿಗೆ ಹಾನಿಯಾಗಿದೆ’ ಎಂದರು. ‘ಮಾದಾಪುರದ ಮನೆ ಕುಸಿದ ಘಟನೆ ಬಿಟ್ಟರೆ ಬೇರೆ ಯಾವ ಕಡೆಯೂ ಪ್ರಾಣ ಹಾನಿ ಸಂಭವಿಸಿಲ್ಲ. ಬ್ಯಾಡಗಿ ತಾಲ್ಲೂಕಿನ ಶಿಡೇನೂರಿನಲ್ಲಿ ಗೋಡೆ ಕುಸಿದು ಎಮ್ಮೆಕರು ಮೃತಪಟ್ಟಿದೆ’ ಎಂದು ಹೇಳಿದರು. ‘ಜಿಲ್ಲೆಯ ಹಲವೆಡೆ ನದಿ ಪಾತ್ರದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿದ್ದು ಬೆಳೆ ಜಲಾವೃತ್ತಗೊಂಡಿದೆ. ನದಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಅಧಿಕಾರಿಗಳ ಮೂಲಕ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.
31.27 ಹೆಕ್ಟೇರ್ ಬೆಳೆ ಹಾನಿ
ಜಿಲ್ಲೆಯ ಹಲವೆಡೆ ನದಿ ನೀರು ಜಮೀನಿಗೆ ನುಗ್ಗಿದ್ದರಿಂದ 31.27 ಹೆಕ್ಟೇರ್ನಲ್ಲಿದ್ದ ಮುಂಗಾರು ಬೆಳೆ ಹಾನಿಯಾಗಿದೆ. 5.18 ಹೆಕ್ಟೇರ್ನಲ್ಲಿ ಬೆಳೆದಿದ್ದ ಬಾಳೆ 2 ಹೆಕ್ಟೇರ್ನಲ್ಲಿ ಬೆಳೆದಿದ್ದ ಬೆಳ್ಳೂಳ್ಳಿ 0.60 ಹೆಕ್ಟೇರ್ನಲ್ಲಿ ಬೆಳೆದಿದ್ದ ಹಾಗಲಕಾಯಿ 9.49 ಹೆಕ್ಟೇರ್ನಲ್ಲಿದ್ದ ಮೆಣಸಿನಕಾಯಿ 1 ಹೆಕ್ಟೇರ್ನಲ್ಲಿದ್ದ ಕ್ಯಾಬೀಜ್ ಹಾಗೂ 13 ಹೆಕ್ಟೇರ್ನಲ್ಲಿದ್ದ ಇತರೆ ಬೆಳೆ ಹಾನಿ ಆಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.