ಅಫಜಲಪುರ ತಾಲ್ಲೂಕನ್ನು ಶಾಶ್ವತ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಭೀಮಾ ಯೋಜನೆ ಕೆರೆ ತುಂಬುವ ಯೋಜನೆ ನಿಗದಿತ ಅವಧಿಯಲ್ಲಿ ಮುಗಿಯದೆ ಜನರಿಗೆ ರೈತರಿಗೆ ತೊಂದರೆಯಾಗುತ್ತಿದೆ. ಸಚಿವರು ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ಕ್ರಮಕೈಗೊಳ್ಳಬೇಕು
ಗುರು ಚಾಂದಕವಟೆ ರೈತ ಮುಖಂಡ
ಇಳುವರಿ ಕೊರತೆ
ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್.ಗಡಗಿಮನಿ ಮಾತನಾಡಿ ಮಳೆ ಪ್ರಮಾಣ ಬಹಳ ಕಡಿಮೆಯಿದೆ. ಇದರಿಂದ ಕೆಲವು ಗ್ರಾಮಗಳಲ್ಲಿ ತೇವಾಂಶ ಕೊರತೆಯಿಂದ ಬೆಳೆಗಳು ಮೊಳಕೆ ಹಂತದಲ್ಲಿ ಕಮರಿ ಹೋಗಿವೆ. ಇನ್ನೂ ಕೆಲವು ಕಡೆ ಬೆಳವಣಿಗೆ ಕುಂಠಿತವಾಗಿದೆ. ಪ್ರಮುಖವಾಗಿ ಜುಲೈ ಅಗಸ್ಟ್ ಸೆಪ್ಟೆಂಬರ್ನಲ್ಲಿಯೇ ಮಳೆ ಬಂದರೆ ಬೆಳೆಗಳು ಉತ್ತಮವಾಗಿರುತ್ತದೆ. ಆದರೆ ನಿರಂತರವಾಗಿ 3 ತಿಂಗಳು ಮಳೆ ಬರದ ಕಾರಣ ಇಳುವರಿಯಲ್ಲಿ ಭಾರಿ ಹೊಡೆತ ಬೀಳಲಿದೆ. ಈಗಾಗಲೇ ಸಾಕಷ್ಟು ಬೆಳೆಗಳು ಹಾಳಾಗಿವೆ ಎಂದು ತಿಳಿಸಿದರು.