<p><strong>ಶಹಾಬಾದ್</strong>: ದನಗಳ್ಳತನದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಕಾಳಗಿ ಪೊಲೀಸ್ ಠಾಣೆ ಪ್ರದೇಶದ ಕಳ್ಳತ ಪ್ರಕರಣದಲ್ಲಿ ಕಾಳಗಿ ನಿವಾಸಿಗಳಾದ ಜೀಲಾನಿ ಚಿತ್ತಾವಲಿ, ಶ್ರೀಮಂತ ಅಂಬೋಜಿ ಹಾಗೂ ಸೈಯದ್ ನಯೂಮ್ ಬಂಧಿತ ಆರೋಪಿಗಳು. ₹30 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.</p>.<p>ಶಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಕಳವು ಪ್ರಕರಣದಲ್ಲಿ ಶಹಾಬಾದ್ ನಿವಾಸಿ ಮಹಮದ್ ಅಖಲಾಕ್ನನ್ನು ಬಂಧಿಸಿ, ₹30 ಸಾವಿರ ಹಾಗೂ ಕೃತ್ಯಕ್ಕೆ ಬಳಸಿದ್ದ ₹1 ಲಕ್ಷ ಮೌಲ್ಯದ ವಾಹನ ವಶಕ್ಕೆ ಪಡೆಯಲಾಗಿದೆ. ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಶಹಾಬಾದ್ನ ಬಸಯ್ಯ ಮಠ, ಈಶ್ವರ ಪೂಜಾರಿ ಅವರಿಗೆ ಸೇರಿದ್ದ ಒಂದು ಆಕಳು, ಹೋರಿ ಕರು ಸೇರಿ ₹50 ಸಾವಿರ ಮೌಲ್ಯದ ಜಾನುವಾರುಗಳನ್ನು ಕಳ್ಳತನ ಮಾಡಿದ್ದ ಅಖಲಾಕ್, ಅವುಗಳನ್ನು ಮಾರಾಟ ಮಾಡಿದ್ದನ್ನು. ಕಾಳಗಿಯ ಕಾಶಿನಾಥ ಹೊಸಮನಿ ಮತ್ತು ವೀರಭದ್ರಪ್ಪ ಸಲಗರ ಅವರಿಗೆ ಸೇರಿದ್ದ ಎರಡು ಆಕಳುಗಳನ್ನು ಕದ್ದೊಯ್ದ ಜೀಲಾನಿ, ಶ್ರೀಮಂತ ಹಾಗೂ ಸೈಯದ್, ಅವುಗಳನ್ನು ಮಾರಾಟ ಮಾಡಿದ್ದರು ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಬಾದ್</strong>: ದನಗಳ್ಳತನದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಕಾಳಗಿ ಪೊಲೀಸ್ ಠಾಣೆ ಪ್ರದೇಶದ ಕಳ್ಳತ ಪ್ರಕರಣದಲ್ಲಿ ಕಾಳಗಿ ನಿವಾಸಿಗಳಾದ ಜೀಲಾನಿ ಚಿತ್ತಾವಲಿ, ಶ್ರೀಮಂತ ಅಂಬೋಜಿ ಹಾಗೂ ಸೈಯದ್ ನಯೂಮ್ ಬಂಧಿತ ಆರೋಪಿಗಳು. ₹30 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.</p>.<p>ಶಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಕಳವು ಪ್ರಕರಣದಲ್ಲಿ ಶಹಾಬಾದ್ ನಿವಾಸಿ ಮಹಮದ್ ಅಖಲಾಕ್ನನ್ನು ಬಂಧಿಸಿ, ₹30 ಸಾವಿರ ಹಾಗೂ ಕೃತ್ಯಕ್ಕೆ ಬಳಸಿದ್ದ ₹1 ಲಕ್ಷ ಮೌಲ್ಯದ ವಾಹನ ವಶಕ್ಕೆ ಪಡೆಯಲಾಗಿದೆ. ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಶಹಾಬಾದ್ನ ಬಸಯ್ಯ ಮಠ, ಈಶ್ವರ ಪೂಜಾರಿ ಅವರಿಗೆ ಸೇರಿದ್ದ ಒಂದು ಆಕಳು, ಹೋರಿ ಕರು ಸೇರಿ ₹50 ಸಾವಿರ ಮೌಲ್ಯದ ಜಾನುವಾರುಗಳನ್ನು ಕಳ್ಳತನ ಮಾಡಿದ್ದ ಅಖಲಾಕ್, ಅವುಗಳನ್ನು ಮಾರಾಟ ಮಾಡಿದ್ದನ್ನು. ಕಾಳಗಿಯ ಕಾಶಿನಾಥ ಹೊಸಮನಿ ಮತ್ತು ವೀರಭದ್ರಪ್ಪ ಸಲಗರ ಅವರಿಗೆ ಸೇರಿದ್ದ ಎರಡು ಆಕಳುಗಳನ್ನು ಕದ್ದೊಯ್ದ ಜೀಲಾನಿ, ಶ್ರೀಮಂತ ಹಾಗೂ ಸೈಯದ್, ಅವುಗಳನ್ನು ಮಾರಾಟ ಮಾಡಿದ್ದರು ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>