<p><strong>ಪಟ್ನಾ:</strong> ಕರ್ನಾಟಕ ರಾಜ್ಯ ಕ್ರಿಕೆಟ್ ತಂಡಕ್ಕೆ ಈ ಋತುವಿನಲ್ಲಿ ಮಳೆಯು ಬೆನ್ನತ್ತಿ ಕಾಡುತ್ತಿದೆ. </p>.<p>ಕರ್ನಾಟಕ ತಂಡವು ಆಡಿದ ಎಲೀಟ್ ಸಿ ಗುಂಪಿನ ಮೊದಲೆರಡೂ ಪಂದ್ಯಗಳಲ್ಲಿ ಮಳೆಯಿಂದಾಗಿ ಫಲಿತಾಂಶ ಹೊರಹೊಮ್ಮಲಿಲ್ಲ. ಅದರಿಂದಾಗಿ ಕೇವಲ ಎರಡು ಅಂಕಗಳು ಮಾತ್ರ ದೊರೆತಿವೆ. ಇದೀಗ ಬಿಹಾರ ವಿರುದ್ಧ ಪಟ್ನಾದಲ್ಲಿ ನಡೆಯುತ್ತಿರುವ ಪಂದ್ಯಕ್ಕೂ ಮಳೆ ಕಾಡಿದೆ. ಎರಡನೇ ದಿನದಾಟವು ಒಂದೂ ಎಸೆತ ಕಾಣಲಿಲ್ಲ. </p>.<p>ಭಾನುವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಮೈದಾನ ತೇವವಾಗಿತ್ತು. ಬೆಳಿಗ್ಗೆ 9.30ಕ್ಕೆ ಸೂರ್ಯ ಬೆಳಗತೊಡಗಿದಾಗ, ಕ್ರೀಡಾಂಗಣ ಸಿಬ್ಬಂದಿಯು ಆಟದಂಕಣ ಸಿದ್ಧಗೊಳಿಸಲು ಬಹಳಷ್ಟು ಶ್ರಮಪಟ್ಟರು. ಆದರೂ ಇಡೀ ದಿನ ಆಟ ಆರಂಭ ಮಾಡಲಾಗಲಿಲ್ಲ.</p>.<p>ಅಂಪೈರ್ಗಳಾದ ನಿತಿನ್ ಪಂಡಿತ್ ಮತ್ತು ಟೋನಿ ಎಮಾಟಿ ಅವರು ಹಲವು ಬಾರಿ ಪಿಚ್ ಮತ್ತು ಮೈದಾನದ ಪರಿಶೀಲನೆ ನಡೆಸಿದರು. </p>.<p>ಮೊದಲ ದಿನ ಸಾಂಗವಾಗಿ ಆಟ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ ತಂಡವನ್ನು ಕರ್ನಾಟಕವು 143 ರನ್ಗಳಿಗೆ ಆಲೌಟ್ ಮಾಡಿತ್ತು. ಮಯಂಕ್ ಅಗರವಾಲ್ ಪಡೆಯು ದಿನದಾಟದ ಕೊನೆಗೆ 3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 16 ರನ್ ಗಳಿಸಿತ್ತು. </p>.<p>‘ಬೆಳಗಿನ ಜಾವ 3 ರಿಂದ 6ರವರೆಗೆ ಮಳೆಯಾಗಿದೆ. ನಾವು ಕ್ರೀಡಾಂಗಣಕ್ಕೆ ಬಂದ ನಂತರ ಮಳೆಯಾಗಿರಲಿಲ್ಲ. ಬಿಸಿಲು ಕೂಡ ಇತ್ತು. ಆದರೆ ಪಿಚ್ಗಳಿಗೆ ಹೊದಿಕೆಗಳನ್ನು ಹಾಕಿ ನಿರ್ವಹಿಸುವಲ್ಲಿ ವಿಫಲವಾಗಿರಬಹುದು’ ಎಂದು ಕರ್ನಾಟಕ ಮುಖ್ಯ ಕೋಚ್ ಯರೇಗೌಡ ಹೇಳಿದರು. </p>.<p>ಉಳಿದಿರುವ ಇನ್ನೆರಡು ದಿನಗಳಲ್ಲಿ ಮಳೆಯಿಲ್ಲದಿದ್ದರೆ ಆಡಲು ಅವಕಾಶ ಸಿಕ್ಕರೆ ತಂಡವು ಉತ್ತಮ ಮುನ್ನಡೆ ಗಳಿಸಿ, ಗೆಲುವಿಗಾಗಿ ಪ್ರಯತ್ನಿಸುವ ಛಲದಲ್ಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ:</strong> ಕರ್ನಾಟಕ ರಾಜ್ಯ ಕ್ರಿಕೆಟ್ ತಂಡಕ್ಕೆ ಈ ಋತುವಿನಲ್ಲಿ ಮಳೆಯು ಬೆನ್ನತ್ತಿ ಕಾಡುತ್ತಿದೆ. </p>.<p>ಕರ್ನಾಟಕ ತಂಡವು ಆಡಿದ ಎಲೀಟ್ ಸಿ ಗುಂಪಿನ ಮೊದಲೆರಡೂ ಪಂದ್ಯಗಳಲ್ಲಿ ಮಳೆಯಿಂದಾಗಿ ಫಲಿತಾಂಶ ಹೊರಹೊಮ್ಮಲಿಲ್ಲ. ಅದರಿಂದಾಗಿ ಕೇವಲ ಎರಡು ಅಂಕಗಳು ಮಾತ್ರ ದೊರೆತಿವೆ. ಇದೀಗ ಬಿಹಾರ ವಿರುದ್ಧ ಪಟ್ನಾದಲ್ಲಿ ನಡೆಯುತ್ತಿರುವ ಪಂದ್ಯಕ್ಕೂ ಮಳೆ ಕಾಡಿದೆ. ಎರಡನೇ ದಿನದಾಟವು ಒಂದೂ ಎಸೆತ ಕಾಣಲಿಲ್ಲ. </p>.<p>ಭಾನುವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಮೈದಾನ ತೇವವಾಗಿತ್ತು. ಬೆಳಿಗ್ಗೆ 9.30ಕ್ಕೆ ಸೂರ್ಯ ಬೆಳಗತೊಡಗಿದಾಗ, ಕ್ರೀಡಾಂಗಣ ಸಿಬ್ಬಂದಿಯು ಆಟದಂಕಣ ಸಿದ್ಧಗೊಳಿಸಲು ಬಹಳಷ್ಟು ಶ್ರಮಪಟ್ಟರು. ಆದರೂ ಇಡೀ ದಿನ ಆಟ ಆರಂಭ ಮಾಡಲಾಗಲಿಲ್ಲ.</p>.<p>ಅಂಪೈರ್ಗಳಾದ ನಿತಿನ್ ಪಂಡಿತ್ ಮತ್ತು ಟೋನಿ ಎಮಾಟಿ ಅವರು ಹಲವು ಬಾರಿ ಪಿಚ್ ಮತ್ತು ಮೈದಾನದ ಪರಿಶೀಲನೆ ನಡೆಸಿದರು. </p>.<p>ಮೊದಲ ದಿನ ಸಾಂಗವಾಗಿ ಆಟ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ ತಂಡವನ್ನು ಕರ್ನಾಟಕವು 143 ರನ್ಗಳಿಗೆ ಆಲೌಟ್ ಮಾಡಿತ್ತು. ಮಯಂಕ್ ಅಗರವಾಲ್ ಪಡೆಯು ದಿನದಾಟದ ಕೊನೆಗೆ 3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 16 ರನ್ ಗಳಿಸಿತ್ತು. </p>.<p>‘ಬೆಳಗಿನ ಜಾವ 3 ರಿಂದ 6ರವರೆಗೆ ಮಳೆಯಾಗಿದೆ. ನಾವು ಕ್ರೀಡಾಂಗಣಕ್ಕೆ ಬಂದ ನಂತರ ಮಳೆಯಾಗಿರಲಿಲ್ಲ. ಬಿಸಿಲು ಕೂಡ ಇತ್ತು. ಆದರೆ ಪಿಚ್ಗಳಿಗೆ ಹೊದಿಕೆಗಳನ್ನು ಹಾಕಿ ನಿರ್ವಹಿಸುವಲ್ಲಿ ವಿಫಲವಾಗಿರಬಹುದು’ ಎಂದು ಕರ್ನಾಟಕ ಮುಖ್ಯ ಕೋಚ್ ಯರೇಗೌಡ ಹೇಳಿದರು. </p>.<p>ಉಳಿದಿರುವ ಇನ್ನೆರಡು ದಿನಗಳಲ್ಲಿ ಮಳೆಯಿಲ್ಲದಿದ್ದರೆ ಆಡಲು ಅವಕಾಶ ಸಿಕ್ಕರೆ ತಂಡವು ಉತ್ತಮ ಮುನ್ನಡೆ ಗಳಿಸಿ, ಗೆಲುವಿಗಾಗಿ ಪ್ರಯತ್ನಿಸುವ ಛಲದಲ್ಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>