ಭಾನುವಾರ, 27 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
20/10/2024 - 26/10/2024
ವಾರ ಭವಿಷ್ಯ: ತಾಯಿಗಾಗಿ ನೀವು ಹಣ ಖರ್ಚು ಮಾಡ ಬೇಕಾಗುತ್ತದೆ...
Published 26 ಅಕ್ಟೋಬರ್ 2024, 23:36 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಕುಸ್ತಿಪಟುಗಳಿಗೆ ಹೆಚ್ಚು ಅನುಕೂಲ ದೊರೆಯುತ್ತದೆ. ಅವರ ಬೇಕು ಬೇಡಗಳನ್ನು ಸಂಸ್ಥೆಗಳು ಅಥವಾ ಸರ್ಕಾರ ನೋಡಿಕೊಳ್ಳಲು ಸಿದ್ಧವಿರುತ್ತವೆ. ಆದಾಯಉತ್ತಮವಾಗಿರುತ್ತವೆ. ಬಂಧುಗಳನ್ನು ಕೂಡಿಮಾಡಿದ ವ್ಯವಹಾರಗಳಲ್ಲಿ ನಿಮಗೆ ಅನುಕೂಲವಿದ್ದರೂ ಕೆಲವುಬಂಧುಗಳು ಅದನ್ನು ವಿರೋಧಿಸುವರು. ಸರ್ಕಾರಿ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವವರಿಗೆ ವ್ಯವಹಾರ ಮಂದಗತಿ ಇರುತ್ತದೆ. ಕೃಷಿಯಿಂದ ಲಾಭವಿರು ತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಈಗ ಕೆಲವು ಉದರ ಸಂಬಂಧಿ ದೋಷಗಳು ಕಾಣಿಸಬಹುದು, ಎಚ್ಚ ರಿಕೆ ತೆಗೆದುಕೊಳ್ಳಿರಿ. ಸಂಗಾತಿ ಕಡೆಯವರು ನಿಮ್ಮನ್ನು ವಿರೋಧಿಸಬಹುದು.
ವೃಷಭ
ನಿಮ್ಮ ಒಳ್ಳೆಯ ಕೆಲಸಗಳಿಗೆ ಸಮಾಜದಿಂದ ಗೌರವದೊರೆಯುವ ಸಾಧ್ಯತೆ ಇದೆ.ಆದಾಯವು ಸಾಮಾನ್ಯ ಸ್ಥಿತಿಯಲ್ಲಿರುತ್ತದೆ. ಕೆಲಸ ಕಾರ್ಯಗಳಿಗೆ ಬಂಧುಗಳ ಅಥವಾ ಸ್ನೇಹಿತರ ಅಡ್ಡಿ ಬರಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಮಾತ್ರ ಇರುತ್ತದೆ. ಸರ್ಕಾರಿ ಸಾಲಗಳನ್ನು ಈಗ ತೀರಿಸಬಹುದು ಅಥವಾ ಪರಿವರ್ತನೆ ಮಾಡಿ ಕೊಳ್ಳಬಹುದು. ಸ್ಥಿರಾಸ್ತಿ ಮಧ್ಯವರ್ತಿಗಳಿಗೆ ಕಮಿಷನ್ ದೊರೆಯುತ್ತದೆ. ಸಂಗಾತಿಯಿಂದ ಧನ ಸಹಕಾರಗಳನ್ನು ನಿರೀಕ್ಷೆ ಮಾಡಬಹುದು. ಸಾಂಪ್ರದಾಯಿಕ ಕೃಷಿಯಲ್ಲಿರುವವರಿಗೆ ಲಾಭ ಹೆಚ್ಚು. ವಿದೇಶಿ ಮತ್ತು ರಫ್ತು ಮಾಡುವವರಿಗೆ ವ್ಯವಹಾರ ವಿಸ್ತರಿಸಿ ಲಾಭ ಹೆಚ್ಚುತ್ತದೆ. ಅನಿರೀ ಕ್ಷಿತ ಆದಾಯ ಮತ್ತು ಖರ್ಚುಗಳಿರುತ್ತವೆ.
ಮಿಥುನ
ಬುದ್ಧಿವಂತಿಕೆ ನಿಮ್ಮಲ್ಲಿ ಮನೆ ಮಾಡಿ ರುತ್ತದೆ. ಆದಾಯವು ಕಡಿಮೆ ಇದ್ದು ಅದರ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ನಿಮ್ಮ ಸೋದರಿಯರ ಸಹಾಯ ನಿಮ್ಮ ಕೆಲಸ ಕಾರ್ಯ ಗಳಿಗೆ ದೊರೆಯುತ್ತದೆ. ಆಸ್ತಿ ವ್ಯವಹಾರಗಳಲ್ಲಿ ಚೇತರಿಕೆ ಇರುವುದಿಲ್ಲ.ವಿದ್ಯಾರ್ಥಿಗಳಿಗೆಉತ್ತಮ ಕಾಲ ಅದರಲ್ಲೂ ಗಣಿತ ವಿದ್ಯಾರ್ಥಿಗಳಿಗೆ ಬಹಳ ಅಭಿವೃದ್ಧಿ ಇರುತ್ತದೆ. ಮಹಿಳೆಯರು ನಡೆಸುವ ಹಣಕಾಸಿನ ವ್ಯವಹಾರಗಳಲ್ಲಿ ಅಷ್ಟು ಅಭಿವೃದ್ಧಿ ಇರುವುದಿಲ್ಲ. ಸಂಗಾತಿಯ ಸಂತೋಷಕ್ಕಾಗಿ ಹಣ ಖರ್ಚಾಗುತ್ತದೆ. ಎಲೆಕ್ಟ್ರಿಕಲ್ ಉದ್ಯಮ ದಾರರಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ. ದೈವ ಕಾರ್ಯಗಳಿಗಾಗಿ ಹಣ ಖರ್ಚು ಮಾಡು ವಿರಿ.ಸಾಹಸ ಕಲಾವಿದರುಗಳಿಗೆ ಬೇಡಿಕೆ ಹೆಚ್ಚುತ್ತದೆ.
ಕರ್ಕಾಟಕ
ಈ ವಾರ ಸಲ್ಪ ಶೀಘ್ರಕೋಪಿಗಳಾಗು ವಿರಿ, ಸಮಾಧಾನದಿಂದ ಇರುವುದು ನಿಮಗೆ ಒಳ್ಳೆಯದು. ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ನಿಮ್ಮ ಧರ್ಮಕಾರ್ಯಗಳಿಗೆ ಹಿರಿಯರಿಂದ ಸಹಾಯ ದೊರೆಯುತ್ತದೆ. ಸರ್ಕಾರ ಅಥವಾ ಸಂಘ ಸಂಸ್ಥೆಗಳಿಂದ ಆಸ್ತಿ ಪಡೆಯುವ ಯೋಗವಿದೆ. ಫ್ಯಾಶನ್ ಡಿಸೈನ್ ಓದುತ್ತಿರುವವರಿಗೆ ಬಹಳ ಅಭಿವೃದ್ದಿ ಇರುತ್ತದೆ. ಹೆಣ್ಣು ಮಕ್ಕಳ ಅಭಿವೃದ್ಧಿ ಬಹಳ ಉತ್ತಮವಾಗಿ ರುತ್ತದೆ. ಹಳೆಯ ಸಾಲಗಳನ್ನು ಈಗ ತೀರಿಸಿ ಕೊಳ್ಳಬಹುದು. ಸಂಗಾತಿಯ ನಡವಳಿಕೆಗಳು ನಿಮ್ಮ ವಿರುದ್ಧವಾಗಿದ್ದರೂ ಸಹ ಅದನ್ನು ತೋರ್ಪಡಿಸಿಕೊಳ್ಳುವುದಿಲ್ಲ.ಹಿರಿಯರೊಡನೆ ಮಾಡಿದ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ.
ಸಿಂಹ
ಈ ವಾರದ ಆರಂಭ ಬಹಳ ಆನಂದ ದಾಯಕವಾಗಿರುತ್ತದೆ. ಆದಾಯವು ಕಡಿಮೆ ಇದ್ದರೂ ಬೇರೆ ಮೂಲಗಳಿಂದ ಸ್ವಲ್ಪ ಆದಾಯ ಬಂದು ಸರಿದೂಗಿಸಲ್ಪಡುತ್ತದೆ. ಹಿರಿಯರನ್ನು ಬಹಳ ಬುದ್ಧಿವಂತಿಕೆಯಿಂದ ವಶ ಮಾಡಿಕೊಳ್ಳು ವಿರಿ. ಭೂ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತಪಲಿತಾಂಶ ದೊರೆಯುತ್ತದೆ. ಸಂಗಾತಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದು ಒಳ್ಳೆಯದು. ಹಿರಿ ಯರಿಂದ ಕೃಷಿ ಭೂಮಿ ಒದಗುವ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತಯಾರಿಸುವವ ರಿಗೆ ವ್ಯಾಪಾರ ಹೆಚ್ಚುತ್ತದೆ ಸಾಂಪ್ರದಾಯಿಕ ಕೃಷಿಯ ಬೆಳೆಗಳಿಗೆ ಹೆಚ್ಚು ಬೆಲೆ ದೊರೆಯುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಕೃಪಾಶೀರ್ವಾದ ದೊರೆಯುತ್ತದೆ.
ಕನ್ಯಾ
ನಿಮ್ಮ ಸಮಯಕ್ಕೆ ತಕ್ಕಂತೆ ಧರ್ಮವನ್ನು ನೀವು ಅಪ್ಪಿಕೊಳ್ಳುವಿರಿ. ಆದಾಯವುಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಸ್ತ್ರೀಯರು ವಿರೋಧಿಗಳಾಗುವರು.ಆಸ್ತಿಖರೀದಿ ಬಗ್ಗೆ ಆಲೋಚನೆ ಆರಂಭಿಸಬಹುದು. ಮಕ್ಕಳು ನಿಮ್ಮ ಮಾತನ್ನು ಕೇಳದಿರಬಹುದು. ಕೆಲವರ ಮಕ್ಕಳಿಗೆ ವಿದ್ಯೆದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಹಳೆಯನೋವುಗಳುಕೆಲವರನ್ನುಕಾಡಬಹುದು. ಸಂಗಾತಿಯ ಹುಂಬತನ ನಿಮ್ಮನ್ನು ಆಲೋಚನೆಗೀಡು ಮಾಡುತ್ತದೆ. ತೈಲದ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಬಹಳಷ್ಟು ಲಾಭ ವಿದೆ. ಕಣ್ಣಿನ ಬಗ್ಗೆ ಬಹಳ ಎಚ್ಚರ ವಹಿಸಿರಿ. ಕೃಷಿ ಯಿಂದ ಅಲ್ಪ ಲಾಭವಿರುತ್ತದೆ. ಹಿರಿಯರಿಂದ ಸೂಕ್ತ ಸಮಯದಲ್ಲಿ ಧನ ಸಹಾಯ ದೊರಕುತ್ತದೆ.
ತುಲಾ
ಧಾರ್ಮಿಕತೆಯನ್ನುತೋರಿಸಿಕೊಂಡು ಅದರೊಳಗೆ ವ್ಯವಹಾರ ಬುದ್ಧಿಯನ್ನು ಬಳಕೆ ಮಾಡುವಿರಿ. ಆದಾಯವು ಸ್ವಲ್ಪಚೇತರಿಕೆಯತ್ತ ತಿರುಗುತ್ತದೆ. ನಿಮ್ಮ ಧಾರ್ಮಿಕತೆಯ ಸೊಗನ್ನು ಕೆಲವರು ವಿರೋಧಿಸುವರು.ಆಸ್ತಿವಿಚಾರಗಳಲ್ಲಿ ಅತಿಯಾದ ಆತುರ ಬೇಡ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಈಗ ರಾಜಕೀಯ ನಾಯಕರಗಳ ಕೆಲವು ಉಪಾಯಗಳು ಪಲಿಸಿ ಅವರಿಗೆ ಅನುಕೂಲ ಆಗುತ್ತದೆ. ಚರ್ಮರೋಗ ಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಸಹಾಯದಿಂದ ಉದ್ಯೋಗದಲ್ಲಿ ಸ್ಥಿರತೆಯನ್ನು ಕಾಣಬಹುದು. ಅದಿರು ಮಾರಾಟಗಾರರಿಗೆ ಅನಿರೀಕ್ಷಿತಲಾಭ ಇರುತ್ತದೆ. ಉದ್ಯೋಗದಲ್ಲಿ ಏರಿಳಿತವಿರುವುದಿಲ್ಲ. ಹೈನುಗಾರಿಕೆಯಿಂದ ಆದಾಯ ಹೆಚ್ಚುತ್ತದೆ.
ವೃಶ್ಚಿಕ
ಸಂಗೀತಗಾರರಿಗೆ ವಿಶೇಷವಾದ ಗೌರವ ದೊರೆಯುತ್ತದೆ. ಆದಾಯವು ನಿರೀಕ್ಷಿತ ಹಂತಕ್ಕೆ ಬಂದು ತಲುಪುತ್ತದೆ. ಉತ್ತಮವಾಗಿ ಮಾತನಾಡಿ ಜನರನ್ನು ಗೆಲ್ಲುವಿರಿ. ನಿಮ್ಮ ಶತ್ರು ಗಳು ಅವರಾಗಿಯೇ ಸುಮ್ಮನಾಗುವರು. ಆಸ್ತಿ ವಿಚಾರದಲ್ಲಿ ಸಾಕಷ್ಟು ತಾಳ್ಮೆಯಂದಿರಿ ಮತ್ತು ದಾಖಲೆಗಳ ಪರಿಶೀಲನೆ ಅತಿ ಅಗತ್ಯ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವ ರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ನಿಮ್ಮ ಸಾಲಗಳಿಗೆ ಹಿರಿಯರು ಧನಸಹಕಾರ ನೀಡುವವರು. ಉಪಾಧ್ಯಾಯರಿಗೆ ಉನ್ನತ ಸ್ಥಾನ ಸಿಗಬಹುದು. ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವವ ರಿಗೆ ಲಾಭವಿರುತ್ತದೆ. ಸರ್ಕಾರಿ ಕೆಲಸಕಾರ್ಯಗ ಳಲ್ಲಿ ಏರುಪೇರಾಗ ಬಹುದು. ವೃತ್ತಿಯಲ್ಲಿದ್ದ ಗೋಜಲಗಳು ತಿಳಿಯಾಗುತ್ತವೆ.
ಧನು
ಧಾರ್ಮಿಕ ಗುರುಗಳ ಹಗುರ ಹೇಳಿಕೆಗಳು ಅವರಿಗೆ ಮುಜುಗರವನ್ನು ತರುತ್ತದೆ. ಆದಾಯ ಕಡಿಮೆ ಇದ್ದು ಖರ್ಚುಹೆಚ್ಚಾಗುವಸಾಧ್ಯತೆಗಳಿವೆ. ಶತ್ರುಗಳನ್ನು ಈಗ ಭಯ ಬೀಳಿಸಿ ಓಡಿಸುವಿರಿ. ವಾಹನ ರಿಪೇರಿ ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ವಿದೇಶದಲ್ಲಿರು ವವರಿಗೆ ಅವರ ನಿರೀಕ್ಷೆಯ ಆಸ್ತಿ ಕಡಿಮೆ ಬೆಲೆಗೆ ದೊರೆಯಬಹುದು. ವಿದ್ಯಾರ್ಥಿಗಳು ಹೆಚ್ಚುಶ್ರಮ ವಹಿಸಿದ್ದಲ್ಲಿ ಮಾತ್ರ ಸೂಕ್ತಫಲಿತಾಂಶಸಿಗುತ್ತದೆ. ಲೇವಾದೇವಿ ಮಾಡುವವರಿಗೆ ಹಿನ್ನಡೆಯಾ ಗುವ ಸಂದರ್ಭವಿದೆ. ಸಂಗಾತಿಯ ಜೊತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭ ಹೆಚ್ಚುತ್ತದೆ. ಧರ್ಮ ವಿದ್ಯೆಯನ್ನು ಅನುಸರಿಸುತ್ತಿರುವವರಿಗೆ ಲಾಭವಿರುತ್ತದೆ.ವೃತ್ತಿಯಲ್ಲಿದ್ದ ಗೋಜಲಗಳು ತಿಳಿಯಾಗುತ್ತವೆ.
ಮಕರ
ನಿಮ್ಮ ಶ್ರಮದಿಂದ ನೀವು ಹಣ ಗಳಿಕೆ ಮಾಡುವಿರಿ. ವಿದೇಶಿ ಸಂಗೀತ ಮತ್ತು ನೃತ್ಯ ಹೇಳಿಕೊಡುವವರಿಗೆ ಮಾರುಕಟ್ಟೆವಿಸ್ತರಿಸುತ್ತದೆ, ತನ್ಮೂಲಕ ಆದಾಯವು ಹೆಚ್ಚುತ್ತದೆ. ನಿಮ್ಮ ಸಂಬಂಧಿಗಳೇ ನಿಮ್ಮ ಕೆಲಸ ಕಾರ್ಯ ಗಳಲ್ಲಿ ಅಡ್ಡಿ ಬರುವರು. ಭೂಮಿ ವ್ಯವಹಾರ ಮಾಡುವ ವರಿಗೆ ಲಾಭವಿರುತ್ತದೆ. ಸಂಸಾರದಲ್ಲಿ ಸಾಕಷ್ಟು ನೆಮ್ಮದಿಯನ್ನು ಕಾಣಬಹುದು.ವೃತ್ತಿಸಂಬಂಧಿತ ಪರೀಕ್ಷೆಗಳನ್ನು ತೆಗೆದುಕೊಂಡು ಮೇಲ್ದರ್ಜೆಗೆ ಏರಬಹುದು. ವಂಶವಾಹಿನಿಯಿಂದ ಬಂದ ಕಾಯಿಲೆಗಳು ಕೆಲವರನ್ನು ಕಾಡುತ್ತವೆ.ಭೂಮಿ ವ್ಯಾಪಾರ ಮಾಡುವವರಿಗೆ ಲಾಭವಿರುತ್ತದೆ. ಆಭರಣ ತಯಾರಕರಿಗೆ ಸ್ವಲ್ಪ ಹಿನ್ನಡೆ ಆಗಬ ಹುದು. ಕೃಷಿಯಿಂದ ಆದಾಯ ಹೆಚ್ಚುತ್ತದೆ.
ಕುಂಭ
ಶ್ರಮಪಟ್ಟು ದುಡಿಯಲೇಬೇಕಾದ ಅನಿವಾರ್ಯತೆ ಇರುತ್ತದೆ. ಆದಾಯವು ಕಡಿಮೆ ಇದ್ದರೂ ಸಹ ವಿದೇಶಿಮೂಲಗಳಿಂದ ಆದಾಯ ಹೆಚ್ಚಿಸಿಕೊಳ್ಳಬಹುದು. ಬಂಧುಗಳಲ್ಲಿ ಕೆಲವರು ನಿಮ್ಮಕೆಲಸಕಾರ್ಯಗಳಿಗೆಪೂರಕವಾಗುವಂತೆ ಕಂಡರೂ ಸಹ ಒಳಗೊಳಗೆ ಅಡ್ಡಿಮಾಡುವರು. ಹಿರಿಯರನ್ನು ಓಲೈಸಿದಲ್ಲಿ ನಮ್ಮ ಕೆಲಸಕಾರ್ಯ ಗಳು ಸರಾಗವಾಗಿ ಆಗುವುವು. ಪಾಲುದಾರಿಕೆ ವ್ಯವಹಾರಗಳಲ್ಲಿ ಎಚ್ಚರವಾಗಿರಿ.ಆಸ್ತಿಮಾಡುವ ವಿಚಾರದಲ್ಲಿ ಅತಿಆತರಬೇಡ. ತಾಯಿಗಾಗಿಸ್ವಲ್ಪ ಖರ್ಚುಮಾಡಬೇಕಾಗುತ್ತದೆ.ಸಂಗಾತಿಯು ಕೆಲವೊಮ್ಮೆ ನಿಮ್ಮಮಾತುಗಳನ್ನುಕೇಳುವುದಿಲ್ಲ. ಕೃಷಿ ಉತ್ಪನ್ನಗಳನ್ನು ಮಾರುವ ವರಿಗೆ ಹೆಚ್ಚು ಲಾಭವಿರುತ್ತದೆ.
ಮೀನ
ಆಟೋಮೊಬೈಲ್ ಉತ್ಪಾದಕರಿಗೆ ಮಧ್ಯಮ ಗತಿಯ ಫಲಿತಾಂಶವಿರುತ್ತದೆ. ವಾಹನ ವಿತರಣೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಹರೀತವಾದಮಾತಿನಿಂದ ಎಲ್ಲರನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನ ಪಡುವಿರಿ. ಹಿರಿಯರನ್ನು ಓಲೈಸಿ ಕೊಂಡು ನಿಮ್ಮ ಕೆಲಸಗ ಳನ್ನು ಸಾಧಿಸಿಕೊಳ್ಳುವಿರಿ. ಆಸ್ತಿ ವ್ಯವಹಾರಗ ಳಲ್ಲಿ ಅಂತಹ ಲಾಭವಿರುವುದಿಲ್ಲ. ಕೃಷಿ ವಿಜ್ಞಾನ ವನ್ನು ಓದುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇದೆ. ತಾಯಿಗಾಗಿ ನೀವು ಹಣ ಖರ್ಚು ಮಾಡ ಬೇಕಾಗುತ್ತದೆ. ಸಂಗಾತಿಯ ಆಲೋಚನೆಯು ನಿಮ್ಮ ಆಲೋಚನೆಗಿಂತ ಬೇರೆಯಾಗಿರುತ್ತದೆ. ವೃತ್ತಿಯಲ್ಲಿ ಸ್ವಪ್ರಯತ್ನ ಬಹಳ ಮುಖ್ಯ. ಈಗ ಮಹಿಳೆಯರ ಜೊತೆ ಹೆಚ್ಚಿನ ವಾಗ್ವಾದಗಳು ಬೇಡ. ತಾಳ್ಮೆಯಿಂದ ನಿಮಗೆ ಒಳಿತಾಗುತ್ತದೆ.
ADVERTISEMENT
ADVERTISEMENT