ಶನಿವಾರ, 26 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಹೆಚ್ಚಿನ ಇಷ್ಟಾರ್ಥ ಸಿದ್ಧಿಯೋಗ ನಿಮ್ಮ ಪಾಲಿಗಿರುತ್ತದೆ
Published 26 ಅಕ್ಟೋಬರ್ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಒಳ್ಳೆಯ ಮಿತ್ರರಿಂದ ಕಂಪನಿಯ ಮುಖ್ಯವಾದ ವ್ಯಕ್ತಿಯ ಪರಿಚಯ ಹಾಗೂ ಅಭಿವೃದ್ಧಿಯ ಮಾಹಿತಿ ನಿಮಗೆ ಈ ದಿನ ದೊರಯುತ್ತದೆ. ಹೆಚ್ಚಿನ ಇಷ್ಟಾರ್ಥ ಸಿದ್ಧಿಯೋಗ ನಿಮ್ಮ ಪಾಲಿಗಿರುತ್ತದೆ. ಹಣದ ಬಗ್ಗೆ ಚಿಂತೆ ಬೇಡ.
ವೃಷಭ
ದೈಹಿಕ ಕೆಲಸವನ್ನು ಮಾಡಿ ದುಡಿಮೆ ಮಾಡುತ್ತಿರುವವರು ದೇಹಕ್ಕೆ ಸ್ವಲ್ಪಮಟ್ಟಿನ ವಿಶ್ರಾಂತಿ ನೀಡಬೇಕಾಗುತ್ತದೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಉನ್ನತವಾದ ಸ್ಥಾನಮಾನ ಪ್ರಾಪ್ತಿಯಾಗಲಿದೆ.
ಮಿಥುನ
ಸಾಂಸಾರಿಕವಾಗಿ ಸಮಸ್ಯೆಗಳನ್ನು ಪರಿಹಾರಿಸುತ್ತಿದ್ದಂತೆ ಇನ್ನೊಂದು ಮತ್ತೊಂದು ಎಂಬಂತೆ ಒಂದೊಂದೇ ಸಮಸ್ಯೆಗಳು ಬರುತ್ತಿವೆ. ಶಿವನ ಆರಾಧನೆಯಿಂದಾಗಿ ಅಭೀಷ್ಟ ಪ್ರಾಪ್ತಿಯಾಗಿ ಶುಭವಾಗಲಿದೆ.
ಕರ್ಕಾಟಕ
ಹಿರಿಯ ಅಧಿಕಾರಿಗಳ ಸಹಾಯ ಪಡೆದು ವರ್ಗಾವಣೆ ರದ್ದು ಮಾಡಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಮನೋರಂಜನೆಗಾಗಿ ಹಣ ವ್ಯಯ ಮಾಡುವುದು ಸರಿಯಲ್ಲ. ಕೃಷಿಕರಿಗೆ ಕೆಲಸ ಕಾರ್ಯಗಳು ಹೆಚ್ಚಲಿದೆ.
ಸಿಂಹ
ನಿಮ್ಮ ಚಾಣಾಕ್ಷತನ ಮತ್ತು ಸರಳತೆಗೆ ಹಿರಿಯರಿಂದ ಮೆಚ್ಚುಗೆ ದೊರೆಯಲಿದೆ. ಸಂಸ್ಥೆಯೊಂದರ ಸಲಹೆಗಾರರಾಗಿರುವ ನಿಮಗೆ ಹೆಚ್ಚಿನ ಒತ್ತಡ ಮತ್ತು ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದೆ. ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ಇರಲಿ.
ಕನ್ಯಾ
ಅಪರಿಚಿತ ಜಾಗದಲ್ಲಿ, ಅಪರಿಚಿತ ವ್ಯಕ್ತಿಗಳೊಂದಿಗೆ ಉದ್ವೇಗಗೊಳ್ಳದೆ ತಾಳ್ಮೆಯಿಂದಿದ್ದರೆ, ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ. ತರಕಾರಿ ವ್ಯಾಪಾರಸ್ಥರಿಗೆ ಲಾಭ ಕಡಿಮೆಯಿದೆ.
ತುಲಾ
ನೀವು ಬಯಸಿದ ಪ್ರಗತಿಯು ದೇವತಾನುಗ್ರಹದಿಂದ ಪ್ರಾಪ್ತಿಯಾಗಲಿದೆ. ಕೌಟುಂಬಿಕವಾಗಿ ಎಷ್ಟೇ ಕಷ್ಟ ಬಂದರೂ ಹಿಡಿದ ದಾರಿಯನ್ನು ಬಿಡಬಾರದೆಂಬ ನಿಮ್ಮ ಮನೋಭಾವ ದೇಹಾಯಾಸ ಮೂಲಕ ಗುರಿ ತಲುಪಲಿದೆ.
ವೃಶ್ಚಿಕ
ಧೈರ್ಯ ಮತ್ತು ಪ್ರೇರಣಾ ಶಕ್ತಿಯ ಭಾವವನ್ನು ಹೊಂದುವುದರಿಂದ ಸಮಸ್ಯೆಯನ್ನು ಸುಲಭವಾಗಿ ಎದುರಿಸಬಹುದು. ಚಿತ್ರ ವಿತರಕರಿಗೆ ಹೆಚ್ಚಿನ ವರಮಾನ ಅಥವಾ ಪ್ರಶಸ್ತಿ ಹಾಗೂ ಪುರಸ್ಕಾರ ದೊರೆಯಲಿದೆ.
ಧನು
ನೀವೇ ನಡೆಸಬೇಕಾದ ವಿವಾಹದಂತಹ ಸಮಾರಂಭದ ವಿಚಾರದಲ್ಲಿ ನಿಮ್ಮ ಬಹುದಿನದ ಪ್ರಯತ್ನಗಳು ನಿಷ್ಫಲವೆನಿಸುವುದಿಲ್ಲ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರಲು ಬೇಕಾದ ತಯಾರಿಯನ್ನು ಮಾಡಿಕೊಳ್ಳಿ.
ಮಕರ
ಶತ್ರುಗಳ ಉಪಟಳವನ್ನು ಎದುರಿಸುವ ಸಾಮರ್ಥ್ಯ ನಿಮಗೆ ಭಗವಂತ ನೀಡಲಿದ್ದಾನೆ. ಕಿರುತೆರೆ ಕಲಾವಿದರಿಗೆ ವಿಫುಲ ಅವಕಾಶಗಳು ಒದಗಲಿದೆ. ನ್ಯಾಯವಾದಿಗಳಿಗೆ ಜಯ ಪ್ರಾಪ್ತಿಯಾಗಲು ಸತ್ಯ ಮಾರ್ಗದಲ್ಲಿದ್ದರಷ್ಟೇ ಸಾಧ್ಯ.
ಕುಂಭ
ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡುವ ಅವಕಾಶ ಸಿಗುವುದು. ಅದರ ಫಲವಾಗಿ ಪುಣ್ಯ ಸಂಪಾದನೆ ಆಗುತ್ತದೆ. ಶಾರೀರಿಕ ಆಯಾಸ ಇತ್ಯಾದಿ ತೋರಿ ಬಂದರೂ ದಿನಾಂತ್ಯದಲ್ಲಿ ಹಂತಹಂತವಾಗಿ ಪ್ರಗತಿ ದೊರೆಯಲಿದೆ.
ಮೀನ
ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯಲು ಕೆಲ ನಿರ್ಧಾರಗಳನ್ನು ಕೈಗೊಳ್ಳಬೇಕಾಗುವುದು. ನಿಮ್ಮ ದೈನಂದಿನ ಬದುಕಿಗೆ ವಿಶ್ರಾಂತಿ ಮಾಡಬೇಕಾಗುತ್ತದೆ. ಲಲಿತ ಕಲೆಗಳಲ್ಲಿ ಸಫಲತೆಯ ದಾರಿಗಳು ಒದಗಲಿವೆ.
ADVERTISEMENT
ADVERTISEMENT