<p><strong>ಪಟ್ನಾ:</strong> ಕರ್ನಾಟಕದ ಸ್ಪಿನ್ನರ್ದ್ವಯರಾದ ಶ್ರೇಯಸ್ ಗೋಪಾಲ್ ಮತ್ತು ಮೊಹ್ಸಿನ್ ಖಾನ್ ಏಳು ವಿಕೆಟ್ಗಳನ್ನು ಹಂಚಿಕೊಂಡರು. ಇದರಿಂದ ಬಿಹಾರ ತಂಡ, ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದ ಮೊದಲ ದಿನವಾದ ಶನಿವಾರ 143 ರನ್ಗಳಿಗೆ ಉರುಳಿತು.</p>.<p>ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ 14 ಓವರುಗಳಲ್ಲಿ 28 ರನ್ನಿಗೆ 4 ವಿಕೆಟ್ ಪಡೆದರೆ, ಆಫ್ ಸ್ಪಿನ್ನರ್ ಮೊಹ್ಸಿನ್ 16.5 ಓವರುಗಳಲ್ಲಿ 50 ರನ್ನಿಗೆ 3 ವಿಕೆಟ್ ಪಡೆದರು. </p>.<p>ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಆಯ್ಕೆಯಾದ ಸಂಭ್ರಮದಲ್ಲಿರುವ ವಿಜಯಕುಮಾರ್ ವೈಶಾಖ (29ಕ್ಕೆ1) ಜೊತೆಗೆ ಇನ್ನೊಬ್ಬ ವೇಗಿ ವಿ.ಕೌಶಿಕ್ (21ಕ್ಕೆ1) ಅವರು, ಬೌಲಿಂಗ್ ಮಾಡಲು ನಿರ್ಧರಿಸಿದ ಕರ್ನಾಟಕಕ್ಕೆ ಆರಂಭದಲ್ಲಿ ಯಶಸ್ಸು ಗಳಿಸಿಕೊಟ್ಟರು. ನಂತರ ಸ್ಪಿನ್ನರ್ಗಳು ಮೇಲುಗೈ ಸಾಧಿಸಿದರು.</p>.<p>ಆರಂಭ ಆಟಗಾರ ಶರ್ಮನ್ ನಿಗ್ರೋಧ್ 143 ಎಸೆತಗಳನ್ನು ಎದುರಿಸಿ 60 ರನ್ (4x6) ಗಳಿಸಿದರು. ಅವರನ್ನು ಬಿಟ್ಟರೆ ಹೆಚ್ಚಿನ ಕೊಡುಗೆ ನೀಡಿದವರು ಬಿಪಿನ್ ಸೌರಬ್. ಬಿರುಸಿನ ಆಟವಾಡಿದ ಅವರು 38 ಎಸೆತಗಳಲ್ಲಿ 31 ರನ್ ಗಳಿಸಿದರು.</p>.<p>ಮಂದ ಬೆಳಕಿನಿಂದ ಮೊದಲ ದಿನದಾಟ ಬೇಗನೇ ಕೊನೆಗೊಳಿಸದಾಗ ಕರ್ನಾಟಕ ಮೂರು ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 16 ರನ್ ಗಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ:</strong> ಕರ್ನಾಟಕದ ಸ್ಪಿನ್ನರ್ದ್ವಯರಾದ ಶ್ರೇಯಸ್ ಗೋಪಾಲ್ ಮತ್ತು ಮೊಹ್ಸಿನ್ ಖಾನ್ ಏಳು ವಿಕೆಟ್ಗಳನ್ನು ಹಂಚಿಕೊಂಡರು. ಇದರಿಂದ ಬಿಹಾರ ತಂಡ, ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದ ಮೊದಲ ದಿನವಾದ ಶನಿವಾರ 143 ರನ್ಗಳಿಗೆ ಉರುಳಿತು.</p>.<p>ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ 14 ಓವರುಗಳಲ್ಲಿ 28 ರನ್ನಿಗೆ 4 ವಿಕೆಟ್ ಪಡೆದರೆ, ಆಫ್ ಸ್ಪಿನ್ನರ್ ಮೊಹ್ಸಿನ್ 16.5 ಓವರುಗಳಲ್ಲಿ 50 ರನ್ನಿಗೆ 3 ವಿಕೆಟ್ ಪಡೆದರು. </p>.<p>ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಆಯ್ಕೆಯಾದ ಸಂಭ್ರಮದಲ್ಲಿರುವ ವಿಜಯಕುಮಾರ್ ವೈಶಾಖ (29ಕ್ಕೆ1) ಜೊತೆಗೆ ಇನ್ನೊಬ್ಬ ವೇಗಿ ವಿ.ಕೌಶಿಕ್ (21ಕ್ಕೆ1) ಅವರು, ಬೌಲಿಂಗ್ ಮಾಡಲು ನಿರ್ಧರಿಸಿದ ಕರ್ನಾಟಕಕ್ಕೆ ಆರಂಭದಲ್ಲಿ ಯಶಸ್ಸು ಗಳಿಸಿಕೊಟ್ಟರು. ನಂತರ ಸ್ಪಿನ್ನರ್ಗಳು ಮೇಲುಗೈ ಸಾಧಿಸಿದರು.</p>.<p>ಆರಂಭ ಆಟಗಾರ ಶರ್ಮನ್ ನಿಗ್ರೋಧ್ 143 ಎಸೆತಗಳನ್ನು ಎದುರಿಸಿ 60 ರನ್ (4x6) ಗಳಿಸಿದರು. ಅವರನ್ನು ಬಿಟ್ಟರೆ ಹೆಚ್ಚಿನ ಕೊಡುಗೆ ನೀಡಿದವರು ಬಿಪಿನ್ ಸೌರಬ್. ಬಿರುಸಿನ ಆಟವಾಡಿದ ಅವರು 38 ಎಸೆತಗಳಲ್ಲಿ 31 ರನ್ ಗಳಿಸಿದರು.</p>.<p>ಮಂದ ಬೆಳಕಿನಿಂದ ಮೊದಲ ದಿನದಾಟ ಬೇಗನೇ ಕೊನೆಗೊಳಿಸದಾಗ ಕರ್ನಾಟಕ ಮೂರು ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 16 ರನ್ ಗಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>