<p><strong>ಡೆಹ್ರಾಡೂನ್</strong>: ಕನ್ನಡಿಗ ಆರ್. ಸಮರ್ಥ್ ಅವರ ಶತಕದ ಬಲದಿಂದ ಉತ್ತರಾಖಂಡ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ವಿದರ್ಭ ಎದುರು ದಿಟ್ಟ ಹೋರಾಟ ನಡೆಸಿದೆ.</p>.<p>ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ತಂಡವು 88 ಓವರ್ಗಳಲ್ಲಿ 326 ರ್ ಗಳಿಸಿತು. ಇದಕ್ಕುತ್ತರವಾಗಿ ಉತ್ತರಾಖಂಡ ತಂಡವು ಎರಡನೇ ದಿನವಾದ ಭಾನುವಾರ 87 ಓವರ್ಗಳಲ್ಲಿ 7 ವಿಕೆಟ್ಗಳಿಗೆ 242 ರನ್ ಗಳಿಸಿತು. </p>.<p>ಉತ್ತರಾಖಂಡ ತಂಡದ ನಾಯಕ ಸಮರ್ಥ್ ಅವರು 241 ಎಸೆತಗಳಲ್ಲಿ 119 ರನ್ ಗಳಿಸಿದರು. 31 ವರ್ಷದ ಬ್ಯಾಟರ್ ಸಮರ್ಥ್ ಅವರು ಈ ಋತುವಿನಲ್ಲಿ ಕರ್ನಾಟಕದಿಂದ ಉತ್ತರಾಖಂಡಕ್ಕೆ ವಲಸೆ ಹೋಗಿದ್ದಾರೆ. ಸಮರ್ಥ ಬಳಗವು ಮೊದಲ ಇನಿಂಗ್ಸ್ ಮುನ್ನಡೆ ಪಡೆಯಲು ಇನ್ನೂ 84 ರನ್ ಗಳಿಸಬೇಕಿದೆ. </p>.<p><strong>ದೆಹಲಿಗೆ ಪರದಾಟ</strong>: ಅಸ್ಸಾಂ ತಂಡದ ಎದುರು ದೆಹಲಿಯ ಬ್ಯಾಟರ್ಗಳು ಪರದಾಡಿದರು. ಇದರಿಂದಾಗಿ ತಂಡವು ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸುವ ಆತಂಕದಲ್ಲಿದೆ. </p>.<p>ಅಸ್ಸಾಂ ತಂಡವುಗಳಿಸಿರುವ 330 ರನ್ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ದೆಹಲಿ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ 214 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಅಸ್ಸಾಂ ತಂಡದ ಸ್ವರೂಪಂ ಪುರಕಾಯಸ್ಥ (46ಕ್ಕೆ3) ಪೆಟ್ಟು ನೀಡಿದರು. ತಂಡವು ಹಿನ್ನಡೆ ತಪ್ಪಿಸಿಕೊಳ್ಳಲು ಇನ್ನೂ 116 ರನ್ ಗಳಿಸಬೇಕಿದೆ.</p>.<p><strong>ಸಂಕ್ಷಿಪ್ತ ಸ್ಕೋರು:</strong></p><p><strong>ಡೆಹ್ರಾಡೂನ್ – ವಿದರ್ಭ:</strong> 88 ಓವರ್ಗಳಲ್ಲಿ 326 (ಧ್ರುವ ಶೋರೆ 35, ದಾನೀಶ್ ಮಳೆವರ್ 56, ಯಶ್ ರಾಥೋಡ್ 135, ಮಯಂಕ್ ಮಿಶ್ರಾ 72ಕ್ಕೆ3, ಅವನೀಶ್ ಸುಧಾ 35ಕ್ಕೆ2, ಸ್ವಪ್ನಿಲ್ ಸಿಂಗ್ 70ಕ್ಕೆ2) <strong>ಉತ್ತರಾಖಂಡ</strong>: 87 ಓವರ್ಗಳಲ್ಲಿ 7ಕ್ಕೆ242 (ಆರ್. ಸಮರ್ಥ್ 119, ಅಕ್ಷಯ್ ವಖಾರೆ 47ಕ್ಕೆ3)</p>.<p><strong>ನವದೆಹಲಿ – ಅಸ್ಸಾಂ:</strong> 330 (ಶಿವಶಂಕರ್ ರಾಯ್ 59, ಸುಮಿತ್ ಗಡಿಗಾಂವ್ಕರ್ 162, ಹರ್ಷಿತ್ ರಾಣಾ 80ಕ್ಕೆ5) <strong>ದೆಹಲಿ</strong>: 6ಕ್ಕೆ214 (ಹಿಮ್ಮತ್ ಸಿಂಗ್ 55, ಸ್ವರೂಪಂ ಪುರಕಾಯಸ್ಥ 46ಕ್ಕೆ3) </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹ್ರಾಡೂನ್</strong>: ಕನ್ನಡಿಗ ಆರ್. ಸಮರ್ಥ್ ಅವರ ಶತಕದ ಬಲದಿಂದ ಉತ್ತರಾಖಂಡ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ವಿದರ್ಭ ಎದುರು ದಿಟ್ಟ ಹೋರಾಟ ನಡೆಸಿದೆ.</p>.<p>ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ತಂಡವು 88 ಓವರ್ಗಳಲ್ಲಿ 326 ರ್ ಗಳಿಸಿತು. ಇದಕ್ಕುತ್ತರವಾಗಿ ಉತ್ತರಾಖಂಡ ತಂಡವು ಎರಡನೇ ದಿನವಾದ ಭಾನುವಾರ 87 ಓವರ್ಗಳಲ್ಲಿ 7 ವಿಕೆಟ್ಗಳಿಗೆ 242 ರನ್ ಗಳಿಸಿತು. </p>.<p>ಉತ್ತರಾಖಂಡ ತಂಡದ ನಾಯಕ ಸಮರ್ಥ್ ಅವರು 241 ಎಸೆತಗಳಲ್ಲಿ 119 ರನ್ ಗಳಿಸಿದರು. 31 ವರ್ಷದ ಬ್ಯಾಟರ್ ಸಮರ್ಥ್ ಅವರು ಈ ಋತುವಿನಲ್ಲಿ ಕರ್ನಾಟಕದಿಂದ ಉತ್ತರಾಖಂಡಕ್ಕೆ ವಲಸೆ ಹೋಗಿದ್ದಾರೆ. ಸಮರ್ಥ ಬಳಗವು ಮೊದಲ ಇನಿಂಗ್ಸ್ ಮುನ್ನಡೆ ಪಡೆಯಲು ಇನ್ನೂ 84 ರನ್ ಗಳಿಸಬೇಕಿದೆ. </p>.<p><strong>ದೆಹಲಿಗೆ ಪರದಾಟ</strong>: ಅಸ್ಸಾಂ ತಂಡದ ಎದುರು ದೆಹಲಿಯ ಬ್ಯಾಟರ್ಗಳು ಪರದಾಡಿದರು. ಇದರಿಂದಾಗಿ ತಂಡವು ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸುವ ಆತಂಕದಲ್ಲಿದೆ. </p>.<p>ಅಸ್ಸಾಂ ತಂಡವುಗಳಿಸಿರುವ 330 ರನ್ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ದೆಹಲಿ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ 214 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಅಸ್ಸಾಂ ತಂಡದ ಸ್ವರೂಪಂ ಪುರಕಾಯಸ್ಥ (46ಕ್ಕೆ3) ಪೆಟ್ಟು ನೀಡಿದರು. ತಂಡವು ಹಿನ್ನಡೆ ತಪ್ಪಿಸಿಕೊಳ್ಳಲು ಇನ್ನೂ 116 ರನ್ ಗಳಿಸಬೇಕಿದೆ.</p>.<p><strong>ಸಂಕ್ಷಿಪ್ತ ಸ್ಕೋರು:</strong></p><p><strong>ಡೆಹ್ರಾಡೂನ್ – ವಿದರ್ಭ:</strong> 88 ಓವರ್ಗಳಲ್ಲಿ 326 (ಧ್ರುವ ಶೋರೆ 35, ದಾನೀಶ್ ಮಳೆವರ್ 56, ಯಶ್ ರಾಥೋಡ್ 135, ಮಯಂಕ್ ಮಿಶ್ರಾ 72ಕ್ಕೆ3, ಅವನೀಶ್ ಸುಧಾ 35ಕ್ಕೆ2, ಸ್ವಪ್ನಿಲ್ ಸಿಂಗ್ 70ಕ್ಕೆ2) <strong>ಉತ್ತರಾಖಂಡ</strong>: 87 ಓವರ್ಗಳಲ್ಲಿ 7ಕ್ಕೆ242 (ಆರ್. ಸಮರ್ಥ್ 119, ಅಕ್ಷಯ್ ವಖಾರೆ 47ಕ್ಕೆ3)</p>.<p><strong>ನವದೆಹಲಿ – ಅಸ್ಸಾಂ:</strong> 330 (ಶಿವಶಂಕರ್ ರಾಯ್ 59, ಸುಮಿತ್ ಗಡಿಗಾಂವ್ಕರ್ 162, ಹರ್ಷಿತ್ ರಾಣಾ 80ಕ್ಕೆ5) <strong>ದೆಹಲಿ</strong>: 6ಕ್ಕೆ214 (ಹಿಮ್ಮತ್ ಸಿಂಗ್ 55, ಸ್ವರೂಪಂ ಪುರಕಾಯಸ್ಥ 46ಕ್ಕೆ3) </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>