<p><strong>ಚಿಂಚೋಳಿ:</strong> ಪಟ್ಟಣದ ಹೊರ ವಲಯದಲ್ಲಿರುವ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕ ಬೀಗ ತೆರೆದರೂ ಕಾರ್ಯಾರಂಭ ಮಾಡದಿರುವ ಕಾರಣ ತಾಲ್ಲೂಕಿಗೆ ದಲ್ಲಾಳಿಗಳು ಲಗ್ಗೆಯಿಟ್ಟಿದ್ದಾರೆ.</p>.<p>ಟನ್ ಕಬ್ಬಿಗೆ ₹2,200 –₹2,500 ನೀಡುತ್ತೇವೆ ಎಂದು ಕಬ್ಬು ಬೆಳೆಗಾರರ ಬಳಿಗೆ ದೌಡಾಯಿಸಿದ್ದಾರೆ ಎಂದು ಕಬ್ಬು ಬೆಳೆಗಾರರು ಪ್ರಜಾವಾಣಿಗೆ ತಿಳಿಸಿದ್ದಾರೆ.</p>.<p>ದಲ್ಲಾಳಿಗಳು ಮಶೀನ್ನಿಂದ ಕತ್ತರಿಸುತ್ತೇವೆ ಎಂದರೆ ಇನ್ನೂ ಕೆಲವರು ಕೂಲಿ ಕಾರ್ಮಿಕರಿಂದ ಕತ್ತರಿಸುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಬೆಳೆಗಾರರು ದೂರಿದ್ದಾರೆ.</p>.<p>ಸಿದ್ಧಸಿರಿ ಕಂಪನಿ ನಂಬಿ ಕಬ್ಬು ಬೆಳೆದ ರೈತರು ಈಗ ಯಾವ ಕಂಪನಿಗೆ ಮಾರಾಟ ಮಾಡಬೇಕು ಎನ್ನುವುದು ತಿಳಿಯದ ಸ್ಥಿತಿಯಲ್ಲಿದ್ದಾರೆ. </p>.<p>ತಾಲ್ಲೂಕಿನಲ್ಲಿ ವಿವಿಧೆಡೆ ಕಟಾವು ಮಾಡಿದ ಕಬ್ಬು ರೈತರಿಗೆ ಹಾನಿಯಾಗಬಾರದು ಎಂದು ಬೇರೆ ಗಾಂಧಿ, ಕಿಸಾನ್ ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುತ್ತಿದ್ದಾರೆ ಎನ್ನುತ್ತಾರೆ ಹಲವು ರೈತರು.</p>.<p>ನಮ್ಮ ತಾಲ್ಲೂಕಿನ ಕಂಪನಿಗೆ ಬೀಗ ಹಾಕಿಸಿ ನೆರೆ ಜಿಲ್ಲೆಯ ಕಂಪನಿಗಳು ಕಬ್ಬು ಪಡೆಯುತ್ತಿರುವುದು ರೈತರಲ್ಲಿ ಅನುಮಾನ ಹುಟ್ಟುಹಾಕಿದ್ದು, ಸಿದ್ಧಸಿರಿ ಪುನರ್ ಆರಂಭಿಸಿ ತಾಲ್ಲೂಕಿನ ರೈತರ ಕಬ್ಬು ನುರಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ. ಈ ಮಧ್ಯೆ ಕಬ್ಬು ಬೆಳೆಗಳು ಮಂಗಳವಾರ ಪ್ರತಿಭಟನೆ ನಡೆಸಿ ಸ್ಥಳೀಯ ರೈತರ ಕಬ್ಬು ಖರೀದಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದರು.</p>.<p>ಆರಂಭ ಇಂದು: ಚಿಂಚೋಳಿಯ ಸಿದ್ಧಸಿರಿ ಎಥನಾಲ್ ಮತ್ತು ವಿದ್ಯುತ್ ಘಟಕ ಗುರುವಾರದಿಂದ ಮತ್ತೆ ಕಾರ್ಯಾರಂಭ ಮಾಡಲು ತಿಳಿಸಲಾಗಿದೆ ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕ ಶಿವಕುಮಾರ ಪಾಟೀಲ ತಿಳಿಸಿದರು.</p>.<div><blockquote>ಪಟಪಳ್ಳಿ ಗ್ರಾಮದ ನನ್ನ ಜಮೀನಿನಲ್ಲಿರುವ ಅರ್ಧ ಕಬ್ಬನ್ನು ಕಂಪನಿ ಕಟಾವು ಮಾಡಿಕೊಂಡು ಹೋಗಿದೆ. ಇನ್ನೂ ಅರ್ಧ ಕಬ್ಬು ಉಳಿದಿದ್ದು ಒಣಗುವ ಸ್ಥಿತಿಯಲ್ಲಿದೆ. ಕಂಪನಿಯವರು ಸ್ಪಂದಿಸುತ್ತಿಲ್ಲ </blockquote><span class="attribution">ರವೀಂದ್ರ ಶಾಬಾದಿ ಕಬ್ಬು ಬೆಳೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ:</strong> ಪಟ್ಟಣದ ಹೊರ ವಲಯದಲ್ಲಿರುವ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕ ಬೀಗ ತೆರೆದರೂ ಕಾರ್ಯಾರಂಭ ಮಾಡದಿರುವ ಕಾರಣ ತಾಲ್ಲೂಕಿಗೆ ದಲ್ಲಾಳಿಗಳು ಲಗ್ಗೆಯಿಟ್ಟಿದ್ದಾರೆ.</p>.<p>ಟನ್ ಕಬ್ಬಿಗೆ ₹2,200 –₹2,500 ನೀಡುತ್ತೇವೆ ಎಂದು ಕಬ್ಬು ಬೆಳೆಗಾರರ ಬಳಿಗೆ ದೌಡಾಯಿಸಿದ್ದಾರೆ ಎಂದು ಕಬ್ಬು ಬೆಳೆಗಾರರು ಪ್ರಜಾವಾಣಿಗೆ ತಿಳಿಸಿದ್ದಾರೆ.</p>.<p>ದಲ್ಲಾಳಿಗಳು ಮಶೀನ್ನಿಂದ ಕತ್ತರಿಸುತ್ತೇವೆ ಎಂದರೆ ಇನ್ನೂ ಕೆಲವರು ಕೂಲಿ ಕಾರ್ಮಿಕರಿಂದ ಕತ್ತರಿಸುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಬೆಳೆಗಾರರು ದೂರಿದ್ದಾರೆ.</p>.<p>ಸಿದ್ಧಸಿರಿ ಕಂಪನಿ ನಂಬಿ ಕಬ್ಬು ಬೆಳೆದ ರೈತರು ಈಗ ಯಾವ ಕಂಪನಿಗೆ ಮಾರಾಟ ಮಾಡಬೇಕು ಎನ್ನುವುದು ತಿಳಿಯದ ಸ್ಥಿತಿಯಲ್ಲಿದ್ದಾರೆ. </p>.<p>ತಾಲ್ಲೂಕಿನಲ್ಲಿ ವಿವಿಧೆಡೆ ಕಟಾವು ಮಾಡಿದ ಕಬ್ಬು ರೈತರಿಗೆ ಹಾನಿಯಾಗಬಾರದು ಎಂದು ಬೇರೆ ಗಾಂಧಿ, ಕಿಸಾನ್ ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುತ್ತಿದ್ದಾರೆ ಎನ್ನುತ್ತಾರೆ ಹಲವು ರೈತರು.</p>.<p>ನಮ್ಮ ತಾಲ್ಲೂಕಿನ ಕಂಪನಿಗೆ ಬೀಗ ಹಾಕಿಸಿ ನೆರೆ ಜಿಲ್ಲೆಯ ಕಂಪನಿಗಳು ಕಬ್ಬು ಪಡೆಯುತ್ತಿರುವುದು ರೈತರಲ್ಲಿ ಅನುಮಾನ ಹುಟ್ಟುಹಾಕಿದ್ದು, ಸಿದ್ಧಸಿರಿ ಪುನರ್ ಆರಂಭಿಸಿ ತಾಲ್ಲೂಕಿನ ರೈತರ ಕಬ್ಬು ನುರಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ. ಈ ಮಧ್ಯೆ ಕಬ್ಬು ಬೆಳೆಗಳು ಮಂಗಳವಾರ ಪ್ರತಿಭಟನೆ ನಡೆಸಿ ಸ್ಥಳೀಯ ರೈತರ ಕಬ್ಬು ಖರೀದಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದರು.</p>.<p>ಆರಂಭ ಇಂದು: ಚಿಂಚೋಳಿಯ ಸಿದ್ಧಸಿರಿ ಎಥನಾಲ್ ಮತ್ತು ವಿದ್ಯುತ್ ಘಟಕ ಗುರುವಾರದಿಂದ ಮತ್ತೆ ಕಾರ್ಯಾರಂಭ ಮಾಡಲು ತಿಳಿಸಲಾಗಿದೆ ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕ ಶಿವಕುಮಾರ ಪಾಟೀಲ ತಿಳಿಸಿದರು.</p>.<div><blockquote>ಪಟಪಳ್ಳಿ ಗ್ರಾಮದ ನನ್ನ ಜಮೀನಿನಲ್ಲಿರುವ ಅರ್ಧ ಕಬ್ಬನ್ನು ಕಂಪನಿ ಕಟಾವು ಮಾಡಿಕೊಂಡು ಹೋಗಿದೆ. ಇನ್ನೂ ಅರ್ಧ ಕಬ್ಬು ಉಳಿದಿದ್ದು ಒಣಗುವ ಸ್ಥಿತಿಯಲ್ಲಿದೆ. ಕಂಪನಿಯವರು ಸ್ಪಂದಿಸುತ್ತಿಲ್ಲ </blockquote><span class="attribution">ರವೀಂದ್ರ ಶಾಬಾದಿ ಕಬ್ಬು ಬೆಳೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>