<p><strong>ಕಲಬುರಗಿ:</strong> ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಹಿರಿಯ ವೈದ್ಯ ಡಾ.ಪಿ.ಎಸ್. ಶಂಕರ್ ಅವರಿಗೆ ಫೋನ್ ಕರೆಮಾಡಿದ ವಂಚಕ, ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ ₹ 76.65 ಲಕ್ಷ ವಂಚಿಸಿದ ಬಗ್ಗೆ ‘ಸೆನ್’ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮೇ 13ರಂದು ಶಂಕರ್ ಅವರಿಗೆ ಕರೆ ಬಂದಿತ್ತು. ಮಾತನಾಡಿದ ವ್ಯಕ್ತಿ ತನ್ನ ಹೆಸರು ವಿಜಯಕುಮಾರ ಚೌಬೆ, ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡಿದ್ದ. ನಿಮ್ಮ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಾಗಿದೆ. ಜೆಟ್ ಏರ್ವೇಸ್ ಮಾಲೀಕ 256 ಬ್ಯಾಂಕ್ಗಳು ಖಾತೆಗಳನ್ನು ತೆರೆದಿದ್ದಾರೆ. ಅವುಗಳಲ್ಲಿ ನಿಮ್ಮ ಹೆಸರಿನ ಬ್ಯಾಂಕ್ ಖಾತೆಯಿಂದ ಹಣ ಅಕ್ರಮ ವರ್ಗಾವಣೆ ಮಾಡಿಕೊಂಡಿದ್ದಾರೆ. ನೀವು ಅಪರಾಧ ಮಾಡಿಲ್ಲ. ಆದರೆ, ನಿಮ್ಮ ವಿಚಾರಣೆ ಮಾಡಬೇಕಾಗುತ್ತದೆ ಎಂದ ವಂಚಕ, ವಿವಿಧ ಬ್ಯಾಂಕ್ಗಳಲ್ಲಿ ಶಂಕರ್ ಅವರು ಇರಿಸಿದ ಠೇವಣಿಯ ಮಾಹಿತಿ ಕೇಳಿದ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ವಂಚಕನ ಮಾತು ನಂಬಿದ ಶಂಕರ್ ಅವರು, ಟಿಎಂಬಿ ಬ್ಯಾಂಕ್ನಲ್ಲಿ ₹ 45 ಲಕ್ಷ, ಎಸ್ಬಿಐ ಬ್ಯಾಂಕ್ನಲ್ಲಿ ₹ 49 ಲಕ್ಷ ಹಾಗೂ ಕೆನರಾ ಬ್ಯಾಂಕ್ನಲ್ಲಿ ₹ 10 ಲಕ್ಷ ಇರಿಸಿದ್ದಾಗಿ ಮಾಹಿತಿ ಹಂಚಿಕೊಂಡರು. ಈ ಬಗ್ಗೆ ಯಾರೊಂದಿಗೂ ಮಾಹಿತಿ ಹಂಚಿಕೊಳ್ಳದೆ, 15 ದಿನ ಎಲ್ಲಿಗೂ ಹೋಗದಂತೆ ವಂಚಕ ಹೆದರಿಸಿದ್ದ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಹಿರಿಯ ವೈದ್ಯ ಡಾ.ಪಿ.ಎಸ್. ಶಂಕರ್ ಅವರಿಗೆ ಫೋನ್ ಕರೆಮಾಡಿದ ವಂಚಕ, ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ ₹ 76.65 ಲಕ್ಷ ವಂಚಿಸಿದ ಬಗ್ಗೆ ‘ಸೆನ್’ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮೇ 13ರಂದು ಶಂಕರ್ ಅವರಿಗೆ ಕರೆ ಬಂದಿತ್ತು. ಮಾತನಾಡಿದ ವ್ಯಕ್ತಿ ತನ್ನ ಹೆಸರು ವಿಜಯಕುಮಾರ ಚೌಬೆ, ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡಿದ್ದ. ನಿಮ್ಮ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಾಗಿದೆ. ಜೆಟ್ ಏರ್ವೇಸ್ ಮಾಲೀಕ 256 ಬ್ಯಾಂಕ್ಗಳು ಖಾತೆಗಳನ್ನು ತೆರೆದಿದ್ದಾರೆ. ಅವುಗಳಲ್ಲಿ ನಿಮ್ಮ ಹೆಸರಿನ ಬ್ಯಾಂಕ್ ಖಾತೆಯಿಂದ ಹಣ ಅಕ್ರಮ ವರ್ಗಾವಣೆ ಮಾಡಿಕೊಂಡಿದ್ದಾರೆ. ನೀವು ಅಪರಾಧ ಮಾಡಿಲ್ಲ. ಆದರೆ, ನಿಮ್ಮ ವಿಚಾರಣೆ ಮಾಡಬೇಕಾಗುತ್ತದೆ ಎಂದ ವಂಚಕ, ವಿವಿಧ ಬ್ಯಾಂಕ್ಗಳಲ್ಲಿ ಶಂಕರ್ ಅವರು ಇರಿಸಿದ ಠೇವಣಿಯ ಮಾಹಿತಿ ಕೇಳಿದ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ವಂಚಕನ ಮಾತು ನಂಬಿದ ಶಂಕರ್ ಅವರು, ಟಿಎಂಬಿ ಬ್ಯಾಂಕ್ನಲ್ಲಿ ₹ 45 ಲಕ್ಷ, ಎಸ್ಬಿಐ ಬ್ಯಾಂಕ್ನಲ್ಲಿ ₹ 49 ಲಕ್ಷ ಹಾಗೂ ಕೆನರಾ ಬ್ಯಾಂಕ್ನಲ್ಲಿ ₹ 10 ಲಕ್ಷ ಇರಿಸಿದ್ದಾಗಿ ಮಾಹಿತಿ ಹಂಚಿಕೊಂಡರು. ಈ ಬಗ್ಗೆ ಯಾರೊಂದಿಗೂ ಮಾಹಿತಿ ಹಂಚಿಕೊಳ್ಳದೆ, 15 ದಿನ ಎಲ್ಲಿಗೂ ಹೋಗದಂತೆ ವಂಚಕ ಹೆದರಿಸಿದ್ದ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>