<p><strong>ಕಲಬುರಗಿ:</strong> ‘ಡೆಂಗಿ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳು ಸ್ವಚ್ಛ ನೀರಿನಲ್ಲೇ ಹುಟ್ಟುವುದರಿಂದ ಸಾರ್ವಜನಿಕರು ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜನರು ಮುಂಜಾಗ್ರತಾ ಕ್ರಮ ಅನುಸರಿಸಿದರೆ, ಡೆಂಗಿ ಜ್ವರದಿಂದ ದೂರ ಇರಬಹುದು’ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿರುವ ಬಸ್ ಡಿಪೊ ನಂ.3ರ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಆಶ್ರಯದಲ್ಲಿ ಆಯೋಜಿಸಿದ್ದ ಡೆಂಗಿ ಜಾಗೃತಿ ಅಭಿಯಾನ ಹಾಗೂ ಲಾರ್ವಾ ಸಮೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ನೀರಿನ ತೊಟ್ಟಿ ಅಥವಾ ಬ್ಯಾರಲ್ಗಳನ್ನು ತೆರೆದು ಇಡುವುದರಿಂದ ಈಡಿಸ್ ಈಜಿಪ್ಟ್ ಸೊಳ್ಳೆಗಳು ಮೊಟ್ಟೆ ಇಟ್ಟು ತನ್ನ ಸಂತತಿ ಹುಟ್ಟುಹಾಕುತ್ತವೆ. ಈ ಸೊಳ್ಳೆಗಳು ಸ್ವಚ್ಛವಾದ ನೀರಿನಲ್ಲಿ ಮಾತ್ರ ಮೊಟ್ಟೆ ಇಡುತ್ತವೆ. ಒಮ್ಮೆಗೆ 200ರಿಂದ 300 ಮೊಟ್ಟೆ ಹಾಕುತ್ತವೆ. 4 ದಿನಗಳ ನಂತರ ಲಾರ್ವಾ ಆಗಿ ಪರಿವರ್ತನೆ ಹೊಂದಿ ನಂತರ ಪೂಪಾ ಹಂತದಿಂದ ಸೊಳ್ಳೆ ಆಗಿ ಹೊರಬರುತ್ತವೆ. ಈ ಸೊಳ್ಳೆ ಮನುಷ್ಯನಿಗೆ ಕಚ್ಚಿದರೆ ಡೆಂಗಿ ಜ್ವರ ಬರುತ್ತದೆ’ ಎಂದರು.</p>.<p>ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ ಮಾತನಾಡಿ, ‘ಮನೆಗಳ ಸುತ್ತಲಿನ ಪರಿಸರದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಚರಂಡಿಗಳ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಡ್ರಮ್, ಬ್ಯಾರಲ್ಗಳನ್ನು ವಾರಕ್ಕೊಮ್ಮೆಯಾದರೂ ತಿಕ್ಕಿ ತೊಳೆದು ಶುಚಿಗೊಳಿಸಿ, ಬಿಸಲಿಗೆ ಒಣಗಿಸಿ ನಂತರ ನೀರು ತುಂಬಬೇಕು. ಸೊಳ್ಳೆ ಕಚ್ಚದಂತೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು. ತೆರೆದ ನೀರಿನ ಆಗರಗಳಲ್ಲಿ ಟೆಮಿಪಾಸ್ ದ್ರಾವಣ ಹಾಕಬೇಕು’ ಎಂದು ಸಲಹೆ ನೀಡಿದರು.</p>.<p>ಬಳಿಕ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಮನೆ–ಮನೆಗೆ ಭೇಟಿ ನೀಡಿ ನೀರು ತುಂಬಿದ್ದ ಬ್ಯಾರಲ್, ಡ್ರಮ್ಗಳಲ್ಲಿ ಲಾರ್ವಾಗಳ ಪರಿಶೀಲಿಸಿದರು. </p>.<p>ಮನೆಯ ಹೆಣ್ಣು ಮಕ್ಕಳೊಂದಿಗೆ ಬೆರೆತ ಜಿಲ್ಲಾಧಿಕಾರಿ, ಅವರ ಕುಂದು–ಕೊರತೆಗಳನ್ನೂ ಆಲಿಸಿದರು. ಸೊಳ್ಳೆಯಿಂದ ಹರಡು ರೋಗಗಳ ಬಗ್ಗೆ ಜಾಗೃತಿ ಮೂಡಿಸಿದರು.</p>.<p>‘ಪ್ರತಿ ಡೆಂಗಿ ಪ್ರಕರಣಗಳ ಮನೆಯ ಒಳಗೆ ಧೂಮೀಕರಣ ಮಾಡಿಸಲಾಗುತ್ತಿದೆ. ಮನೆ–ಮನೆ ಜ್ವರದ ಸಮೀಕ್ಷೆ ಮಾಡಿ ಪ್ರಾಥಮಿಕ ಹಂತದಲ್ಲೇ ಕಂಡುಕೊಳ್ಳಲಾಗುತ್ತಿದೆ’ ಎಂದು ಡಾ.ಬಸವರಾಜ ಗುಳಗಿ ತಿಳಿಸಿದರು. ‘ಟೆಮಿಪಾಸ್ ದ್ರಾವಣ ಯಾವ ಪ್ರಮಾಣದಲ್ಲಿ ಬಳಸಬೇಕು. ಅದರ ಪ್ರಯೋಜನವೆಷ್ಟು’ ಎಂಬುದರ ಕುರಿತು ಪ್ರಭಾರ ಆರೋಗ್ಯ ಮೇಲ್ವಿಚಾರಕ ಸಂತೋಷ ಮುಳಜೆ ತಿಳಿಸಿದರು. <br><br>ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಾರುತಿ ಕಾಂಬಳೆ, ನಗರ ಆರೋಗ್ಯಾಧಿಕಾರಿ ಡಾ.ಬಾಬುರಾವ್ ಚವ್ಹಾಣ, ಡಾ.ವೀಣಾ ಪಾಟೀಲ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ, ಹಿರಿಯ ಪ್ರಯೋಗಶಾಲೆ ತಂತ್ರಜ್ಞ ಚಂದ್ರಕಾಂತ ಏರಿ, ಕಾರ್ಣಿಕ ಕೋರೆ, ಶಾಂತಾ ಕಾಶಪ್ಪ, ಗುಲಾಮ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಡೆಂಗಿ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳು ಸ್ವಚ್ಛ ನೀರಿನಲ್ಲೇ ಹುಟ್ಟುವುದರಿಂದ ಸಾರ್ವಜನಿಕರು ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜನರು ಮುಂಜಾಗ್ರತಾ ಕ್ರಮ ಅನುಸರಿಸಿದರೆ, ಡೆಂಗಿ ಜ್ವರದಿಂದ ದೂರ ಇರಬಹುದು’ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿರುವ ಬಸ್ ಡಿಪೊ ನಂ.3ರ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಆಶ್ರಯದಲ್ಲಿ ಆಯೋಜಿಸಿದ್ದ ಡೆಂಗಿ ಜಾಗೃತಿ ಅಭಿಯಾನ ಹಾಗೂ ಲಾರ್ವಾ ಸಮೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ನೀರಿನ ತೊಟ್ಟಿ ಅಥವಾ ಬ್ಯಾರಲ್ಗಳನ್ನು ತೆರೆದು ಇಡುವುದರಿಂದ ಈಡಿಸ್ ಈಜಿಪ್ಟ್ ಸೊಳ್ಳೆಗಳು ಮೊಟ್ಟೆ ಇಟ್ಟು ತನ್ನ ಸಂತತಿ ಹುಟ್ಟುಹಾಕುತ್ತವೆ. ಈ ಸೊಳ್ಳೆಗಳು ಸ್ವಚ್ಛವಾದ ನೀರಿನಲ್ಲಿ ಮಾತ್ರ ಮೊಟ್ಟೆ ಇಡುತ್ತವೆ. ಒಮ್ಮೆಗೆ 200ರಿಂದ 300 ಮೊಟ್ಟೆ ಹಾಕುತ್ತವೆ. 4 ದಿನಗಳ ನಂತರ ಲಾರ್ವಾ ಆಗಿ ಪರಿವರ್ತನೆ ಹೊಂದಿ ನಂತರ ಪೂಪಾ ಹಂತದಿಂದ ಸೊಳ್ಳೆ ಆಗಿ ಹೊರಬರುತ್ತವೆ. ಈ ಸೊಳ್ಳೆ ಮನುಷ್ಯನಿಗೆ ಕಚ್ಚಿದರೆ ಡೆಂಗಿ ಜ್ವರ ಬರುತ್ತದೆ’ ಎಂದರು.</p>.<p>ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ ಮಾತನಾಡಿ, ‘ಮನೆಗಳ ಸುತ್ತಲಿನ ಪರಿಸರದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಚರಂಡಿಗಳ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಡ್ರಮ್, ಬ್ಯಾರಲ್ಗಳನ್ನು ವಾರಕ್ಕೊಮ್ಮೆಯಾದರೂ ತಿಕ್ಕಿ ತೊಳೆದು ಶುಚಿಗೊಳಿಸಿ, ಬಿಸಲಿಗೆ ಒಣಗಿಸಿ ನಂತರ ನೀರು ತುಂಬಬೇಕು. ಸೊಳ್ಳೆ ಕಚ್ಚದಂತೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು. ತೆರೆದ ನೀರಿನ ಆಗರಗಳಲ್ಲಿ ಟೆಮಿಪಾಸ್ ದ್ರಾವಣ ಹಾಕಬೇಕು’ ಎಂದು ಸಲಹೆ ನೀಡಿದರು.</p>.<p>ಬಳಿಕ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಮನೆ–ಮನೆಗೆ ಭೇಟಿ ನೀಡಿ ನೀರು ತುಂಬಿದ್ದ ಬ್ಯಾರಲ್, ಡ್ರಮ್ಗಳಲ್ಲಿ ಲಾರ್ವಾಗಳ ಪರಿಶೀಲಿಸಿದರು. </p>.<p>ಮನೆಯ ಹೆಣ್ಣು ಮಕ್ಕಳೊಂದಿಗೆ ಬೆರೆತ ಜಿಲ್ಲಾಧಿಕಾರಿ, ಅವರ ಕುಂದು–ಕೊರತೆಗಳನ್ನೂ ಆಲಿಸಿದರು. ಸೊಳ್ಳೆಯಿಂದ ಹರಡು ರೋಗಗಳ ಬಗ್ಗೆ ಜಾಗೃತಿ ಮೂಡಿಸಿದರು.</p>.<p>‘ಪ್ರತಿ ಡೆಂಗಿ ಪ್ರಕರಣಗಳ ಮನೆಯ ಒಳಗೆ ಧೂಮೀಕರಣ ಮಾಡಿಸಲಾಗುತ್ತಿದೆ. ಮನೆ–ಮನೆ ಜ್ವರದ ಸಮೀಕ್ಷೆ ಮಾಡಿ ಪ್ರಾಥಮಿಕ ಹಂತದಲ್ಲೇ ಕಂಡುಕೊಳ್ಳಲಾಗುತ್ತಿದೆ’ ಎಂದು ಡಾ.ಬಸವರಾಜ ಗುಳಗಿ ತಿಳಿಸಿದರು. ‘ಟೆಮಿಪಾಸ್ ದ್ರಾವಣ ಯಾವ ಪ್ರಮಾಣದಲ್ಲಿ ಬಳಸಬೇಕು. ಅದರ ಪ್ರಯೋಜನವೆಷ್ಟು’ ಎಂಬುದರ ಕುರಿತು ಪ್ರಭಾರ ಆರೋಗ್ಯ ಮೇಲ್ವಿಚಾರಕ ಸಂತೋಷ ಮುಳಜೆ ತಿಳಿಸಿದರು. <br><br>ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಾರುತಿ ಕಾಂಬಳೆ, ನಗರ ಆರೋಗ್ಯಾಧಿಕಾರಿ ಡಾ.ಬಾಬುರಾವ್ ಚವ್ಹಾಣ, ಡಾ.ವೀಣಾ ಪಾಟೀಲ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ, ಹಿರಿಯ ಪ್ರಯೋಗಶಾಲೆ ತಂತ್ರಜ್ಞ ಚಂದ್ರಕಾಂತ ಏರಿ, ಕಾರ್ಣಿಕ ಕೋರೆ, ಶಾಂತಾ ಕಾಶಪ್ಪ, ಗುಲಾಮ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>