‘ಜಾನುವಾರು ಮೇಲೆ ನೇರ ಪರಿಣಾಮ’
‘ಬರಗಾಲ ಸಂಭವಿಸಿದರೆ ಅದರ ಮೊದಲ ಪರಿಣಾಮ ಜಾನುವಾರು ಮತ್ತು ತೋಟಗಾರಿಕೆ ಬೆಳೆಗಳ ಮೇಲಾಗುತ್ತದೆ’ ಎಂದು ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ನೀರು ಮೇವು ಸಿಗದೆ ಇದ್ದಾಗ ರೈತರು ಜಾನುವಾರುಗಳನ್ನು ಅನಿವಾರ್ಯವಾಗಿ ಮಾರಬೇಕಾಗುತ್ತದೆ. ಅಂತರ್ಜಲದ ಮಟ್ಟ ಕುಸಿದು ತೋಟಗಾರಿಕೆ ಬೆಳೆಗಳು ಒಣಗಿದರೆ ಒಣ ಬೇಸಾಯದಂತೆ ಬೆಳೆಗಳನ್ನು ಅರಗಿ ಬೇರೆ ಬೆಳೆಗಳನ್ನು ಬಿತ್ತನೆ ಮಾಡಲು ಬರುವುದಿಲ್ಲ. ಬರದ ನಷ್ಟ ತಡೆಯಲು ಸಮಗ್ರ ಕೃಷಿ ಹಾಗೂ ಅಲ್ಪಾವಧಿಯ ಬೆಳೆಗಳ ಮೊರೆ ಹೋಗಬೇಕು’ ಎಂದರು.