ಅತ್ತೆ ಮನೆಯಲ್ಲಿ ಚಿನ್ನಾಭರಣ ಕದ್ದ ಅಳಿಯ!
ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಅಲ್ಮೇರಾದಲ್ಲಿ ಇರಿಸಿದ್ದ ಚಿನ್ನಾಭರಣ ಕದ್ದ ಆರೋಪದಡಿ ಮಹಿಳೆಯೊಬ್ಬರು ತನ್ನ ಅಣ್ಣ ಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಿವಲಿಂಗೇಶ್ವರ ಕಾಲೊನಿ ನಿವಾಸಿ ಯಲಗೂಡ ಗ್ರಾಮದ ಉಪ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಸುರಕ್ಷಣಾಧಿಕಾರಿ ಮಹಾನಂದಾ ಶಿವಾನಂದ ಅವರ ಮನೆಯಲ್ಲಿ ಕಳುವಾಗಿದೆ. ಮಹಾನಂದಾ ಅವರ ಅಣ್ಣನ ಮಗ ಅಂಬರೇಶ ತಡಕಲ್ ವಿರುದ್ಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 8ರಂದು ಅಂಬರೀಶ್ ಮಹಾನಂದಾ ಮನೆಗೆ ಬಂದಿದ್ದರು. ಮನೆಯ ಸದಸ್ಯರು ಹೊರ ಹೋದಾಗ ಅಂಬರೀಶ್ ಮನೆಯ ಅಲ್ಮೇರಾದಲ್ಲಿ ಇರಿಸಿದ್ದ ₹ 2.56 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಶಂಕೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.