‘ನಿತ್ಯ ಜಂಜಡಗಳ ಕಾರ್ಯದೊತ್ತಡದ ಬದುಕಿನಲ್ಲಿ ಪುಟ್ಟ ವಿರಾಮ ಪಡೆಯಬೇಕು. ಅದರಿಂದ ಯಾವುದೇ ಸಂದರ್ಭದಲ್ಲೂ ಸಕಾರಾತ್ಮಕವಾಗಿ ಇರಲು ಸಾಧ್ಯ’ ಎಂದು ರಾಜಸ್ಥಾನದ ಬಿ.ಕೆ.ಸುನೀತಾ ದೀದಿ ಪ್ರತಿಪಾದಿಸಿದರು. ‘ಸಮನ್ವಯ’ ಸಮ್ಮೇಳನ ಉದ್ಘಾಟಿಸಿ ‘ಏನೇ ಆದರೂ ಸಕಾರಾತ್ಮಕವಾಗಿರುವುದು’ ವಿಷಯ ಕುರಿತು ಅವರು ಮಾತನಾಡಿದರು. ‘ನಮ್ಮ ಜೀವನದಲ್ಲಿ ಎರಡು ವೃತ್ತಗಳಿರುತ್ತವೆ. ಒಂದು ಪ್ರಜ್ಞೆಯ ವೃತ್ತ ಮತ್ತೊಂದು ಸಂದರ್ಭಗಳ ವೃತ್ತ. ಯಾವುದೋ ಘಟನೆ ಜರುಗಿದಾಗ ಈ ಎರಡರಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬುದು ನಮಗೇ ಬಿಟ್ಟಿದ್ದು. ಆಗ ಪಡೆಯುವ ಲಘು ವಿರಾಮ ನಮ್ಮನ್ನು ಸಂದರ್ಭಗಳ ವೃತ್ತದಿಂದ ಬೇರ್ಪಡಿಸಿ ಪ್ರಜ್ಞೆಯ ವೃತ್ತದಲ್ಲಿರುವಂತೆ ಮಾಡುತ್ತಿದೆ. ಇದುವೇ ಎಲ್ಲ ಸಂದರ್ಭಗಳಲ್ಲೂ ಸಕಾರಾತ್ಮಕವಾಗಿರುವ ಮಂತ್ರ’ ಎಂದರು.