<p><strong>ಮಡಿಕೇರಿ</strong>: 94ನೇ ವರ್ಷದ ಮಂಟಪೋತ್ಸವಕ್ಕೆ ಭರದ ಸಿದ್ಧತೆ ನಡೆಸುತ್ತಿರುವ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ‘ಕೌಶಿಕ ಮಹಾತ್ಮೆ’ ಕಥಾ ಹಂದರವನ್ನು ಆಯ್ದುಕೊಂಡಿದೆ.</p>.<p>ಕಳೆದ ವರ್ಷ ‘ಪರಶಿವನಿಂದ ಜಲಂಧರನ ಸಂಹಾರ’ ಕಥಾನಕವನ್ನು ಹಾಗೂ ಅದಕ್ಕೂ ಮುಂಚಿನ ವರ್ಷದಲ್ಲಿ ‘ಭೂಲೋಕ ರಕ್ಷಣೆಗೆ ಪಾರ್ವತಿಯಿಂದ ಶಾಕಾಂಬರಿ ರೂಪ’ ಧರಿಸಿದ ಕಥಾನಕವನ್ನು ಮಂಟಪದಲ್ಲಿ ಪ್ರದರ್ಶಿಸಿ, ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಗಳಿಸಿತ್ತು.</p>.<p>ಒಟ್ಟು 21 ಕಲಾಕೃತಿಗಳನ್ನು ಒಳಗೊಂಡ ಬೃಹತ್ ಪ್ರದರ್ಶನ ಇದಾಗಿದ್ದು, ಇದಕ್ಕಾಗಿ 2 ಟ್ರಾಕ್ಟರ್ಅನ್ನು ಬಳಕೆ ಮಾಡಲಾಗುತ್ತಿದೆ. ಆರ್ಚ್ ಬೋರ್ಡ್ನ್ನು ದಿಂಡಿಗಲ್ನ ಜೆಮ್ಸ್ ಲೈಂಟಿಂಗ್ ಅಳವಡಿಸುತ್ತಿದೆ. ಸಮಿತಿ ಸದಸ್ಯರೇ ವೇದಿಕೆ ನಿರ್ಮಿಸುತ್ತಿದ್ದಾರೆ. ಕಲಾಕೃತಿಗಳ ರಚನೆ ಹಾಗೂ ಟ್ರಾಕ್ಟರ್ ಸೆಟ್ಟಿಂಗ್ಸ್ ಅನ್ನು ಮಡಿಕೇರಿಯ ಆನಂದ ಆರ್ಟ್ನವರು ನಿರ್ವಹಿಸುತ್ತಿದ್ದಾರೆ.</p>.<p>ಒಟ್ಟು ₹ 27 ಲಕ್ಷದಲ್ಲಿ ಮಂಟಪವನ್ನು ವೈಭವೋಪೇತವಾಗಿ ರೂಪಿಸಲು ನಿರ್ಧರಿಸಲಾಗಿದೆ. ಈ ಬಾರಿ ನಮ್ಮ ಪ್ರದರ್ಶನ ಹೆಚ್ಚು ಕಲಾತ್ಮಕವಾಗಿರಲಿದೆ ಎಂದು ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p><strong>ಚೌಡೇಶ್ವರಿ ದೇಗುಲ; ಕಲಾತಂಡದ ಮೆರುಗು</strong></p><p>ಈ ಬಾರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಕಲಾತಂಡವೊಂದು ಎಲ್ಲರ ಗಮನ ಸೆಳೆಯುವುದು ನಿಶ್ಚಿತ ಎನಿಸಿದೆ. ಇಲ್ಲಿನ ಮಹದೇವಪೇಟೆಯ ಚೌಡೇಶ್ವರಿ ದೇಗುಲದ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ಮಂಟಪದ ಜೊತೆಗೆ ಕಲಾತಂಡವೊಂದನ್ನು ಕರೆತರಲು ನಿರ್ಧರಿಸಿದೆ. </p><p>ಕೇರಳದ ಪೂಕೋಡುವಿನ ಬ್ಯಾಂಡ್ಸೆಟ್ ಶೋಭಾಯಾತ್ರೆಯ ರಂಗು ಹೆಚ್ಚಿಸಲಿದೆ. ಮಂಟಪೋತ್ಸವದ ತನ್ನ 62ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಸಮಿತಿಯು ಈ ಬಾರಿ ‘ಅರುಣಾಸುರ ವಧೆ’ ಕಥಾ ಪ್ರಸಂಗವನ್ನು ಪ್ರದರ್ಶನಕ್ಕಾಗಿ ಆಯ್ಕೆ ಮಾಡಿಕೊಂಡಿದೆ.</p><p>ಕಳೆದ ವರ್ಷ ಸಮಿತಿ ಪ್ರದರ್ಶಿಸಿದ್ದ ‘ಶ್ರೀ ಕಟೀಲ್ ಕ್ಷೇತ್ರ ಮಹಾತ್ಮೆ’ಯ ಕಥಾ ಪ್ರಸಂಗ ಅತ್ಯಂತ ವೈಭವೋಪೇತವಾಗಿ ಗಮನ ಸೆಳೆದಿತ್ತು. ಈ ಬಾರಿ ಇದಕ್ಕಾಗಿ 2 ಟ್ರಾಕ್ಟರ್ಗಳನ್ನು ಬಳಕೆ ಮಾಡಲಾಗುತ್ತಿದ್ದು ಒಟ್ಟು ₹ 20 ಲಕ್ಷ ವ್ಯಯಿಸಲು ಅಂದಾಜು ಮಾಡಲಾಗಿದೆ. ಒಟ್ಟು 24 ಕಲಾಕೃತಿಗಳಿರಲಿದ್ದು ಇವುಗಳ ತಯಾರಿಕೆಯ ಹೊಣೆಯನ್ನು ಉದ್ಬೂರಿನ ಮಹದೇವಪ್ಪ ಅಂಡ್ ಸನ್ಸ್ ಹೊತ್ತಿದ್ದಾರೆ. </p><p>ದಿಂಡಿಗಲ್ನ ಕದಲ್ ಮಾತಾ ಅವರ ಲೈಟಿಂಗ್ಸ್ ನಂದಿ ಸೋಮವಾರಪೇಟೆ ಸೌಂಡ್ಸ್ ಅವರ ಸ್ಟುಡಿಯೊ ಜೊತೆಗೆ ಚೆನ್ನೈ ಕನ್ನಿಕಾ ಫೈರ್ ವರ್ಲ್ಡ್ ಅವರ ವಿಶೇಷ ಆಕರ್ಷಣೆ ಇರಲಿದೆ ಎಂದು ಮಂಡಳಿ ಅಧ್ಯಕ್ಷ ಡಿ.ಎ.ಜಗದೀಶ್ ‘ಪ್ರಜಾವಾಣಿ’ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: 94ನೇ ವರ್ಷದ ಮಂಟಪೋತ್ಸವಕ್ಕೆ ಭರದ ಸಿದ್ಧತೆ ನಡೆಸುತ್ತಿರುವ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ‘ಕೌಶಿಕ ಮಹಾತ್ಮೆ’ ಕಥಾ ಹಂದರವನ್ನು ಆಯ್ದುಕೊಂಡಿದೆ.</p>.<p>ಕಳೆದ ವರ್ಷ ‘ಪರಶಿವನಿಂದ ಜಲಂಧರನ ಸಂಹಾರ’ ಕಥಾನಕವನ್ನು ಹಾಗೂ ಅದಕ್ಕೂ ಮುಂಚಿನ ವರ್ಷದಲ್ಲಿ ‘ಭೂಲೋಕ ರಕ್ಷಣೆಗೆ ಪಾರ್ವತಿಯಿಂದ ಶಾಕಾಂಬರಿ ರೂಪ’ ಧರಿಸಿದ ಕಥಾನಕವನ್ನು ಮಂಟಪದಲ್ಲಿ ಪ್ರದರ್ಶಿಸಿ, ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಗಳಿಸಿತ್ತು.</p>.<p>ಒಟ್ಟು 21 ಕಲಾಕೃತಿಗಳನ್ನು ಒಳಗೊಂಡ ಬೃಹತ್ ಪ್ರದರ್ಶನ ಇದಾಗಿದ್ದು, ಇದಕ್ಕಾಗಿ 2 ಟ್ರಾಕ್ಟರ್ಅನ್ನು ಬಳಕೆ ಮಾಡಲಾಗುತ್ತಿದೆ. ಆರ್ಚ್ ಬೋರ್ಡ್ನ್ನು ದಿಂಡಿಗಲ್ನ ಜೆಮ್ಸ್ ಲೈಂಟಿಂಗ್ ಅಳವಡಿಸುತ್ತಿದೆ. ಸಮಿತಿ ಸದಸ್ಯರೇ ವೇದಿಕೆ ನಿರ್ಮಿಸುತ್ತಿದ್ದಾರೆ. ಕಲಾಕೃತಿಗಳ ರಚನೆ ಹಾಗೂ ಟ್ರಾಕ್ಟರ್ ಸೆಟ್ಟಿಂಗ್ಸ್ ಅನ್ನು ಮಡಿಕೇರಿಯ ಆನಂದ ಆರ್ಟ್ನವರು ನಿರ್ವಹಿಸುತ್ತಿದ್ದಾರೆ.</p>.<p>ಒಟ್ಟು ₹ 27 ಲಕ್ಷದಲ್ಲಿ ಮಂಟಪವನ್ನು ವೈಭವೋಪೇತವಾಗಿ ರೂಪಿಸಲು ನಿರ್ಧರಿಸಲಾಗಿದೆ. ಈ ಬಾರಿ ನಮ್ಮ ಪ್ರದರ್ಶನ ಹೆಚ್ಚು ಕಲಾತ್ಮಕವಾಗಿರಲಿದೆ ಎಂದು ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p><strong>ಚೌಡೇಶ್ವರಿ ದೇಗುಲ; ಕಲಾತಂಡದ ಮೆರುಗು</strong></p><p>ಈ ಬಾರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಕಲಾತಂಡವೊಂದು ಎಲ್ಲರ ಗಮನ ಸೆಳೆಯುವುದು ನಿಶ್ಚಿತ ಎನಿಸಿದೆ. ಇಲ್ಲಿನ ಮಹದೇವಪೇಟೆಯ ಚೌಡೇಶ್ವರಿ ದೇಗುಲದ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ಮಂಟಪದ ಜೊತೆಗೆ ಕಲಾತಂಡವೊಂದನ್ನು ಕರೆತರಲು ನಿರ್ಧರಿಸಿದೆ. </p><p>ಕೇರಳದ ಪೂಕೋಡುವಿನ ಬ್ಯಾಂಡ್ಸೆಟ್ ಶೋಭಾಯಾತ್ರೆಯ ರಂಗು ಹೆಚ್ಚಿಸಲಿದೆ. ಮಂಟಪೋತ್ಸವದ ತನ್ನ 62ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಸಮಿತಿಯು ಈ ಬಾರಿ ‘ಅರುಣಾಸುರ ವಧೆ’ ಕಥಾ ಪ್ರಸಂಗವನ್ನು ಪ್ರದರ್ಶನಕ್ಕಾಗಿ ಆಯ್ಕೆ ಮಾಡಿಕೊಂಡಿದೆ.</p><p>ಕಳೆದ ವರ್ಷ ಸಮಿತಿ ಪ್ರದರ್ಶಿಸಿದ್ದ ‘ಶ್ರೀ ಕಟೀಲ್ ಕ್ಷೇತ್ರ ಮಹಾತ್ಮೆ’ಯ ಕಥಾ ಪ್ರಸಂಗ ಅತ್ಯಂತ ವೈಭವೋಪೇತವಾಗಿ ಗಮನ ಸೆಳೆದಿತ್ತು. ಈ ಬಾರಿ ಇದಕ್ಕಾಗಿ 2 ಟ್ರಾಕ್ಟರ್ಗಳನ್ನು ಬಳಕೆ ಮಾಡಲಾಗುತ್ತಿದ್ದು ಒಟ್ಟು ₹ 20 ಲಕ್ಷ ವ್ಯಯಿಸಲು ಅಂದಾಜು ಮಾಡಲಾಗಿದೆ. ಒಟ್ಟು 24 ಕಲಾಕೃತಿಗಳಿರಲಿದ್ದು ಇವುಗಳ ತಯಾರಿಕೆಯ ಹೊಣೆಯನ್ನು ಉದ್ಬೂರಿನ ಮಹದೇವಪ್ಪ ಅಂಡ್ ಸನ್ಸ್ ಹೊತ್ತಿದ್ದಾರೆ. </p><p>ದಿಂಡಿಗಲ್ನ ಕದಲ್ ಮಾತಾ ಅವರ ಲೈಟಿಂಗ್ಸ್ ನಂದಿ ಸೋಮವಾರಪೇಟೆ ಸೌಂಡ್ಸ್ ಅವರ ಸ್ಟುಡಿಯೊ ಜೊತೆಗೆ ಚೆನ್ನೈ ಕನ್ನಿಕಾ ಫೈರ್ ವರ್ಲ್ಡ್ ಅವರ ವಿಶೇಷ ಆಕರ್ಷಣೆ ಇರಲಿದೆ ಎಂದು ಮಂಡಳಿ ಅಧ್ಯಕ್ಷ ಡಿ.ಎ.ಜಗದೀಶ್ ‘ಪ್ರಜಾವಾಣಿ’ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>