ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು: ಹಲವೆಡೆ ಬಿರುಸಿನ ಮಳೆ

Published : 12 ಅಕ್ಟೋಬರ್ 2024, 8:34 IST
Last Updated : 12 ಅಕ್ಟೋಬರ್ 2024, 8:34 IST
ಫಾಲೋ ಮಾಡಿ
Comments

ಮಡಿಕೇರಿ: ನಗರ ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಶನಿವಾರ ಮಳೆ ಬಿರುಸಿನಿಂದ ಸುರಿಯುತ್ತಿದೆ.

ಮಡಿಕೇರಿಯಲ್ಲಿ ಶನಿವಾರ ರಾತ್ರಿ ಆರಂಭವಾಗುವ ಮಂಟಪಗಳ ಮೆರವಣಿಗೆಗೆ ಮಳೆಯು ತೊಡಕಾಗಿ ಪರಿಣಮಿಸಿದೆ. ವಿದ್ಯುತ್ ದೀಪಾಲಂಕಾರ, ಮಂಟಪಗಳ ಮೇಲಿನ ಮೂರ್ತಿಗಳು, ಅವುಗಳ ಚಲನವಲನ ಸೇರಿದಂತೆ ಮಂಟಪಗಳಲ್ಲಿ ಕಥಾ ಪ್ರಸಂಗದ ಪ್ರಸ್ತುತಿಗೆ ತೊಡಕಾಗುವ ಆತಂಕ ಎದುರಾಗಿದೆ.

ಗೋಣಿಕೊಪ್ಪಲಿನಲ್ಲಿ ಮಧ್ಯಾಹ್ನದ ನಂತರ ಆರಂಭವಾಗುವ ಸ್ತಬ್ದಚಿತ್ರಗಳ ಮೆರವಣಿಗೆ ಹಾಗೂ ರಾತ್ರಿ ನಡೆಯುವ ಮಂಟಪಗಳ ಮೆರವಣಿಗೆಗಳಿಗೂ ಮಳೆಯಿಂದ ತೊಂದರೆಯಾಗಲಿದೆ ಎಂಬ ಆತಂಕ ಉಂಟಾಗಿದೆ.

ಕೊಡಗು ಜಿಲ್ಲೆಯ ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ, ಸಿದ್ದಾಪುರ ಭಾಗಗಳಲ್ಲೂ ಮಳೆ ಬಿರುಸಿನಿಂದ ಸುರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT