ಸಿದ್ದಾಪುರ ಸಮೀಪದ ಕರಡಿಗೋಡುವಿನಲ್ಲಿ ಇನ್ನೂ ಕಾವೇರಿ ನದಿ ನೀರಿನ ಪ್ರವಾಹ ಇಳಿಕೆಯಾಗದಿರುವುದು ಶನಿವಾರ ಕಂಡು ಬಂತು
ಸೋಮವಾರಪೇಟೆ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮದ ಗ್ರಾಮ ಸಂಪರ್ಕ ರಸ್ತೆಯೊಂದರ ಮೇಲೆ ನೀರು ತುಂಬಿ ಹರಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿತು.
ಸೋಮವಾರಪೇಟೆ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ಆವರಣ ಬಾರಿ ಮಳೆಗೆ ನೀರಿನಿಂದಾವೃತ್ತವಾಗಿದೆ.
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ ಗ್ರಾಮದ ನಿವಾಸಿ ಚಾಮೆರ ಲಕ್ಷಣ ಎಂಬುವವರ ಕೊಟ್ಟಿಗೆಯೊಂದು ಬಿದ್ದು ಹೋರಿಯೊಂದು ಮೃತಪಟ್ಟಿದೆ
ಸೋಮವಾರಪೇಟೆ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಸೆಸ್ಕ್ ಸಿಬ್ಬಂದಿಗಳು ಅವಿರತ ಶ್ರಮದಿಂದ ವಿದ್ಯುತ್ ಮಾರ್ಗ ಸರಿಪಡಿಸುತ್ತಿರುವುದು.
ಸೋಮವಾರಪೇಟೆ ಸಮೀಪದ ಹಳ್ಳದಿಣ್ಣೆ ಗ್ರಾಮದಲ್ಲಿ 33 ಕೆ.ವಿ. ವಿದ್ಯುತ್ ಮಾರ್ಗದ ಮೇಲೆ ಬಿದ್ದ ಮರವನ್ನು ತೆರವುಗೊಳಿಸುತ್ತಿರುವ ಸಿಬ್ಬಂದಿ