ಸುಂಟಿಕೊಪ್ಪಸಮೀಪದ ಏಳನೇ ಹೊಸಕೋಟೆಯಿಂದ ಮಂಜಿಕೆರೆಗೆ ತೆರಳುವ ಚೀಕಂಡ ಸನ್ನಿ ಅವರ ಮನೆಯ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದು
ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಕಲ್ಲುಕೋರೆ ನಿವಾಸಿ ಕೆ.ಎಂ ಅಬ್ಬಾಸ್ ಎಂಬುವರ ಮನೆಯ ಸೀಟುಗಳು ಗಾಳಿಯ ರಭಸಕ್ಕೆ ಹಾರಿ ಹೋಗಿ ನಷ್ಟ ಉಂಟಾಗಿದೆ
ನಾಪೋಕ್ಲು ಸಮೀಪದ ಮರಂದೋಡ ಗ್ರಾಮದ ಮಾಚಯ್ಯ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದ ಪರಿಣಾಮ ಶೀಟುಗಳು ಹಾನಿಯಾಗಿವೆ
ಕುಶಾಲನಗರ ಸಮೀಪದ ಕಣಿವೆ ರಾಮಲಿಂಗೇಶ್ವರ ದೇವಾಲಯ ಸನ್ನಿಧಿಯ ತೂಗುಸೇತುವೆ ಬಳಿ ಹಾರಂಗಿ ಹಾಗೂ ಕಾವೇರಿ ನದಿಗಳು ಸಂಗಮಗೊಂಡು ಹರಿಯುತ್ತಿದ್ದು ನದಿಯ ನೀರಿನ ಮಟ್ಟದಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದೆ
ಸಿದ್ದಾಪುರ ಸಮೀಪದ ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ ಹೆಚ್.ಕೆ ಉದಯ ಎಂಬವರ ಮನೆಯು ಗಾಳಿ ಮಳೆಗೆ ಸಿಲುಕಿ ಮನೆಯ ಗೋಡೆಗಳು ಸಂಪೂರ್ಣವಾಗಿ ಕುಸಿದಿದೆ
ಮಡಿಕೇರಿ ನಗರಸಭೆಯ ಮುಂಭಾಗ ಭಾರಿ ಮಳೆಯಿಂದ ಕೆರೆಯಂತಾಗಿದ್ದ ದೃಶ್ಯ ಸೋಮವಾರ ಕಂಡು ಬಂತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ