ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ, ತಹಶೀಲ್ದಾರ್ ಬಿ.ಸಿ. ವೆಂಕಟಾಚಲಪತಿಗೆ ಮೂರು ವರ್ಷ ಕಾರಾಗೃಹ ಮತ್ತು ₹7 ಲಕ್ಷ ದಂಡ ವಿಧಿಸಿದ್ದಾರೆ. ಎರಡನೇ ಅಪರಾಧಿ ಬಿ.ಆರ್. ಮಧುಸೂದನ್ಗೆ ಮೂರು ವರ್ಷ ಜೈಲು ಮತ್ತು ₹40,000 ದಂಡ ವಿಧಿಸಿಲಾಗಿದೆ. ಎಸಿಬಿ ಪರವಾಗಿ ಸರ್ಕಾರಿ ಅಭಿಯೋಜಕ ಮಂಜುನಾಥ ಹೊನ್ನಯ್ಯ ನಾಯ್ಕ ವಾದ ಮಂಡಿಸಿದರು.