ಉತ್ಸವದಲ್ಲಿ ಶನಿವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ
ಸಿದ್ದರಾಮಯ್ಯ ಹತ್ತು ವರ್ಷ ಸಿಎಂ ಆಗಿರಲಿ: ರಾಯರಡ್ಡಿ
ನಾನು ಸಚಿವನಾಗದಿದ್ದರೂ ಪರವಾಗಿಲ್ಲ ಸಿದ್ದರಾಮಯ್ಯ ಅವರು ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು. ‘ಈಗಿನ ರಾಜಕಾರಣದಲ್ಲಿ ಧರ್ಮ ಜಾತಿ ಹಾಗೂ ಹಣವೇ ಮೇಲಾಗಿದೆ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಸಮರ್ಥ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇದು ನಮ್ಮ ಭಾಗ್ಯ’ ಎಂದರು. ‘ಜಾತ್ಯತೀತ ನಾಯಕರಾದ ಸಿದ್ದರಾಮಯ್ಯ ಅವರ ಹೃದಯ ಬಡವರ ನೊಂದವರ ಪರ ಇದೆ. ಹೀಗಾಗಿ ಅವರನ್ನು ಕಂಡರೆ ಕೆಲವರಿಗೆ ಆಗಿ ಬರುವುದಿಲ್ಲ. ಮುಖ್ಯಮಂತ್ರಿ ಹೃದಯವಂತರು ಎನ್ನುವುದನ್ನು ಅವರ ಎದುರು ಹೇಳುವ ಅಗತ್ಯವಿಲ್ಲ. ಆದರೆ ಸತ್ಯ ಹೇಳಲು ಹಿಂದೇಟು ಹಾಕುವುದಿಲ್ಲ’ ಎಂದರು.