<p><strong>ಕೊಪ್ಪಳ</strong>: ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಧೋ ಎಂದು ಸುರಿದಂತೆ ಜಿಲ್ಲೆಯಲ್ಲಿ ಮಳೆ ಸುರಿಯದಿದ್ದರೂ ಜೂನ್ನಲ್ಲಿ ವಾಡಿಕೆಗಿಂತಲೂ ಶೇ. 54ರಷ್ಟು ಅಧಿಕ ಮಳೆ ಬಂದಿದೆ.</p>.<p>ಕಳೆದ ವರ್ಷ ಮಳೆಯ ಕೊರತೆಯಿದ್ದ ಕಾರಣ ಈ ಸಲದ ಪೂರ್ವ ಮುಂಗಾರು ಹಾಗೂ ಮುಂಗಾರಿನ ಅವಧಿಯಲ್ಲಿ ಅನ್ನದಾತರು ಆಗಸದತ್ತ ಮುಖಮಾಡಿದ್ದರು. ಕಳೆದ ವರ್ಷದಂತೆ ಮತ್ತೆ ಬರಗಾಲ ಕಾಡುವುದೇ ಎನ್ನುವ ಆತಂಕವೂ ಅವರನ್ನು ಕಾಡಿತ್ತು. ಆದರೆ, ಈ ವರ್ಷದ ಪೂರ್ವ ಮುಂಗಾರಿನಲ್ಲಿಯೂ ಶೇ. 51ರಷ್ಟು ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಮಾರ್ಚ್ 1ರಿಂದ ಮೇ 31ರ ತನಕದ ಅವಧಿಯನ್ನು ಪೂರ್ವ ಮುಂಗಾರು ಎಂದು ಪರಿಗಣಿಸಲಾಗುತ್ತಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣ 7.9 ಸೆಂ.ಮೀ. ಇತ್ತು. ಆದರೆ, 11.9 ಸೆಂ.ಮೀ., ಮಳೆ ಬಂದಿದೆ. ಮಳೆಯ ಇದೇ ಜೋಶ್ ಹಿಂದಿನ ತಿಂಗಳು ಕೂಡ ಮುಂದುವರಿದಿದೆ.</p>.<p>ಜೂನ್ನಲ್ಲಿ ಒಟ್ಟು 7.9 ಸೆಂ.ಮೀ., ವಾಡಿಕೆ ಪ್ರಮಾಣವಿದ್ದು ವಾಸ್ತವಿಕವಾದ ಆದ ಮಳೆ 12.01 ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಮಾಹಿತಿ ತಿಳಿಸಿದೆ. ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ ಹೀಗೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ರಭಸದಿಂದ ಮಳೆ ಬರುತ್ತಿದೆ. ನಮ್ಮ ಜಿಲ್ಲೆಯಲ್ಲಿ ಆ ರೀತಿಯ ಮಳೆ ಅಬ್ಬರವಿಲ್ಲ. ಆಗಾಗ್ಗೆ ಕೆಲ ಹೊತ್ತು ಮಾತ್ರ ಸುರಿದ ಮಳೆ ಬಳಿಕ ತಣ್ಣಗಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ರಭಸದಿಂದ ಇನ್ನು ಕೆಲ ಕಡೆ ಜಿಟಿಜಿಟಿಯಾಗಿ ಮಳೆ ಸುರಿದಿದೆ. ಜುಲೈ 14ರ ಅಂತ್ಯಕ್ಕೆ ಜಿಲ್ಲೆಯಲ್ಲಿ 18.03 ಸೆಂ.ಮೀ. ವಾಡಿಕೆ ಮಳೆಯಿದ್ದು ಈಗಾಗಲೇ 26 ಸೆಂ.ಮೀ. ಮಳೆ ಬಂದಿದೆ.</p>.<p>2.11 ಲಕ್ಷ ಹೆಕ್ಟೇರ್ ಬಿತ್ತನೆ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3.19 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಲಾಗಿದ್ದು ಇದುವರೆಗೆ 2.11 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.</p>.<p>ಗಂಗಾವತಿ, ಕಾರಟಗಿ ಭಾಗದಲ್ಲಿ ಅಧಿಕವಾಗಿ ಬೆಳೆಯುವ ಭತ್ತ ಜಿಲ್ಲೆಯಲ್ಲಿ 62 ಸಾವಿರ ಹೆಕ್ಟೇರ್ ಗುರಿ ಹೊಂದಿದ್ದರೂ ಈ ಬೆಳೆಯ ಕೃಷಿಗಾಗಿ ರೈತರು ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಹರಿಯುವ ನೀರಿನ ಮೇಲೆ ಅವಲಂಬನೆಯಾಗಿದ್ದಾರೆ. ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ನಿತ್ಯ ಉತ್ತಮ ಒಳಹರಿವು ಬರುತ್ತಿದೆ. ಇನ್ನು ಹಲವು ದಿನಗಳಲ್ಲಿ ಜಲಾಶಯ ಭರ್ತಿಯಾಗುವ ವಿಶ್ವಾಸವೂ ಇದ್ದು ಆಗಸ್ಟ್ ಮೊದಲ ವಾರದಲ್ಲಿ ಐಸಿಸಿ ಸಭೆ ನಡೆಸಿ ನೀರು ಹರಿಸಲು ಐಸಿಸಿ ಸಮಿತಿ ಚಿಂತನೆ ನಡೆಸಿದೆ.</p>.<p>ಗಂಗಾವತಿ ತಾಲ್ಲೂಕಿನ ಸಾಣಾಪುರ ಹಾಗೂ ಹಲವು ಭಾಗದಲ್ಲಿ ಕೆರೆ ನೀರು ಮತ್ತು ಪಂಪ್ಸೆಟ್ ಹೊಂದಿರುವವರು ಈಗಾಗಲೇ ಸಸಿಮಡಿಗಳನ್ನು ತಯಾರಿಸಿಕೊಂಡು ಭತ್ತ ನಾಟಿಯನ್ನೂ ಮಾಡಿದ್ದಾರೆ. ಉಳಿದವರು ಮತ್ತು ನೆರೆಯ ರಾಯಚೂರು ಜಿಲ್ಲೆಯ ರೈತರು ಮಳೆ ನೀರಿಗಾಗಿ ಎದುರು ನೋಡುತ್ತಿದ್ದಾರೆ. </p>.<p>ಜಿಲ್ಲೆಯಲ್ಲಿ ಅಧಿಕವಾಗಿ ಮೆಕ್ಕಜೋಳ (1.07 ಲಕ್ಷ ಹೆಕ್ಟೇರ್) ಗುರಿ ಮೀರಿ ಬಿತ್ತನೆ ಮಾಡಲಾಗಿದೆ. ತೊಗರಿ 18ರಿಂದ 20 ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿ ಹೊಂದಿದ್ದರೂ ಈಗಾಗಲೇ 25 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ. ಇದರ ಪ್ರಮಾಣ ಇನ್ನು ಕೆಲ ದಿನಗಳಲ್ಲಿ ಮತ್ತಷ್ಟು ಜಾಸ್ತಿಯಾಗುವ ನಿರೀಕ್ಷೆಯಿದೆ. ಹೆಸರು 15,411 ಹೆಕ್ಟೇರ್ ಇದ್ದರೂ ಈಗಾಗಲೇ 18,480 ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇಂಗಾ, ಸೂರ್ಯಕಾಂತಿ ಹಲವು ಕಡೆ ಬಿತ್ತನೆ ಕಾರ್ಯ ನಡೆಯುತ್ತಿದೆ.</p>.<p>ದ್ವಿದಳ ಧಾನ್ಯಗಳ ಬಿತ್ತನೆ ಗುರಿ 39,830 ಹೆಕ್ಟೇರ್ ಇದ್ದರೂ ವಾಸ್ತವದಲ್ಲಿ 44,928ರಷ್ಟು ಬಿತ್ತನೆ ಕಾರ್ಯವಾಗಿದೆ. ಎಣ್ಣೆಕಾಳುಗಳಾದ ಶೇಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು ಮತ್ತು ಔಡಲು 32,643 ಹೆಕ್ಟೇರ್ ಇದ್ದರೂ 9,925 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.</p>.<p> <strong>ಜಿಲ್ಲೆಯಲ್ಲಿ ಭಾರಿ ಬಿರುಸಾಗಿ ಮಳೆ ಸುರಿಯದಿದ್ದರೂ ವಾಡಿಕೆಗಿಂತಲೂ ಹೆಚ್ಚು ಬಂದಿದೆ. ಕೃಷಿ ಚಟುವಟಿಕೆ ಕಾರ್ಯವೂ ಚುರುಕು ಪಡೆದುಕೊಂಡಿದೆ. </strong></p><p><strong>-ರುದ್ರೇಶಪ್ಪ ಟಿ.ಎಸ್. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೊಪ್ಪಳ</strong></p>.<p>ಜೂನ್ನಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ ವಿವರ (ಸೆಂ.ಮೀ. ಗಳಲ್ಲಿ) ತಾಲ್ಲೂಕು;ವಾಡಿಕೆ;ವಾಸ್ತವ;ಹೆಚ್ಚಳ (ಶೇ) ಗಂಗಾವತಿ;7.12.13.31;87 ಕೊಪ್ಪಳ;8.33;14.17;70 ಕುಷ್ಟಗಿ;6.75;10.95;62 ಯಲಬುರ್ಗಾ;7.72;11.75;52 ಕಾರಟಗಿ;7.01;11.44;63 ಕುಕನೂರು;8.84;9.56;8 ಕನಕಗಿರಿ;8.10;12.42;53 </p>.<p> ಕುಸಿದ ಹತ್ತಿ ಬಿತ್ತನೆ ಕಳೆದ ವರ್ಷ ಹತ್ತಿಗೆ ವ್ಯಾಪಕ ರೋಗಬಾಧೆ ಕಾಣಿಸಿಕೊಂಡಿದ್ದರಿಂದ ಈ ಬಾರಿ ಹತ್ತಿ ಬಿತ್ತನೆ ಕುಸಿತವಾಗಿದೆ. ಒಟ್ಟು 11686 ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿಯಿದ್ದು ಇದುವರೆಗೆ 6110 ಮಾತ್ರ ಹತ್ತಿ ಬಿತ್ತನೆ ಮಾಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಧೋ ಎಂದು ಸುರಿದಂತೆ ಜಿಲ್ಲೆಯಲ್ಲಿ ಮಳೆ ಸುರಿಯದಿದ್ದರೂ ಜೂನ್ನಲ್ಲಿ ವಾಡಿಕೆಗಿಂತಲೂ ಶೇ. 54ರಷ್ಟು ಅಧಿಕ ಮಳೆ ಬಂದಿದೆ.</p>.<p>ಕಳೆದ ವರ್ಷ ಮಳೆಯ ಕೊರತೆಯಿದ್ದ ಕಾರಣ ಈ ಸಲದ ಪೂರ್ವ ಮುಂಗಾರು ಹಾಗೂ ಮುಂಗಾರಿನ ಅವಧಿಯಲ್ಲಿ ಅನ್ನದಾತರು ಆಗಸದತ್ತ ಮುಖಮಾಡಿದ್ದರು. ಕಳೆದ ವರ್ಷದಂತೆ ಮತ್ತೆ ಬರಗಾಲ ಕಾಡುವುದೇ ಎನ್ನುವ ಆತಂಕವೂ ಅವರನ್ನು ಕಾಡಿತ್ತು. ಆದರೆ, ಈ ವರ್ಷದ ಪೂರ್ವ ಮುಂಗಾರಿನಲ್ಲಿಯೂ ಶೇ. 51ರಷ್ಟು ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಮಾರ್ಚ್ 1ರಿಂದ ಮೇ 31ರ ತನಕದ ಅವಧಿಯನ್ನು ಪೂರ್ವ ಮುಂಗಾರು ಎಂದು ಪರಿಗಣಿಸಲಾಗುತ್ತಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣ 7.9 ಸೆಂ.ಮೀ. ಇತ್ತು. ಆದರೆ, 11.9 ಸೆಂ.ಮೀ., ಮಳೆ ಬಂದಿದೆ. ಮಳೆಯ ಇದೇ ಜೋಶ್ ಹಿಂದಿನ ತಿಂಗಳು ಕೂಡ ಮುಂದುವರಿದಿದೆ.</p>.<p>ಜೂನ್ನಲ್ಲಿ ಒಟ್ಟು 7.9 ಸೆಂ.ಮೀ., ವಾಡಿಕೆ ಪ್ರಮಾಣವಿದ್ದು ವಾಸ್ತವಿಕವಾದ ಆದ ಮಳೆ 12.01 ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಮಾಹಿತಿ ತಿಳಿಸಿದೆ. ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ ಹೀಗೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ರಭಸದಿಂದ ಮಳೆ ಬರುತ್ತಿದೆ. ನಮ್ಮ ಜಿಲ್ಲೆಯಲ್ಲಿ ಆ ರೀತಿಯ ಮಳೆ ಅಬ್ಬರವಿಲ್ಲ. ಆಗಾಗ್ಗೆ ಕೆಲ ಹೊತ್ತು ಮಾತ್ರ ಸುರಿದ ಮಳೆ ಬಳಿಕ ತಣ್ಣಗಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ರಭಸದಿಂದ ಇನ್ನು ಕೆಲ ಕಡೆ ಜಿಟಿಜಿಟಿಯಾಗಿ ಮಳೆ ಸುರಿದಿದೆ. ಜುಲೈ 14ರ ಅಂತ್ಯಕ್ಕೆ ಜಿಲ್ಲೆಯಲ್ಲಿ 18.03 ಸೆಂ.ಮೀ. ವಾಡಿಕೆ ಮಳೆಯಿದ್ದು ಈಗಾಗಲೇ 26 ಸೆಂ.ಮೀ. ಮಳೆ ಬಂದಿದೆ.</p>.<p>2.11 ಲಕ್ಷ ಹೆಕ್ಟೇರ್ ಬಿತ್ತನೆ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3.19 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಲಾಗಿದ್ದು ಇದುವರೆಗೆ 2.11 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.</p>.<p>ಗಂಗಾವತಿ, ಕಾರಟಗಿ ಭಾಗದಲ್ಲಿ ಅಧಿಕವಾಗಿ ಬೆಳೆಯುವ ಭತ್ತ ಜಿಲ್ಲೆಯಲ್ಲಿ 62 ಸಾವಿರ ಹೆಕ್ಟೇರ್ ಗುರಿ ಹೊಂದಿದ್ದರೂ ಈ ಬೆಳೆಯ ಕೃಷಿಗಾಗಿ ರೈತರು ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಹರಿಯುವ ನೀರಿನ ಮೇಲೆ ಅವಲಂಬನೆಯಾಗಿದ್ದಾರೆ. ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ನಿತ್ಯ ಉತ್ತಮ ಒಳಹರಿವು ಬರುತ್ತಿದೆ. ಇನ್ನು ಹಲವು ದಿನಗಳಲ್ಲಿ ಜಲಾಶಯ ಭರ್ತಿಯಾಗುವ ವಿಶ್ವಾಸವೂ ಇದ್ದು ಆಗಸ್ಟ್ ಮೊದಲ ವಾರದಲ್ಲಿ ಐಸಿಸಿ ಸಭೆ ನಡೆಸಿ ನೀರು ಹರಿಸಲು ಐಸಿಸಿ ಸಮಿತಿ ಚಿಂತನೆ ನಡೆಸಿದೆ.</p>.<p>ಗಂಗಾವತಿ ತಾಲ್ಲೂಕಿನ ಸಾಣಾಪುರ ಹಾಗೂ ಹಲವು ಭಾಗದಲ್ಲಿ ಕೆರೆ ನೀರು ಮತ್ತು ಪಂಪ್ಸೆಟ್ ಹೊಂದಿರುವವರು ಈಗಾಗಲೇ ಸಸಿಮಡಿಗಳನ್ನು ತಯಾರಿಸಿಕೊಂಡು ಭತ್ತ ನಾಟಿಯನ್ನೂ ಮಾಡಿದ್ದಾರೆ. ಉಳಿದವರು ಮತ್ತು ನೆರೆಯ ರಾಯಚೂರು ಜಿಲ್ಲೆಯ ರೈತರು ಮಳೆ ನೀರಿಗಾಗಿ ಎದುರು ನೋಡುತ್ತಿದ್ದಾರೆ. </p>.<p>ಜಿಲ್ಲೆಯಲ್ಲಿ ಅಧಿಕವಾಗಿ ಮೆಕ್ಕಜೋಳ (1.07 ಲಕ್ಷ ಹೆಕ್ಟೇರ್) ಗುರಿ ಮೀರಿ ಬಿತ್ತನೆ ಮಾಡಲಾಗಿದೆ. ತೊಗರಿ 18ರಿಂದ 20 ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿ ಹೊಂದಿದ್ದರೂ ಈಗಾಗಲೇ 25 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ. ಇದರ ಪ್ರಮಾಣ ಇನ್ನು ಕೆಲ ದಿನಗಳಲ್ಲಿ ಮತ್ತಷ್ಟು ಜಾಸ್ತಿಯಾಗುವ ನಿರೀಕ್ಷೆಯಿದೆ. ಹೆಸರು 15,411 ಹೆಕ್ಟೇರ್ ಇದ್ದರೂ ಈಗಾಗಲೇ 18,480 ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇಂಗಾ, ಸೂರ್ಯಕಾಂತಿ ಹಲವು ಕಡೆ ಬಿತ್ತನೆ ಕಾರ್ಯ ನಡೆಯುತ್ತಿದೆ.</p>.<p>ದ್ವಿದಳ ಧಾನ್ಯಗಳ ಬಿತ್ತನೆ ಗುರಿ 39,830 ಹೆಕ್ಟೇರ್ ಇದ್ದರೂ ವಾಸ್ತವದಲ್ಲಿ 44,928ರಷ್ಟು ಬಿತ್ತನೆ ಕಾರ್ಯವಾಗಿದೆ. ಎಣ್ಣೆಕಾಳುಗಳಾದ ಶೇಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು ಮತ್ತು ಔಡಲು 32,643 ಹೆಕ್ಟೇರ್ ಇದ್ದರೂ 9,925 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.</p>.<p> <strong>ಜಿಲ್ಲೆಯಲ್ಲಿ ಭಾರಿ ಬಿರುಸಾಗಿ ಮಳೆ ಸುರಿಯದಿದ್ದರೂ ವಾಡಿಕೆಗಿಂತಲೂ ಹೆಚ್ಚು ಬಂದಿದೆ. ಕೃಷಿ ಚಟುವಟಿಕೆ ಕಾರ್ಯವೂ ಚುರುಕು ಪಡೆದುಕೊಂಡಿದೆ. </strong></p><p><strong>-ರುದ್ರೇಶಪ್ಪ ಟಿ.ಎಸ್. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೊಪ್ಪಳ</strong></p>.<p>ಜೂನ್ನಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ ವಿವರ (ಸೆಂ.ಮೀ. ಗಳಲ್ಲಿ) ತಾಲ್ಲೂಕು;ವಾಡಿಕೆ;ವಾಸ್ತವ;ಹೆಚ್ಚಳ (ಶೇ) ಗಂಗಾವತಿ;7.12.13.31;87 ಕೊಪ್ಪಳ;8.33;14.17;70 ಕುಷ್ಟಗಿ;6.75;10.95;62 ಯಲಬುರ್ಗಾ;7.72;11.75;52 ಕಾರಟಗಿ;7.01;11.44;63 ಕುಕನೂರು;8.84;9.56;8 ಕನಕಗಿರಿ;8.10;12.42;53 </p>.<p> ಕುಸಿದ ಹತ್ತಿ ಬಿತ್ತನೆ ಕಳೆದ ವರ್ಷ ಹತ್ತಿಗೆ ವ್ಯಾಪಕ ರೋಗಬಾಧೆ ಕಾಣಿಸಿಕೊಂಡಿದ್ದರಿಂದ ಈ ಬಾರಿ ಹತ್ತಿ ಬಿತ್ತನೆ ಕುಸಿತವಾಗಿದೆ. ಒಟ್ಟು 11686 ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿಯಿದ್ದು ಇದುವರೆಗೆ 6110 ಮಾತ್ರ ಹತ್ತಿ ಬಿತ್ತನೆ ಮಾಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>