ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Rains | ಹಲವೆಡೆ ಅಬ್ಬರ, ಕೆಲವೆಡೆ ಜಿಟಿಜಿಟಿ ಮಳೆ

Published : 3 ಜೂನ್ 2024, 23:41 IST
Last Updated : 3 ಜೂನ್ 2024, 23:41 IST
ಫಾಲೋ ಮಾಡಿ
Comments
ವಿಜಯಪುರ ಜಿಲ್ಲೆ ಹರನಾಳದಲ್ಲಿ 12.2 ಸೆಂ.ಮೀ
ಮಳೆಹುಬ್ಬಳ್ಳಿ: ವಿಜಯಪುರ ಬಾಗಲಕೋಟೆ ಉತ್ತರ ಕನ್ನಡ ಗದಗ ಬಳ್ಳಾರಿ ವಿಜಯನಗರ ಜಿಲ್ಲೆ ಸೇರಿ ವಿವಿಧೆಡೆ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆಯವರೆಗೆ ಧಾರಾಕಾರ ಮಳೆಯಾಯಿತು. ವಿಜಯಪುರ ಜಿಲ್ಲೆಯ ಹರನಾಳದಲ್ಲಿ 12.2 ಸೆಂ.ಮೀ ಭಾರಿ ಮಳೆಯಾಗಿದೆ. ವಿಜಯಪುರದಲ್ಲಿ ಡೋಣಿ ನದಿ ಸೇರಿ ಹಳ್ಳ ಕೊಳ್ಳಗಳು ಉಕ್ಕಿ ಹರಿದಿವೆ. ಹದ ಮಳೆ ಆಗಿರುವುದರಿಂದ ಮುಂಗಾರು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಜಿಲ್ಲೆಯ ಹಿರೂರ 10.01 ಸೆಂ.ಮೀ ಕಣಕಾಲ 9.9 ಬರಟಗಿ 9.2 ಡೋಣೂರ 8.9 ರಾಂಪುರ 8.7ಅರಕೇರಿ 8.6 ಬಿದರಕುಂದಿ 8.5 ನಿಂಬಾಳ ಕೆ.ಡಿ 8.3 ಕವಡಿಮಟ್ಟಿ 8.3 ನಾದ ಕೆ.ಡಿ  8 ಸೆಂ.ಮೀ ಮಳೆ ದಾಖಲಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಹುನಗುಂದ ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಸುರಿದ ಮಳೆಯು ವಾತಾವರಣವನ್ನು ತಂಪಾಗಿಸಿತು. ಹುನಗುಂದ ತಾಲ್ಲೂಕಿನ ವಿವಿಧೆಡೆ ಬಿರುಸಿನ ಮಳೆಯಾಯಿತು.  ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬ್ಯಾಲಹಾಳು ಹನಸಿ ಮತ್ತು ಚಿಲಗೋಡು ಕೆರೆಗಳಿಗೆ ನೀರು ಹರಿದು ಬಂದಿದೆ.  ಬಳ್ಳಾರಿ ಜಿಲ್ಲೆಯ ತೋರಣಗಲ್ ಹೋಬಳಿಯ ಯು.ರಾಜಾಪುರ ಮತ್ತು ಮೆಟ್ರಿಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಸೇತುವೆ ಕೊಚ್ಚಿಹೋಗಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದೆ. ರಾಜಾಪುರ ಉಬ್ಬಳಗಂಡಿ ಕೆರೆರಾಂಪುರ ಗ್ರಾಮಗಳಲ್ಲಿ ಕಲಾ ಒಂದರಂತೆ ಒಟ್ಟು ಮೂರು ಮನೆಗಳಿಗೆ ಹಾನಿಯಾಗಿದೆ. ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಉತ್ತಮ ಮಳೆಯಾಯಿತು. ಮುಳಗುಂದ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿ ಗುಡುಗು ಸಹಿತ ಜೋರಾದ ಮಳೆ ಸುರಿಯಿತು. ಲಕ್ಷ್ಮೇಶ್ವರ ಭಾಗದಲ್ಲಿ ಜಿಟಿಜಿಟಿ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶಿರಸಿ ಸಿದ್ದಾಪುರ ಭಟ್ಕಳ ಭಾಗದಲ್ಲಿ ತುಂತುರು ಮಳೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT