ಮೈಸೂರು: ದೇವನೂರು ಬಡಾವಣೆಗಾಗಿ ಮುಡಾ ವಶಪಡಿಸಿಕೊಂಡಿದ್ದ, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಸೇರಿದ್ದ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರ ಜಮೀನಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಸ್ಥಳ ಮಹಜರು ನಡೆಸಿದರು.
ಲೋಕಾಯುಕ್ತ ಎಸ್.ಪಿ. ಉದೇಶ್ ಅವರೊಂದಿಗೆ ಕಂದಾಯ, ಭೂ ದಾಖಲೆಗಳ ವಿಭಾಗ, ಮುಡಾ ಅಧಿಕಾರಿಗಳು ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ಇದ್ದರು.