<p><strong>ಮೈಸೂರು:</strong> ‘ರಾಜ್ಯ ಕಾಂಗ್ರೆಸ್ ಸರ್ಕಾರ ಬೀದಿಯಲ್ಲಿ ತಮಟೆ ಹೊಡೆಯುವುದನ್ನು ನಿಲ್ಲಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರೆ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಅನುದಾನ ಕೊಡಿಸಲು ನಾನೇ ಮುಂದೆ ನಿಲ್ಲುತ್ತೇನೆ’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.</p>.<p>‘ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿಲ್ಲ. ರಾಜ್ಯ ಸರ್ಕಾರವೇ ಅನ್ಯಾಯ ಮಾಡಿಕೊಳ್ಳುತ್ತಿದೆ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.</p>.<p>‘ಕರ್ನಾಟಕದ ಪರ ಕೇಂದ್ರದ ಇಲಾಖೆಗಳಲ್ಲಿ ಧ್ಬನಿ ಎತ್ತಿ ಕೆಲಸ ಮಾಡಲು ಸಿದ್ಧ. ಸಂಸತ್ ಕಲಾಪಕ್ಕೂ ಮುನ್ನ ಕಾಟಾಚಾರಕ್ಕೆ ರಾಜ್ಯದ ಸಂಸದರ ಸಭೆ ಕರೆದು ಮನವಿ ಸಲ್ಲಿಸುತ್ತಾರೆ. ಅವರಿಂದ ಅನುದಾನ ಕೊಡಿಸಲು ಸಾಧ್ಯವೇ? ಇಲಾಖಾವಾರು ಮಂತ್ರಿಗಳನ್ನು ಖುದ್ದು ಭೇಟಿಯಾಗಬೇಕು. ಆಗ ಕೆಲಸ ಆಗುತ್ತದೆ. ಆದರೆ, ನಾನು ಕರ್ನಾಟಕಕ್ಕೆ ಬರುವುದನ್ನೇ ಸಹಿಸದವರಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ? ’ ಎಂದು ಕೇಳಿದರು.</p>.<p>‘ನಮ್ಮ ತೆರಿಗೆ– ನಮ್ಮ ಹಕ್ಕು ಎಂದು ಕೇಂದ್ರವನ್ನು ನಿಂದಿಸಿದರೆ ಕೆಲಸವಾಗದು. ನಡವಳಿಕೆ ಬದಲಿಸಿಕೊಳ್ಳಿ, ಸಣ್ಣತನ ಬಿಡಿ’ ಎಂದರು.</p>.<p><strong>ಆರೋಪ ಸರಿಯಲ್ಲ:</strong></p>.<p>‘ಕೇಂದ್ರ ಬಜೆಟ್ ಕೇವಲ ಎರಡು ರಾಜ್ಯಗಳ ಬಜೆಟ್ ಎಂಬ ಆರೋಪ ಸರಿಯಲ್ಲ. ಆ ಬಜೆಟ್ ದೇಶದ ಸಮಗ್ರ ಅಭಿವೃದ್ಧಿ ಸಲುವಾಗಿಯೇ ಹೊರತು ರಾಜ್ಯಗಳ ಅಭಿವೃದ್ಧಿಗಲ್ಲ. ಆಂಧ್ರ ವಿಭಜನೆ ಆದಾಗಲೇ ಯುಪಿಎ ಸರ್ಕಾರ ಕೇಂದ್ರದಲ್ಲಿ ವಿಶೇಷ ಪ್ಯಾಕೇಜ್ಗೆ ಕಾಯ್ದೆ ತಂದಿತ್ತು. ಈಗ ಆಂಧ್ರದಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ₹ 15 ಸಾವಿರ ಕೋಟಿ ನೀಡಿದೆ. ಕೋಸಿ ನದಿ ಪ್ರವಾಹ ನಿಯಂತ್ರಣಕ್ಕೆ 20ಕ್ಕೂ ಹೆಚ್ಚು ಬ್ಯಾರೇಜ್ಗಳ ನಿರ್ಮಾಣಕ್ಕೆ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡಿದೆ’ ಎಂದು ಸಮರ್ಥಿಸಿಕೊಂಡರು.</p>.<p>‘ಈ ವರ್ಷ ಕರ್ನಾಟಕಕ್ಕೆ ತೆರಿಗೆ ಪಾಲಿನ ₹45,485 ಕೋಟಿ ಹಾಗೂ ಅನುದಾನದ ರೂಪದಲ್ಲಿ ₹15 ಸಾವಿರ ಕೋಟಿ ಸೇರಿ ಒಟ್ಟು ₹60 ಸಾವಿರ ಕೋಟಿ ಬರಲಿದೆ’ ಎಂದು ಮಾಹಿತಿ ನೀಡಿದರು.</p>.<p>‘ಬೆಂಗಳೂರು ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ₹3 ಸಾವಿರ ಕೋಟಿ ಅನುದಾನ ನೀಡಲು ಕೇಂದ್ರ ಸಿದ್ಧವಿದೆ. ಆದರೆ, ಉಳಿದ ₹26 ಸಾವಿರ ಕೋಟಿ ಭರಿಸಲು ರಾಜ್ಯ ಸರ್ಕಾರದ ಬಳಿ ಹಣವಿದೆಯೇ?’ ಎಂದು ಪ್ರಶ್ನಿಸಿದರು.</p>.<p>‘ಜೂನ್ನಲ್ಲಿ ಸರ್ಕಾರವೇ ಅಮಾನತು ಮಾಡಿದ್ದ ಕಲ್ಲೇಶ ಎಂಬ ಅಧಿಕಾರಿ ಮುಂದಿಟ್ಟುಕೊಂಡು ಇ.ಡಿ. ವಿರುದ್ಧ ದೂರು ನೀಡಿದ್ದೀರಿ. ₹40 ಕೋಟಿ ಅನುದಾನ ಬಳಕೆಯ ಲೆಕ್ಕ ನೀಡದ್ದಕ್ಕೆ ಆ ಅಧಿಕಾರಿ ಬಗ್ಗೆ ಕೇಂದ್ರ ಸರ್ಕಾರ ಎಂಟು ಪತ್ರ ಬರೆದಿತ್ತು. ಇಂಥವರನ್ನು ಸಮರ್ಥಿಸಿಕೊಂಡಿದ್ದೀರಿ. ಕಾನೂನು ಸಲಹೆಗಾರ ಪೊನ್ನಣ್ಣ ಸರಿಯಾಗಿ ಸಲಹೆ ನೀಡಲಿಲ್ಲವೇ’ ಎಂದು ಪ್ರಶ್ನಿಸಿದರು.</p>.<p><strong>ಕೈಗಾರಿಕೆಗಳಿಗೆ ಮರು ಹೂಡಿಕೆ:</strong></p>.<p>‘ಎಚ್ಎಂಟಿ, ಭದ್ರಾವತಿ ಕಾರ್ಖಾನೆ ಸೇರಿದಂತೆ ದೇಶದ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಲ್ಲಿ ಮರುಹೂಡಿಕೆ ಮೂಲಕ ಅವುಗಳಿಗೆ ಮರುಜೀವ ನೀಡುವ ಕೆಲಸ ಮಾಡುತ್ತೇನೆ. ಎಚ್ಎಂಟಿ ಕಾರ್ಖಾನೆಗೆ ನಾನು ಒಮ್ಮೆ ಭೇಟಿ ನೀಡಿದ ಬಳಿಕ ಅದರ ಷೇರು ಮೌಲ್ಯ ₹45ರಿಂದ ₹95ಕ್ಕೆ ಏರಿದೆ. ಅಂತೆಯೇ, ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಸಾರ್ವಜನಿಕ ಉದ್ದಿಮೆಗಳಿಗೆ ಅಗತ್ಯ ಅನುದಾನ ನೀಡಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವೆ’ ಎಂದು ಭರವಸೆ ನೀಡಿದರು.</p>.<p><strong>ಆರೂವರೆ ಕೋಟಿ ಜನರ ಮುಖ್ಯಮಂತ್ರಿ:</strong></p>.<p>‘ಸಿದ್ದರಾಮಯ್ಯ ಹಿಂದುಳಿದ ವರ್ಗದವರಿಗಷ್ಟೆ ಸಿಎಂ ಅಲ್ಲ; ಆರೂವರೆ ಕೋಟಿ ಕನ್ನಡಿಗರ ಮುಖ್ಯಮಂತ್ರಿ. ಅವರ ವಿರುದ್ಧ ಯಾರು ಅಸೂಯೆ ಪಡುತ್ತಾರೆ? ನಿಮ್ಮಲ್ಲೇ ಟವಲ್ ಹಾಸಿಕೊಂಡು ಕೂತವರೇ ಚಿತಾವಣೆ ಮಾಡುತ್ತಿದ್ದಾರೆ. 15-20 ವರ್ಷಗಳ ಹಿಂದಿದ್ದ ಸಿದ್ದರಾಮಯ್ಯ ಈಗ ಇಲ್ಲ’ ಎಂದು ಲೇವಡಿ ಮಾಡಿದರು.</p>.<p><strong>‘ಮೇಕೆದಾಟು: ಕೇಂದ್ರಕ್ಕೆ ಮನವರಿಕೆ’</strong> </p><p>‘ಮೇಕೆದಾಟು ಅಣೆಕಟ್ಟೆ ನಿರ್ಮಾಣ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೋಮವಾರ ರಾಜ್ಯಸಭೆಯಲ್ಲಿ ಧ್ವನಿ ಎತ್ತಲಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು. ‘ಕೆಲವು ದಿನದ ಹಿಂದೆ ನಾನು ಹಾಗೂ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದೆವು. ಆಗ ಗೌಡರು ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ. ಜಲಶಕ್ತಿ ಸಚಿವರೊಂದಿಗೂ ಮಾತನಾಡಿದ್ದು ಅವರು ಶೀಘ್ರವೇ ಸಭೆ ಕರೆಯುವ ನಿರೀಕ್ಷೆ ಇದೆ. ಆದರೆ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಎಂದಾದರೂ ಕಾವೇರಿ ಬಗ್ಗೆ ಮಾತನಾಡಿದ್ದಾರೆಯೇ’ ಎಂದು ಪ್ರಶ್ನಿಸಿದರು. ‘ಮೇಕೆದಾಟು ಅಣೆಕಟ್ಟೆ ನಿರ್ಮಾಣ ಆಗಬೇಕು ಎನ್ನುವುದು ನಮ್ಮ ಆಶಯ. ರಾಜ್ಯ ಕಾಂಗ್ರೆಸ್ ನಾಯಕರು ‘ಇಂಡಿಯಾ’ ಒಕ್ಕೂಟದ ಭಾಗವಾದ ತಮಿಳುನಾಡಿನ ಸ್ಟಾಲಿನ್ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿ’ ಎಂದು ಸಲಹೆ ನೀಡಿದರು. </p>.<p><strong>ನೀವೇನು ಹರಿಶ್ಚಂದ್ರರಾ?: ಸಿಎಂಗೆ ಟೀಕೆ</strong> </p><p>‘ನನ್ನ ಮೇಲೆ ಒಂದು ಕಪ್ಪುಚುಕ್ಕೆಯೂ ಇಲ್ಲ ಎಂದು ಸಿದ್ದರಾಮಯ್ಯ ಬೀಗುತ್ತಾರೆ. ರೀಡು ಕಥೆ ಕೆಂಪಣ್ಣ ಆಯೋಗದ ವರದಿ ಏನಾಯಿತು? ನೀವೇನು ಹರಿಶ್ಚಂದ್ರರಾ? ಜಾಹೀರಾತು ಕೊಟ್ಟು ಸಾಚಾತನ ಸಾಬೀತುಪಡಿಸಿಕೊಳ್ಳುವ ಪರಿಸ್ಥಿತಿ ಅವರಿಗೆ ಬರಬಾರದಿತ್ತು’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. </p>.<p><strong>ಕುರ್ಚಿ ಉಳಿಸಿಕೊಳ್ಳಲು ಆಯೋಗ ರಚನೆ</strong> </p><p>‘ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ವಿಚಾರಣಾ ಆಯೋಗ ರಚಿಸಿದ್ದಾರಷ್ಟೆ. ದೇಸಾಯಿ ಆಯೋಗಕ್ಕೆ ಅಕ್ರಮದ ದಾಖಲೆ ಕೊಟ್ಟು ಅದನ್ನು ನೆಕ್ಕುತ್ತಾ ಕೂರಬೇಕಷ್ಟೆ’ ಎಂದು ಕುಮಾರಸ್ವಾಮಿ ಟೀಕಿಸಿದರು. ‘ನಾವು ರಾಜೀನಾಮೆ ಕೇಳಿದ ಮಾತ್ರಕ್ಕೆ ಸಿದ್ದರಾಮಯ್ಯ ಕೊಡುವುದಿಲ್ಲ. ಕಾನೂನಾತ್ಮಕ ಹೋರಾಟ ಮುಂದುವರಿಸುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ರಾಜ್ಯ ಕಾಂಗ್ರೆಸ್ ಸರ್ಕಾರ ಬೀದಿಯಲ್ಲಿ ತಮಟೆ ಹೊಡೆಯುವುದನ್ನು ನಿಲ್ಲಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರೆ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಅನುದಾನ ಕೊಡಿಸಲು ನಾನೇ ಮುಂದೆ ನಿಲ್ಲುತ್ತೇನೆ’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.</p>.<p>‘ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿಲ್ಲ. ರಾಜ್ಯ ಸರ್ಕಾರವೇ ಅನ್ಯಾಯ ಮಾಡಿಕೊಳ್ಳುತ್ತಿದೆ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.</p>.<p>‘ಕರ್ನಾಟಕದ ಪರ ಕೇಂದ್ರದ ಇಲಾಖೆಗಳಲ್ಲಿ ಧ್ಬನಿ ಎತ್ತಿ ಕೆಲಸ ಮಾಡಲು ಸಿದ್ಧ. ಸಂಸತ್ ಕಲಾಪಕ್ಕೂ ಮುನ್ನ ಕಾಟಾಚಾರಕ್ಕೆ ರಾಜ್ಯದ ಸಂಸದರ ಸಭೆ ಕರೆದು ಮನವಿ ಸಲ್ಲಿಸುತ್ತಾರೆ. ಅವರಿಂದ ಅನುದಾನ ಕೊಡಿಸಲು ಸಾಧ್ಯವೇ? ಇಲಾಖಾವಾರು ಮಂತ್ರಿಗಳನ್ನು ಖುದ್ದು ಭೇಟಿಯಾಗಬೇಕು. ಆಗ ಕೆಲಸ ಆಗುತ್ತದೆ. ಆದರೆ, ನಾನು ಕರ್ನಾಟಕಕ್ಕೆ ಬರುವುದನ್ನೇ ಸಹಿಸದವರಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ? ’ ಎಂದು ಕೇಳಿದರು.</p>.<p>‘ನಮ್ಮ ತೆರಿಗೆ– ನಮ್ಮ ಹಕ್ಕು ಎಂದು ಕೇಂದ್ರವನ್ನು ನಿಂದಿಸಿದರೆ ಕೆಲಸವಾಗದು. ನಡವಳಿಕೆ ಬದಲಿಸಿಕೊಳ್ಳಿ, ಸಣ್ಣತನ ಬಿಡಿ’ ಎಂದರು.</p>.<p><strong>ಆರೋಪ ಸರಿಯಲ್ಲ:</strong></p>.<p>‘ಕೇಂದ್ರ ಬಜೆಟ್ ಕೇವಲ ಎರಡು ರಾಜ್ಯಗಳ ಬಜೆಟ್ ಎಂಬ ಆರೋಪ ಸರಿಯಲ್ಲ. ಆ ಬಜೆಟ್ ದೇಶದ ಸಮಗ್ರ ಅಭಿವೃದ್ಧಿ ಸಲುವಾಗಿಯೇ ಹೊರತು ರಾಜ್ಯಗಳ ಅಭಿವೃದ್ಧಿಗಲ್ಲ. ಆಂಧ್ರ ವಿಭಜನೆ ಆದಾಗಲೇ ಯುಪಿಎ ಸರ್ಕಾರ ಕೇಂದ್ರದಲ್ಲಿ ವಿಶೇಷ ಪ್ಯಾಕೇಜ್ಗೆ ಕಾಯ್ದೆ ತಂದಿತ್ತು. ಈಗ ಆಂಧ್ರದಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ₹ 15 ಸಾವಿರ ಕೋಟಿ ನೀಡಿದೆ. ಕೋಸಿ ನದಿ ಪ್ರವಾಹ ನಿಯಂತ್ರಣಕ್ಕೆ 20ಕ್ಕೂ ಹೆಚ್ಚು ಬ್ಯಾರೇಜ್ಗಳ ನಿರ್ಮಾಣಕ್ಕೆ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡಿದೆ’ ಎಂದು ಸಮರ್ಥಿಸಿಕೊಂಡರು.</p>.<p>‘ಈ ವರ್ಷ ಕರ್ನಾಟಕಕ್ಕೆ ತೆರಿಗೆ ಪಾಲಿನ ₹45,485 ಕೋಟಿ ಹಾಗೂ ಅನುದಾನದ ರೂಪದಲ್ಲಿ ₹15 ಸಾವಿರ ಕೋಟಿ ಸೇರಿ ಒಟ್ಟು ₹60 ಸಾವಿರ ಕೋಟಿ ಬರಲಿದೆ’ ಎಂದು ಮಾಹಿತಿ ನೀಡಿದರು.</p>.<p>‘ಬೆಂಗಳೂರು ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ₹3 ಸಾವಿರ ಕೋಟಿ ಅನುದಾನ ನೀಡಲು ಕೇಂದ್ರ ಸಿದ್ಧವಿದೆ. ಆದರೆ, ಉಳಿದ ₹26 ಸಾವಿರ ಕೋಟಿ ಭರಿಸಲು ರಾಜ್ಯ ಸರ್ಕಾರದ ಬಳಿ ಹಣವಿದೆಯೇ?’ ಎಂದು ಪ್ರಶ್ನಿಸಿದರು.</p>.<p>‘ಜೂನ್ನಲ್ಲಿ ಸರ್ಕಾರವೇ ಅಮಾನತು ಮಾಡಿದ್ದ ಕಲ್ಲೇಶ ಎಂಬ ಅಧಿಕಾರಿ ಮುಂದಿಟ್ಟುಕೊಂಡು ಇ.ಡಿ. ವಿರುದ್ಧ ದೂರು ನೀಡಿದ್ದೀರಿ. ₹40 ಕೋಟಿ ಅನುದಾನ ಬಳಕೆಯ ಲೆಕ್ಕ ನೀಡದ್ದಕ್ಕೆ ಆ ಅಧಿಕಾರಿ ಬಗ್ಗೆ ಕೇಂದ್ರ ಸರ್ಕಾರ ಎಂಟು ಪತ್ರ ಬರೆದಿತ್ತು. ಇಂಥವರನ್ನು ಸಮರ್ಥಿಸಿಕೊಂಡಿದ್ದೀರಿ. ಕಾನೂನು ಸಲಹೆಗಾರ ಪೊನ್ನಣ್ಣ ಸರಿಯಾಗಿ ಸಲಹೆ ನೀಡಲಿಲ್ಲವೇ’ ಎಂದು ಪ್ರಶ್ನಿಸಿದರು.</p>.<p><strong>ಕೈಗಾರಿಕೆಗಳಿಗೆ ಮರು ಹೂಡಿಕೆ:</strong></p>.<p>‘ಎಚ್ಎಂಟಿ, ಭದ್ರಾವತಿ ಕಾರ್ಖಾನೆ ಸೇರಿದಂತೆ ದೇಶದ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಲ್ಲಿ ಮರುಹೂಡಿಕೆ ಮೂಲಕ ಅವುಗಳಿಗೆ ಮರುಜೀವ ನೀಡುವ ಕೆಲಸ ಮಾಡುತ್ತೇನೆ. ಎಚ್ಎಂಟಿ ಕಾರ್ಖಾನೆಗೆ ನಾನು ಒಮ್ಮೆ ಭೇಟಿ ನೀಡಿದ ಬಳಿಕ ಅದರ ಷೇರು ಮೌಲ್ಯ ₹45ರಿಂದ ₹95ಕ್ಕೆ ಏರಿದೆ. ಅಂತೆಯೇ, ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಸಾರ್ವಜನಿಕ ಉದ್ದಿಮೆಗಳಿಗೆ ಅಗತ್ಯ ಅನುದಾನ ನೀಡಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವೆ’ ಎಂದು ಭರವಸೆ ನೀಡಿದರು.</p>.<p><strong>ಆರೂವರೆ ಕೋಟಿ ಜನರ ಮುಖ್ಯಮಂತ್ರಿ:</strong></p>.<p>‘ಸಿದ್ದರಾಮಯ್ಯ ಹಿಂದುಳಿದ ವರ್ಗದವರಿಗಷ್ಟೆ ಸಿಎಂ ಅಲ್ಲ; ಆರೂವರೆ ಕೋಟಿ ಕನ್ನಡಿಗರ ಮುಖ್ಯಮಂತ್ರಿ. ಅವರ ವಿರುದ್ಧ ಯಾರು ಅಸೂಯೆ ಪಡುತ್ತಾರೆ? ನಿಮ್ಮಲ್ಲೇ ಟವಲ್ ಹಾಸಿಕೊಂಡು ಕೂತವರೇ ಚಿತಾವಣೆ ಮಾಡುತ್ತಿದ್ದಾರೆ. 15-20 ವರ್ಷಗಳ ಹಿಂದಿದ್ದ ಸಿದ್ದರಾಮಯ್ಯ ಈಗ ಇಲ್ಲ’ ಎಂದು ಲೇವಡಿ ಮಾಡಿದರು.</p>.<p><strong>‘ಮೇಕೆದಾಟು: ಕೇಂದ್ರಕ್ಕೆ ಮನವರಿಕೆ’</strong> </p><p>‘ಮೇಕೆದಾಟು ಅಣೆಕಟ್ಟೆ ನಿರ್ಮಾಣ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೋಮವಾರ ರಾಜ್ಯಸಭೆಯಲ್ಲಿ ಧ್ವನಿ ಎತ್ತಲಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು. ‘ಕೆಲವು ದಿನದ ಹಿಂದೆ ನಾನು ಹಾಗೂ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದೆವು. ಆಗ ಗೌಡರು ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ. ಜಲಶಕ್ತಿ ಸಚಿವರೊಂದಿಗೂ ಮಾತನಾಡಿದ್ದು ಅವರು ಶೀಘ್ರವೇ ಸಭೆ ಕರೆಯುವ ನಿರೀಕ್ಷೆ ಇದೆ. ಆದರೆ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಎಂದಾದರೂ ಕಾವೇರಿ ಬಗ್ಗೆ ಮಾತನಾಡಿದ್ದಾರೆಯೇ’ ಎಂದು ಪ್ರಶ್ನಿಸಿದರು. ‘ಮೇಕೆದಾಟು ಅಣೆಕಟ್ಟೆ ನಿರ್ಮಾಣ ಆಗಬೇಕು ಎನ್ನುವುದು ನಮ್ಮ ಆಶಯ. ರಾಜ್ಯ ಕಾಂಗ್ರೆಸ್ ನಾಯಕರು ‘ಇಂಡಿಯಾ’ ಒಕ್ಕೂಟದ ಭಾಗವಾದ ತಮಿಳುನಾಡಿನ ಸ್ಟಾಲಿನ್ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿ’ ಎಂದು ಸಲಹೆ ನೀಡಿದರು. </p>.<p><strong>ನೀವೇನು ಹರಿಶ್ಚಂದ್ರರಾ?: ಸಿಎಂಗೆ ಟೀಕೆ</strong> </p><p>‘ನನ್ನ ಮೇಲೆ ಒಂದು ಕಪ್ಪುಚುಕ್ಕೆಯೂ ಇಲ್ಲ ಎಂದು ಸಿದ್ದರಾಮಯ್ಯ ಬೀಗುತ್ತಾರೆ. ರೀಡು ಕಥೆ ಕೆಂಪಣ್ಣ ಆಯೋಗದ ವರದಿ ಏನಾಯಿತು? ನೀವೇನು ಹರಿಶ್ಚಂದ್ರರಾ? ಜಾಹೀರಾತು ಕೊಟ್ಟು ಸಾಚಾತನ ಸಾಬೀತುಪಡಿಸಿಕೊಳ್ಳುವ ಪರಿಸ್ಥಿತಿ ಅವರಿಗೆ ಬರಬಾರದಿತ್ತು’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. </p>.<p><strong>ಕುರ್ಚಿ ಉಳಿಸಿಕೊಳ್ಳಲು ಆಯೋಗ ರಚನೆ</strong> </p><p>‘ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ವಿಚಾರಣಾ ಆಯೋಗ ರಚಿಸಿದ್ದಾರಷ್ಟೆ. ದೇಸಾಯಿ ಆಯೋಗಕ್ಕೆ ಅಕ್ರಮದ ದಾಖಲೆ ಕೊಟ್ಟು ಅದನ್ನು ನೆಕ್ಕುತ್ತಾ ಕೂರಬೇಕಷ್ಟೆ’ ಎಂದು ಕುಮಾರಸ್ವಾಮಿ ಟೀಕಿಸಿದರು. ‘ನಾವು ರಾಜೀನಾಮೆ ಕೇಳಿದ ಮಾತ್ರಕ್ಕೆ ಸಿದ್ದರಾಮಯ್ಯ ಕೊಡುವುದಿಲ್ಲ. ಕಾನೂನಾತ್ಮಕ ಹೋರಾಟ ಮುಂದುವರಿಸುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>